#Exclusive News
-

ಹುಬ್ಬಳ್ಳಿಯ ಹೋಟೆಲ್ನಲ್ಲಿ ವೇಶ್ಯಾವಾಟಿಕೆ ದಂಧೆ; ಮಹಿಳೆಯರ ರಕ್ಷಣೆ..!
ಹುಬ್ಬಳ್ಳಿ: ವೇಶ್ಯಾವಾಟಿಕೆ ನಡೆಯುತ್ತಿದ್ದ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಹುಬ್ಬಳ್ಳಿಯ ಹೊಸೂರು ವೃತ್ತದ ಬಳಿಯ ಪಾರಿಜಾತ ಲಾಡ್ಜ್ ಮೇಲೆ ದಾಳಿ ಮಾಡಿ ಅಂತರಾಜ್ಯದ ಐವರು ಮಹಿಳೆಯರು ಹಾಗೂ…
Read More » -

ಶಾಲಿನಿ ರಜನೀಶ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ.. MLC ರವಿಕುಮಾರ್ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿ..!
ಬೆಂಗಳೂರು: ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಎಂಎಲ್ಸಿ ಎನ್. ರವಿ ಕುಮಾರ್ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ…
Read More » -

ಪಾಲಿಕೆ ಅನುಮತಿ ಪಡೆಯದ ಕಟ್ಟಡಗಳ ತೆರವು..!
ಬೆಂಗಳೂರು: ಸಿಲಿಕಾನ್ ಸಿಟಿ ಮಂದಿ ನೋಡಲೇಬೇಕಾದ ಸುದ್ದಿ ಇದು. ಕಟ್ಟಿದ ಮನೆಗಳಿಗೆ ಪಾಲಿಕೆ ಅನುಮತಿ ಇದ್ಯಾ..? ಪಾಲಿಕೆ ಅನುಮತಿ ಇಲ್ಲ ಅಂದ್ರೆ ಜೆಸಿಬಿ ತಂದು ಡೆಮಾಲಿಷ್ಗೆ ಬೃಹತ್…
Read More » -

ಬೆಂಗಳೂರು ಗ್ರಾಮಾಂತರ, ಬಾಗೇಪಲ್ಲಿ ಹೆಸರು ಬದಲಾವಣೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಮನಗರ ಹೆಸರು ಬದಲಾವಣೆ ಬಳಿಕ ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆಯಾಗಿ ಬದಲಾವಣೆ ಮಾಡಲು ಇಂದಿನ ಸಚಿವ…
Read More » -

WACIA ಅಧ್ಯಕ್ಷರಾಗಿ ಎಸ್ ಚಂದ್ರಶೇಖರನ್ ಆಯ್ಕೆ
ವೈಟ್ ಫಿಲ್ಡ್ ಏರಿಯಾ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಎಸ್.ಚಂದ್ರಶೇಖರನ್ ಆಯ್ಕೆಯಾಗಿದ್ದಾರೆ 2025-26ನೇ ಸಾಲಿನ ಅಧ್ಯಕ್ಷರಾಗಿ ಎಸ್.ಚಂದ್ರಶೇಖರನ್ ಆಯ್ಕೆಯಾಗಿದ್ದಾರೆ. ಚುನಾಯಿತ ಅಧ್ಯಕ್ಷರಾಗಿ ಶ್ರೀನಿವಾಸ್ ಕುಮಾರ್ ಸಿ,…
Read More » -

JDSಗೆ ಸ್ವಂತ ಶಕ್ತಿಯಿಂದ ಅಧಿಕಾರಕ್ಕೇರಲು ಸಾಧ್ಯವೇ ಇಲ್ಲ: ಸಿ.ಎಂ ವ್ಯಂಗ್ಯ
ನಮ್ಮ ಸರ್ಕಾರ ಬಿದ್ದೋಗತ್ತೆ ಅಂತ ಸೋತ ಗಿರಾಕಿಗಳು ಹೇಳುತ್ತಿದ್ದಾರೆ. ನಮ್ಮ ಸರ್ಕಾರ ಐದು ವರ್ಷ ಬಂಡೆ ರೀತಿ ಇರತ್ತೆ. 2028 ರಲ್ಲೂ ನಾವೇ ಗೆದ್ದು ಅಧಿಕಾರಕ್ಕೆ ಬರ್ತೀವಿ…
Read More » -

ಭೂಗಳ್ಳರ ವಿರುದ್ದ ಬೆಂಗಳೂರು ನಗರ ಜಿಲ್ಲಾಡಳಿತ ಸಮರ
ಬೆಂಗಳೂರು: ಭೂಗಳ್ಳರ ವಿರುದ್ದ ಬೆಂಗಳೂರು ನಗರ ಜಿಲ್ಲಾಡಳಿತ ಸಮರ ಸಾರಿದೆ. ಬೆಂಗಳೂರು ದಕ್ಷಿಣ ಹಾಗೂ ಯಲಹಂಕ ಸುತ್ತಮುತ್ತ ಜಿಲ್ಲಾಡಳಿತ ಭರ್ಜರಿ ಒತ್ತುವರಿ ತೆರವು ಕಾರ್ಯಾಚರಣೆ ಮಾಡಿದೆ. ಜಿಲ್ಲಾಧಿಕಾರಿ…
Read More » -

ಎಸ್ಸಿ ಸಮೀಕ್ಷೆ ನಡೆಸದಿದ್ರೂ ಮನೆ ಗೋಡೆಗೆ ಸ್ಟಿಕ್ಕರ್ – ಆಕ್ಷೇಪ
ಬೆಂಗಳೂರು: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಪರಿಶಿಷ್ಟ ಜಾತಿಗಳ ಸಮಗ್ರ ಸರ್ವೆ ನಡೆಸಲಾಗುತ್ತಿದೆ. ಆದರೆ ಬೆಂಗಳೂರಿನ ಕೆಲ ಕಡೆ ಬಿಬಿಎಂಪಿ ಅಧಿಕಾರಿಗಳು ಸರಿಯಾಗಿ ಸರ್ವೇ ನಡೆಸದೇ, ಸಮೀಕ್ಷೆ ಪೂರ್ಣಗೊಳಿಸಿರುವುದಾಗಿ…
Read More » -

ಬೆಂಗಳೂರಿಗೆ ಹೊಸ ಕ್ರಿಕೆಟ್ ಸ್ಟೇಡಿಯಂ
ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಪ್ರಕರಣದಿಂದ ಎಚ್ಚೆತ್ತುಕೊಂಡಿರೋ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಮತ್ತೊಂದು ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಮುಂದಾಗಿದೆ. ಸರ್ಕಾರ ಕ್ರಿಕೆಟ್ ಸ್ಟೇಡಿಯಂ ಅಗತ್ಯ ಇರುವ 50…
Read More » -

ಆಟೋ ಚಾಲಕರೇ ಗಮನಿಸಿ.. ಗಮನಿಸಿ
ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ನಿತ್ಯ ಲಕ್ಷಾಂತರ ಜನ ಆಟೋ ಪ್ರಯಾಣವನ್ನೇ ನೆಚ್ಚಿಕೊಂಡಿದ್ದಾರೆ. ನಗರದಲ್ಲಿ ಆಟೋ ಚಾಲಕರು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಾರೆ ಎನ್ನುವ ದೊಡ್ಡಮಟ್ಟದ ಆಕ್ರೋಶವಿದೆ.…
Read More » -

ನಿನ್ನೆ ನಮ್ಮ ದೋಸ್ತ ಕರೆ ಮಾಡಿದ್ದ..ನಾಡಿದ್ದು ಹೋಗಿ ಭೇಟಿ ಆಗ್ತೀನಿ- ಬಿಆರ್ ಪಾಟೀಲ್ ಕುತೂಹಲ
ಕಲಬುರಗಿ : ಮಂತ್ರಿ ಸ್ಥಾನ ಸಿಕ್ಕಿಲ್ಲ ಅಂತಾ ಅಸಮಾಧಾನಗೊಂಡಿರುವ ಹಿರಿಯ ಶಾಸಕ ಬಿ.ಆರ್. ಪಾಟೀಲ್ ರಾಜ್ಯ ಸರ್ಕಾರದ ವಿರುದ್ಧ ದಿನಕ್ಕೊಂದು ಆರೋಪ ಮಾಡ್ತಿದ್ದಾರೆ. ಶಾಸಕ ರಾಜು ಕಾಗೆ…
Read More » -

ಕಾಂಗ್ರೆಸ್ ಶಾಸಕ ರಾಜೂ ಕಾಗೆ ರಾಜೀನಾಮೆ ಸುಳಿವು
ಬಿ ಆರ್ ಪಾಟೀಲ್ ಆಡಿಯೋ ವೈರಲ್ ಬೆನ್ನಲ್ಲೇ ಅತ್ತ ಕಾಗವಾಡ ಶಾಸಕ ರಾಜು ಕಾಗೆ ಸಹ ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಬಿ…
Read More » -

ಚಕ್ರವರ್ತಿ ಸೂಲಿಬೆಲೆ ಸುಳ್ಳಿನ ಚಕ್ರವರ್ತಿ – ಸಚಿವೆ ಹೆಬ್ಬಾಳ್ಕರ್ ಆಕ್ರೋಶ
ಚಕ್ರವರ್ತಿ ಸೂಲಿಬೆಲೆ ಒಬ್ಬ ಸುಳ್ಳಿನ ಚಕ್ರವರ್ತಿ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆರೋಪ ಮಾಡಿದ್ದಾರೆ. ಕುಂದಾಪುರದಲ್ಲಿ ಚಕ್ರವರ್ತಿ ಸೂಲಿಬೆಲೆ ಉಪನ್ಯಾಸಕ್ಕೆ ಎನ್ಎಸ್ ಯುಐ ಅಕ್ಷೇಪ ವ್ಯಕ್ತಪಡಿಸಿರುವ ಕುರಿತು…
Read More » -

ತುಮಕೂರು ಜಿಲ್ಲೆಯ 11 ಸಬ್ ರಿಜಿಸ್ಟ್ರಾರ್ ಕಚೇರಿಗಳ ಮೇಲೆ ಲೋಕಾ ದಾಳಿ
ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಭಾರಿ ಭ್ರಷ್ಟಾಚಾರ ಆರೋಪ ಹಿನ್ನೆಲೆಯಲ್ಲಿ ಏಕಕಾಲಕ್ಕೆ ತುಮಕೂರು ಜಿಲ್ಲೆಯ 11 ಸಬ್ ರಿಜಿಸ್ಟ್ರಾರ್ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ತುಮಕೂರು, ಗುಬ್ಬಿ,…
Read More » -

ಬೈರತಿಯ ನಕಲಿ ಡಾಕ್ಟರ್ ಪ್ರಮೋದ್ ಎಸ್ಕೇಪ್
ಬೆಂಗಳೂರಿನ ಭೈರತಿಯಲ್ಲಿ ಸಂಜೀವಿನಿ ಹೆಲ್ತ್ ಕ್ಲಿನಿಕ್ ಇಟ್ಟುಕೊಂಡಿರುವ ನಕಲಿ ವೈದ್ಯ ಡಾ ಪ್ರಮೋದ್ ಬಡ ರೋಗಿಗಳ ಜೀವದ ಜೊತೆ ಚೆಲ್ಲಾಟ ಆಡ್ತಿದ್ದಾನೆ. ಎಂಬಿಬಿಎಸ್ ಮಾಡಿರುವ ಡಾಕ್ಟರ್ ಒಬ್ಬರ…
Read More » -

500 ಕೋಟಿ ಹಾಕಿ 9500 ಕೋಟಿ ಬಾಚಿದ ಅಂಬಾನಿ..! ಪೇಂಟ್ ಮಾಯೆ..!
ಭಾರತದ ಅತಿದೊಡ್ಡ ಉದ್ಯಮ ಸಾಮ್ರಾಜ್ಯದ ಅಧಿಪತಿ ಮುಕೇಶ್ ಅಂಬಾನಿ ಅಂದ್ರೆ ದುಡ್ಡು ಮಾಡೋದ್ರಲ್ಲಿ ಎಕ್ಸ್ಪರ್ಟ್… 10 ರೂಪಾಯಿ ಹಾಕಿ 10 ಲಕ್ಷ ಲಾಭ ತೆಗೆಯೋ ಚಾಣಾಕ್ಷ ಉದ್ಯಮಿ..…
Read More » -

ಗಂಗಮತ ಸಂಘದ ಎಲೆಕ್ಷನ್ ಮುಂದೂಡಿ – ಸಮಾಜದ ಹಿತಚಿಂತಕರ ಒತ್ತಾಯ
ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದ ಚುನಾವಣೆ ಜೂನ್ ಆರಕ್ಕೆ ನಿಗದಿ ಆಗಿದೆ. ಆದ್ರೆ ಗಂಭೀರ ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ನಿಗದಿ ಮಾಡಲಾದ ಸಂಘದ ಚುನಾವಣೆಯನ್ನು ಮುಂದೂಡಿಕೆ ಮಾಡಬೇಕು…
Read More » -

ಗಂಗಮತ ಸಂಘದ ಎಲೆಕ್ಷನ್- ಚುನಾವಣಾಧಿಕಾರಿ ಮುರಳಿ ಬದಲಿಸಲು ಒತ್ತಾಯ
ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದ ಚುನಾವಣೆಗಾಗಿ ನೇಮಿಸಲ್ಪಟ್ಟ ಚುನಾವಣಾಧಿಕಾರಿ ಮುರಳಿಯನ್ನು ಬದಲಿಸಬೇಕು ಎಂದು ಸಂಘದ ಸದಸ್ಯರು ಒತ್ತಾಯ ಮಾಡಿದ್ದಾರೆ. ಈ ಹಿಂದೆ ಭಜಂತ್ರಿ ಸಂಘದಲ್ಲಿ ಹಗರಣ ಮಾಡಿರುವ…
Read More » -

ಕಾಂಗ್ರೆಸ್ ಪಕ್ಷದಲ್ಲಿ ಮೂಲ-ವಲಸಿಗ ಸಂಘರ್ಷ
ನಮಗೆ ಕಾಂಗ್ರೆಸ್ ಪಕ್ಷದಲ್ಲಿ ಇನ್ನೂ ಗ್ರೀನ್ ಕಾರ್ಡ್ ಸಿಕ್ಕಿಲ್ಲ.. ನಾವು ಕಾಂಗ್ರೆಸ್ ಪಕ್ಷದ ಈಗಲೂ ಅನಿವಾಸಿಯರೇ ಆಗಿದ್ದೇವೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಬಿ ಆರ್…
Read More » -

56 ಇಂಚಿನ ಎದೆ useless – ಮೋದಿ ವಿರುದ್ಧ ಸಿಎಂ ವಾಗ್ದಾಳಿ
56 ಇಂಚಿನ ಎದೆ useless ಆಗಿದೆ. ಎದೆಯ ಒಳಗೆ ಬಡವರ ಮತ್ತು ಮಧ್ಯಮ ವರ್ಗದವರ ಬಗ್ಗೆ ಪ್ರೀತಿ, ಕಾಳಜಿ ಇಲ್ಲ ಎಂದು ಪ್ರಧಾನಿ ನರೇಂದ್ಯರ ಮೋದಿಯನ್ನು ಸಿಎಂ…
Read More » -

ನಿಗಿ ನಿಗಿ ನಿಂಗಪ್ಪನ ಬಲೆಯಲ್ಲಿ 10 ಕೆಎಎಸ್ ಅಧಿಕಾರಿಗಳು.. ಗಡಗಡ
ಲೋಕಾಯುಕ್ತ ಹೆಸರಲ್ಲಿ ಮಾಜಿ ಪೇದೆ ನಿಂಗಪ್ಪ ಭರಪೂರ ಉಂಡೆದ್ದಿರುವುದು ಲೋಕಾಯುಕ್ತ ಎಸ್ಪಿ ತನಿಖೆಯಲ್ಲಿ ಬಟಾಬಯಲಾಗಿದೆ. ಕನಿಷ್ಠ 10 ಮಂದಿ ಕೆಎಎಸ್ ಅಧಿಕಾರಿಗಳಿಂದ ಹಣ ವಸೂಲಿ ಮಾಡಿರುವ ವಿಚಾರವನ್ನು…
Read More » -

ಮೂವರು ಪ್ರಭಾವಿ ಸಚಿವರ ಬುಡಕ್ಕೆ ಬರುತ್ತಾ ಲೋಕಾಯುಕ್ತ ಬುಕಿಂಗ್ ಗೇಟ್ ಹಗರಣ?
ಲೋಕಾಯುಕ್ತ ಹೆಸರಲ್ಲಿ ಸುಲಿಗೆ ಕೇಸ್ ಗೆ ಮಿನಿಸ್ಟರ್ ಟ್ವಿಸ್ಟ್ ಸಿಕ್ಕಿದೆ. ರಾಜ್ಯದ ಮೂವರು ಪ್ರಭಾವಿ ಸಚಿವರ ಬುಡಕ್ಕೆ ಲೋಕಾಯುಕ್ತ ಬುಕಿಂಗ್ ಗೇಟ್ ಹಗರಣ ಬರುವಂತೆ ಕಾಣ್ತಿದೆ. ಬಂಧಿತ…
Read More » -

ಕರಾವಳಿಯಲ್ಲಿ ಕೋಮುನಿಗ್ರಹ ಪಡೆಗೆ ಪರಮೇಶ್ವರ್ ಚಾಲನೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಗಲಭೆ ನಿಗ್ರಹಕ್ಕೆ ವಿಶೇಷ ಕಾರ್ಯಪಡೆ(ಎಸ್ಎಎಫ್)ಗೆ ಚಾಲನೆ ಸಿಕ್ಕಿದೆ. ಮಂಗಳೂರಿನಲ್ಲಿ ಎಸ್ಎಎಫ್ಗೆ ಗೃಹ ಸಚಿವ ಪರಮೇಶ್ವರ್, ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ದಿನೇಶ್…
Read More » -

RCB ಸಮಾರಂಭಕ್ಕೆ ರಾಜ್ಯಪಾಲರನ್ನು ನಾನೇ ಆಹ್ವಾನಿಸಿದ್ದೆ: ಮುಖ್ಯಮಂತ್ರಿ
ವಿಧಾನಸೌಧದ ಮೆಟ್ಟಿಲುಗಳ ಮೇಲೆ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ರಾಜ್ಯಪಾಲರು ಅವರಾಗೇ ಬರಲಿಲ್ಲ, ನಾನೇ ಆಹ್ವಾನಿಸಿದ್ದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದರು. ಜೂನ್ 4 ರಂದು ಕರ್ನಾಟಕ ಕ್ರಿಕೆಟ್…
Read More » -

ಡ್ರಗ್ಸ್ ವಿವಾದದಲ್ಲಿ ಸಿಲುಕಿರುವ ಮಂಗ್ಲಿ ಯಾರು?
ಬಲು ಬೇಡಿಕೆಯ ಗಾಯಕಿಯರಲ್ಲಿ ಮಂಗ್ಲಿ ಫ್ರಂಟ್ ಲೈನಲ್ಲಿ ನಿಲ್ತಾರೆ. ಇತ್ತೀಚಿನ ದಿನಗಳಲ್ಲಿ ಮಂಗ್ಲಿ ಹಾಡುಗಳನ್ನು ಕೇಳದವರೇ ಇಲ್ಲ ಎನ್ನಬಹುದು.. ಅವರು ಎಲೆಕ್ಷನ್ ಪ್ರಚಾರದ ವೇಳೆ ಒಂದಿಷ್ಟು ವಿವಾದಕ್ಕೆ…
Read More » -

ಗುಡಿಬಂಡೆ ತಾಲೂಕು ಆರೋಗ್ಯಾಧಿಕಾರಿ ಲಂಚಕಾಂಡ
ಆರೋಗ್ಯ ಇಲಾಖೆ ಕೋಟ್ಯಂತರ ರೂಪಾಯಿಗಳ ಅನುದಾನವನ್ನು ಸರ್ಕಾರಿ ಆಸ್ಪತ್ರೆಗಳಿಗೆ ಪ್ರತಿ ವರ್ಷ ನೀಡುತ್ತೆ. ಬಜೆಟ್ ನಲ್ಲಿ ಆರೋಗ್ಯ ಇಲಾಖೆಗೆಂದೇ ದೊಡ್ಡ ಮೊತ್ತವನ್ನು ಸರ್ಕಾರ ಮೀಸಲಿಡುತ್ತೆ. ಸಾರ್ವಜನಿಕರ ಆರೋಗ್ಯ…
Read More » -

ಸಿಎಸ್ ಶಾಲಿನಿ ರಜನೀಶ್, ಡಿಪಿಎಆರ್ ಕಾರ್ಯದರ್ಶಿ ಸತ್ಯವತಿ ಮೇಲೆ ಕ್ರಮ ಸಾಧ್ಯತೆ
ಆರ್ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣ ಸಂಬಂಧ ಮತ್ತಿಬ್ಬರು ಅಧಿಕಾರಿಗಳನ್ನು ತಲೆದಂಡ ಮಾಡುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.…
Read More » -

ಪರಿಷತ್ ನಾಮನಿರ್ದೇಶನ ಪಟ್ಟಿಗೆ ಗೌರ್ನರ್ ಕೊಕ್ಕೆ
ಸರ್ಕಾರ ನಾಮಕರಣ ಮಾಡುವ ವೇಳೆ ಕಲೆ, ಸಾಹಿತ್ಯ, ಇತಿಹಾಸ, ಸಂಸ್ಕೃತಿ, ಕ್ರೀಡೆ, ಪತ್ರಿಕೋದ್ಯಮ, ವಿಜ್ಞಾನ, ಸಿನಿಮಾ ಸೇರಿದಂತೆ ಮತ್ತಿತರ ಕ್ಷೇತ್ರಗಳಲ್ಲಿ ಅದ್ವೀತಿಯ ಸಾಧನೆ ಮಾಡಿರುವವರನ್ನು ನಾಮಕರಣ ಮಾಡುವ…
Read More » -

ಕಾಲ್ತುಳಿತಕ್ಕೆ ಬಲಿಯಾದ ಮೃತರ ಕುಟುಂಬಸ್ಥರಿಗೆ 25 ಲಕ್ಷ ಪರಿಹಾರ ವಿತರಣೆ
ಜೂನ್ 4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದಲ್ಲಿ, 11 ಮಂದಿ ಬಲಿಯಾಗಿದ್ದರು. ಇದೀಗ ಮೃತ ಕುಟುಂಬಸ್ಥರಿಗೆ ಸರ್ಕಾರದಿಂದ ಪರಿಹಾರದ ಚೆಕ್ ವಿತರಿಸಲಾಗುತ್ತಿದೆ. ಆಯಾ ಜಿಲ್ಲೆಗಳ…
Read More » -

ಕಾಲ್ತುಳಿತ ದುರಂತಕ್ಕೆ ಸರ್ಕಾರದ ಬೇಜವಾಬ್ದಾರಿಯೇ ಕಾರಣ – ಪ್ರಲ್ಹಾದ್ ಜೋಶಿ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಘನಘೋರ ದುರಂತಕ್ಕೆ, ಸರ್ಕಾರದ ಬೇಜವಾಬ್ದಾರಿಯೇ ಕಾರಣ ಅಂತಾ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪ ಮಾಡಿದ್ದಾರೆ.ಇದು ಸಿದ್ಧ ಸತ್ಯ. ಕೋರ್ಟ್ನಲ್ಲಿ…
Read More » -

ಕ್ರಿಕೆಟಿಗ್ ರಿಂಕು ಜೊತೆ ರಿಂಗ್ ಬದಲಿಸಿದ ಸಂಸದೆ
ಸಮಾಜವಾದಿ ಪಕ್ಷದ ಸಂಸದೆ ಜೊತೆ ಕ್ರಿಕೆಟಿಗ ರಿಂಕು ಸಿಂಗ್ ಎಂಗೇಜ್ ಆಗಿದ್ದಾರೆ. ಉತ್ತರ ಪ್ರದೇಶದ ಮಚ್ಲಿಶಹರ್ ಕ್ಷೇತ್ರ ಎಂಪಿ ಪ್ರಿಯಾ ಸರೋಜ್ ಜೊತೆ ರಿಂಕು ಸಿಂಗ್ ಉಂಗುರ…
Read More » -

ಕಾಲ್ತುಳಿತ ಕೇಸ್ – ಸಿಎಂ, ಡಿಸಿಎಂ ಮೇಲೆ ಮತ್ತೊಂದು ದೂರು!
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣ ಸಂಬಂಧ, ಸರ್ಕಾರ ಹಾಗೂ ಆರ್ ಸಿ ಬಿ ವಿರುದ್ದ ಖಾಸಗಿ ದೂರು ದಾಖಲಿಸಲು, ಅತೀ ಹಿಂದುಳಿದ ಮಠಾಧೀಶರ…
Read More » -

ರೇಣುಕಾಸ್ವಾಮಿ ಮನೆಯಲ್ಲಿ ಕಣ್ಣೀರು – ದರ್ಶನ್ ಯೂರೋಪ್ ಟ್ರಿಪ್!
ಚಿತ್ರದುರ್ಗದ ಕೆ.ಎಸ್. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಇಂದಿಗೆ 1 ವರ್ಷ. ಇನ್ನೂ ನ್ಯಾಯಾಲಯದಲ್ಲಿ ಕೇಸ್ ನಡೆಯುತ್ತಲೇ ಇದೆ. ಆರೋಪಿಗಳೆಲ್ಲಾ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಆದರೆ, ಮೃತ…
Read More » -

ರೆಪೋ ದರ ಇಳಿಕೆಯಿಂದ ಗೃಹಸಾಲದ ಇಎಂಐ ಭಾರ ಹೇಗೆ ಇಳಿಕೆ..? ಯಾವ ಆಯ್ಕೆ ಉತ್ತಮ?
ಗೃಹ ಸಾಲ ಪಡೆದವರ ಇಎಂಐ ಭಾರ ಮತ್ತಷ್ಟು ಇಳಿಕೆ.. ಫ್ಲೋಟಿಂಗ್ ರೇಟ್ ಮೇಲೆ ಗೃಹ ಸಾಲ ಪಡೆದವರಿಗೆ ಬಿಗ್ ರಿಲೀಫ್.. ಆದ್ರೆ, 2019ರ ಅಕ್ಟೋಬರ್ ಗೆ ಮೊದಲು…
Read More » -

ಪರಿಷತ್ ಗೆ ದಿನೇಶ್ ಅಮೀನ್ ಮಟ್ಟು ಸೇರಿ ನಾಲ್ವರ ಹೆಸರು ಅಂತಿಮ
ವಿಧಾನ ಪರಿಷತ್ತಿಗೆ ನಾಲ್ವರ ಹೆಸರುಗಳನ್ನು ರಾಜ್ಯ ಸರ್ಕಾರ ಅಂತಿಮಗೊಳಿಸಿದೆ. ಸಮಾಜಸೇವೆ, ಶಿಕ್ಷಣ , ಸಹಕಾರ ಕ್ಷೇತ್ರದ ಕೋಟಾದಡಿ ಕೆಪಿಸಿಸಿ ವಕ್ತಾರ ರಮೇಶ್ ಬಾಬು, ಪತ್ರಕರ್ತರ ಕೋಟಾದಡಿ ದಿನೇಶ್…
Read More » -

ಎಕ್ಸ್ ಕ್ಲೂಸೀವ್ ಅಂದ್ರೆ ಫ್ರೀಡಂಟಿವಿ.. ನಾವು ಈ ಮಾತನ್ನು ಸುಮ್ನೆ ಹೇಳ್ತಿಲ್ಲ
ಎಕ್ಸ್ ಕ್ಲೂಸೀವ್ ಅಂದ್ರೆ ಫ್ರೀಡಂ ಟಿವಿ.. ಈ ಮಾತನ್ನು ನಾವು ಗರ್ವದಿಂದ ಹೇಳ್ತಿಲ್ಲ.. ಆರ್ಸಿಬಿ ಅಭಿಮಾನಿಗಳು ಕಾಲ್ತುಳಿತದಿಂದ ಮೃತಪಟ್ಟ ತಕ್ಷಣ ಮುಂದೆ ಏನಾಗಬಹುದು ಎಂಬುದನ್ನು ತುಂಬಾನೆ ಸೂಕ್ಷ್ಮ…
Read More » -

ಆರ್ ಸಿಬಿ ಫ್ರಾಂಚೈಸಿ ಪ್ರತಿನಿಧಿಗಳ ಬಂಧನಕ್ಕೆ CM ಆದೇಶ
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ, ಆರ್ ಸಿ ಬಿ ಸಂಸ್ಥೆ ಹಾಗೂ ಕಾರ್ಯಕ್ರಮ ಆಯೋಜಕರಾದ ಡಿಎನ್ ಎ ಹಾಗೂ…
Read More » -

ಬೆಂಗಳೂರು ಪೊಲೀಸ್ ಕಮೀಷನರ್ ಅಮಾನತು
ಆರ್ ಸಿಬಿ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ಸರ್ಕಾರ ಅತ್ಯಂತ ಕಠಿಣಾತಿಕಠಿಣ ನಿರ್ಧಾರವನ್ನು ತೆಗೆದುಕೊಂಡಿದೆ. ಇತಿಹಾಸದಲ್ಲೇ ಇದೇ…
Read More » -

ಕಾಂಗ್ರೆಸ್ ಮಂತ್ರಿಗಳು, ಶಾಸಕರ ಮಕ್ಕಳಿಗೆ ವೇದಿಕೆಯ ಮೇಲೆ ರಾಜೋಪಚಾರ.. ಆದರೇ..?
ಕಾಂಗ್ರೆಸ್ ಮಂತ್ರಿಗಳು, ಶಾಸಕರ ಮಕ್ಕಳಿಗೆ ವೇದಿಕೆಯ ಮೇಲೆ ರಾಜೋಪಚಾರ. ಸಾರ್ವಜನಿಕರಿಗೆ ಬೀದಿಯಲ್ಲಿ ಪರದಾಟ. ಅಲ್ಲಿ ರಸ್ತೆಯಲ್ಲಿ ಜನ ಕಾಲ್ತುಳಿದಿಂದ ಸಾಯುತ್ತಿದ್ದರೆ, ಜೀವ ಉಳಿಸಿಕೊಳ್ಳಲು ಕಕ್ಕಾಬಿಕ್ಕಿಯಾಗಿ ದಿಕ್ಕಾಪಾಲಾಗಿ ಓಡುತ್ತಿದ್ದರೆ,…
Read More » -

ಸಿಎಂ-ಡಿಸಿಎಂ ವಿರುದ್ಧ ಎಫ್ಐಆರ್ ಇಲ್ಲ
ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಬೆಳವಣಿಗೆ ನಡೆದಿದೆ. ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ನೀಡಿದ ದೂರಿನ ಮೇರೆಗೆ ಕಬ್ಬನ್ ಪಾರ್ಕ್ ಪೊಲೀಸರು…
Read More » -

RCB ಮೊದಲ ಮಾಲೀಕ ವಿಜಯ್ ಮಲ್ಯಾ ಫಸ್ಟ್ ರಿಯಾಕ್ಷನ್ ವೈರಲ್
RCB ಐಪಿಎಲ್ ಕಪ್ ಗೆದ್ದ ಹಿನ್ನೆಲೆಯಲ್ಲಿ ತಂಡದ ಮೊದಲ ಮಾಲೀಕ ವಿಜಯ್ ಮಲ್ಯ ನೀಡಿರುವ ಮೊದಲ ಪ್ರತಿಕ್ರಿಯೆ ಸಖತ್ ವೈರಲ್ ಆಗಿದೆ. ವಿಜಯ್ ಮಲ್ಯಾ ತಮ್ಮ ಸೋಷಿಯಲ್…
Read More » -

ಕಡೆಗೂ ಗೆದ್ದ ಕ್ರಿಕೆಟ್ ಗೆ ಘನತೆ ತಂದು ಕೊಟ್ಟ ಕೊಹ್ಲಿ
ಅರ್ಧ ಆಯಸ್ಸನ್ನು RCBಯಲ್ಲೇ ಕಳೆದವನಿಗೆ.. ಆಯಸ್ಸಿನ ಕೊನೆಯವರೆಗೂ ಆರ್.ಸಿ.ಬಿ ಮೇಲೆ ನನ್ನ ನಿಯತ್ತು ಎಂದವನಿಗೆ.. ಕೊನೆಗೂ ಒಲಿಯಿತು ಆ ಮಾಯಾಜಿಂಕೆ..! 18 ವರ್ಷ.. ಅದೆಷ್ಟು ಮೂದಲಿಕೆಗಳು.. ಅದೆಷ್ಟು…
Read More » -

ಕೊಹ್ಲಿ ಸ್ಟೇಡಿಯಂಗೆ ಎಂಟ್ರಿ ಕೊಟ್ಟ ಕ್ಷಣ.. ಜೋರು ಸದ್ದು
ಟಾಸ್ ಸೋತ ಆರ್ ಸಿಬಿ ಮೊದಲು ಬ್ಯಾಟ್ ಮಾಡ್ತಿದೆ.. ಆರಂಭಿಕರಾಗಿ ವಿರಾಟ್ ಕೊಹ್ಲಿ ಫೀಲ್ಡಿಗೆ ಇಳಿದ ಸಂದರ್ಭದಲ್ಲಿ ಇಡೀ ಸ್ಟೇಡಿಯಂ ಕೊಹ್ಲಿ ಮಯವಾಗಿತ್ತು.. ಸ್ಟೇಡಿಯಂನಲ್ಲಿರುವ ಎಲ್ಲರೂ ಕೊಹ್ಲಿ…
Read More » -

ಕರ್ನಾಟಕದಲ್ಲಿ ಥಗ್ ಲೈಫ್ ರಿಲೀಸ್ ಮಾಡದಿರಲು ನಟ ಕಮಲ್ ನಿರ್ಧಾರ
ಥಗ್ ಲೈಫ್ ಚಿತ್ರವನ್ನು ಸದ್ಯಕ್ಕೆ ಕರ್ನಾಟಕದಲ್ಲಿ ರಿಲೀಸ್ ಮಾಡದಿರಲು ನಟ ಕಮಲ್ ಹಾಸನ್ ನಿರ್ಧರಿಸಿದ್ದಾರೆ. ಈ ವಿಚಾರವನ್ನು ಅವರ ಪರ ವಕೀಲರು ಕರ್ನಾಟಕ ಹೈಕೋರ್ಟ್ ಗೆ ತಿಳಿಸಿದ್ದಾರೆ.…
Read More » -

ಡಿಕೆಶಿ ಏನು ಮಾಡ್ತಾರೋ ಮಾಡಲಿ – ಶಾಸಕ ಎಂಟಿ ಕೃಷ್ಣಪ್ಪ ಗುಟುರು
ನನ್ನ ಮೇಲೆ ಒಂದಲ್ಲದಿದ್ದರೆ ನೂರು ಕೇಸುಗಳನ್ನು ದಾಖಲಿಸಿಕೊಳ್ಳಿ.. ಆದ್ರೆ ಹೋರಾಟದಿಂದ ಹಿಂಜರಿಯುವುದೇ ಇಲ್ಲ ಹೆದರುವವನು ನಾನಲ್ಲ ಎಂದು ತುರುವೆಕೆರೆ ಶಾಸಕ ಎಂಟಿ ಕೃಷ್ಣಪ್ಪ ಗುಟುರು ಹಾಕಿದ್ದಾರೆ. ತುರುವೇಕೆರೆಯಲ್ಲಿ…
Read More » -

ನನ್ನ ಹೇಳಿಕೆಯಿಂದ ಶಿವಣ್ಣಗೆ ಮುಜುಗರ – ನಟ ಕಮಲ್ ಹಾಸನ್
ಕಳೆದ ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ಯಾವುದಾದ್ರೂ ಒಂದು ಸುದ್ದಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ ಅಂದ್ರೆ ಅದು ಕಮಲ್ ಹಾಸನ್ ಕೊಟ್ಟ ಕನ್ನಡ ಭಾಷಾ ವಿರೋಧಿ ಹೇಳಿಕೆ.. ಅದೆಷ್ಟೋ…
Read More » -

ಕನ್ನಡ ತಮಿಳಿನಿಂದ ಹುಟ್ಟಿದೆ ಎಂದು ಹೇಳಲು ಕಮಲ್ ಹಾಸನ್ ಭಾಷಾ ತಜ್ಞರೇ? – ಹೈಕೋರ್ಟ್ ಚಾಟಿ
ನಟ ಕಮಲ್ ಹಾಸನ್ ನಟಿಸಿರುವ ಥಗ್ ಲೈಫ್ ಚಿತ್ರ ಬಿಡುಗಡೆಗೆ ಪೊಲೀಸ್ ರಕ್ಷಣೆ ಕೋರಿರುವುದಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕನ್ನಡ ತಮಿಳಿನಿಂದ ಹುಟ್ಟಿದೆ ಎಂಬ…
Read More » -

ಐಪಿಎಲ್ ಫೈನಲ್ ಸೇನಾಪತಿಗಳ ಫೋಟೋ ಶೂಟ್
ಇನ್ನು ಕೆಲವೇ ಗಂಟೆ.. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯ ನಡೆಯಲಿದೆ. ಪ್ರತಿ ಸಲವೂ ಈ ಬಾರಿ ಕಪ್…
Read More » -

ಥಗ್ ಲೈಫ್ ಗೆ ಕಂಟಕ ಭೀತಿ.. ಹೈಕೋರ್ಟ್ ಗೆ ಮೊರೆ
ಅಭಿಜಾತ ಕಲಾವಿದ, ಬಹುಭಾಷಾ ನಟ ಕಮಲ್ ಹಾಸನ್ ನೀಡಿರುವ ವಿವಾದಾತ್ಮಕ ಹೇಳಿಕೆಯಿಂದಾಗಿ ಅವರ ನಟನೆಯ ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಕರ್ನಾಟಕದಲ್ಲಿ ತೀವ್ರ ವಿರೋಧ ವ್ಯಕ್ತವಾಗ್ತಿದೆ.. ಈ…
Read More » -

ಬಿಜೆಪಿಯವರು ಕೋಮು ಕನ್ನಡಿಯಿಂದ ನೋಡಬಾರದು: ಸಚಿವೆ ಲಕ್ಷ್ಮಿ
ಬೆಂಗಳೂರು: ಬಿಜೆಪಿಯವರು ಹಿಂದೂ, ಮುಸ್ಲಿಂರೆಂದು ಭೂತ ಕನ್ನಡಿಯಿಂದ ನೋಡುವುದನ್ನು ಬಿಡಬೇಕು. ಸಾಮಾಜಿಕ ಬದ್ಧತೆಯಿಂದ ಎಲ್ಲವನ್ನೂ ನೋಡಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕರೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ…
Read More » -

ಕಮಲ್ ವಿವಾದ.. ಮೌನ ಮುರಿದ ನಟ ಶಿವಣ್ಣ
ಕನ್ನಡ ಭಾಷೆ ಬಗ್ಗೆ ಬಹುಭಾಷಾ ನಟ ಕಮಲ್ ಹಾಸನ್ ನೀಡಿದ ವಿವಾದಾತ್ಮಕ ಹೇಳಿಕೆ ಬಗ್ಗೆ ಕೊನೆಗೂ ನಟ ಶಿವರಾಜ್ಕುಮಾರ್ ಕೊನೆಗೂ ಮೌನ ಮುರಿದಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗೆ…
Read More » -

ಸರ್ವಜನಾಂಗದ ಶಾಂತಿಯ ತೋಟವನ್ನು ವಿಷ ಸರ್ಪಗಳ ತೋಟವನ್ನಾಗಿಸಿದ್ದೀರಿ ; ಹೆಚ್ಡಿಕೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಸರಣಿ ಕೊಲೆ ಪ್ರಕರಣಗಳನ್ನ ಉಲ್ಲೆಖಿಸಿ,ಸರ್ವಜನಾಂಗದ ಶಾಂತಿಯ ತೋಟವನ್ನು ವಿಷ ಸರ್ಪಗಳ ತೋಟವನ್ನಾಗಿ ಪರಿವರ್ತಿಸಿದ್ದಿರಿ ಎಂದು ಸಿಎಂ ಸಿದ್ದರಾಮಯ್ಯರವರನ್ನ ಕಟುವಾಗಿ ಟೀಕಿಸಿದ ಕೇಂದ್ರ…
Read More » -

ಅಣ್ಣಿಗೇರಿಯ ಭದ್ರಾಪೂರ ಬಳಿ ಭೀಕರ ರಸ್ತೆ ಅಪಘಾತ
ಧಾರವಾಡದ ಅಣ್ಣಿಗೇರಿಯ ಭದ್ರಾಪೂರ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಹಿಂಬದಿಗೆ ಟವೇರಾ ಕಾರ್ ಡಿಕ್ಕಿ ಹೊಡೆದಿದೆ. ಇಲ್ಲಿನ ಹೊಸಪೇಟೆ ಹುಬ್ಬಳ್ಳಿ…
Read More » -

ವೈದ್ಯರಿಗೆ ಗುಡ್ ನ್ಯೂಸ್ – ವೇತನ ಹೆಚ್ಚಳ
ಗುತ್ತಿಗೆ ಆಧಾರಿತ ಸರ್ಕಾರಿ ವೈದ್ಯರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. NHM ಅಡಿಯಲ್ಲಿ ನೇಮಕವಾಗುವ ಗುತ್ತಿಗೆ ವೈದ್ಯರ ವೇತನವನ್ನ ಹೆಚ್ಚಿಸಿ ಆದೇಶಿಸಲಾಗಿದೆ. ಕೇಂದ್ರದ ಅನುಮತಿ ಪಡೆದು…
Read More » -

ಶಾಲಾ ಕೊಠಡಿ ಕೇಳಿದ ಮುಖ್ಯಶಿಕ್ಷಕನಿಗೆ ಸಿಕ್ಕಿದ್ದು ಸಸ್ಪೆಂಡ್ ಶಿಕ್ಷೆ
ಶಾಲಾ ಕೊಠಡಿಗಾಗಿ ಒತ್ತಾಯಿಸಿ ಮೌನ ಪ್ರತಿಭಟನೆ ನಡೆಸಿದ್ದ ನಿಡಗುಂದಿಯ ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳರ ಅವರನ್ನು ಶಿಕ್ಷಣ ಇಲಾಖೆ ಸಸ್ಪೆಂಡ್ ಮಾಡಿದೆ. ಮಂಗಳವಾರದ ಪ್ರತಿಭಟನೆ ವೇಳೆ ರಾಯಭಾಗ…
Read More » -

ಸಿಎಂ ಗಾದಿಗೆ ಪರಮೇಶ್ವರ್ ಪಟ್ಟು – ಹೈಕಮಾಂಡ್ ಮಟ್ಟದಲ್ಲಿ ಚರ್ಚೆ
ಪರಮೇಶ್ವರ್ ಮತ್ತು ಡಿಕೆ ಶಿವಕುಮಾರ್ ಮಧ್ಯೆ ಸಿಎಂ ಗಾದಿಗಾಗಿ ಸ್ಪರ್ಧೆ ತೀವ್ರಗೊಂಡ ಹೊತ್ತಲ್ಲೇ ಮಹತ್ವದ ಬೆಳವಣಿಗೆ ನಡೆದಿದೆ. ಎಸ್ಸಿ ಎಸ್ಟಿ ಸಮುದಾಯಕ್ಕೆ ಐತಿಹಾಸಿಕ ನ್ಯಾಯ ಸಿಗುವ ದಿನಗಳು…
Read More » -

Dr. G. C. Prakash appointed as the chairman of a UP high-powered committee
Retired IAS officer Dr. G. C. Prakash has been appointed as the chairman of a high-powered committee for Uttar Pradesh…
Read More » -

ಯುಪಿ ಹೈಪವರ್ ಕಮಿಟಿಗೆ ನಿವೃತ್ತ ಐಎಎಸ್ ಅಧಿಕಾರಿ ಡಾ.ಜಿ.ಸಿ ಪ್ರಕಾಶ್ ಚೇರ್ಮನ್
ನಿವೃತ್ತ ಐಎಎಸ್ ಅಧಿಕಾರಿ, ಕನ್ನಡಿಗ ಡಾ.ಜಿ.ಸಿ ಪ್ರಕಾಶ್ ಅವರನ್ನು ಅಲಹಾಬಾದ್ ಹೈಕೋರ್ಟ್, ಉತ್ತರ ಪ್ರದೇಶದ ಹೈಪವರ್ ಕಮಿಟಿಯೊಂದಕ್ಕೆ ಅಧ್ಯಕ್ಷರಾಗಿ ನೇಮಕ ಮಾಡಿದೆ. ಸಮಗ್ರ ಶಿಶು ಅಭಿವೃದ್ಧಿ (ಐಸಿಡಿಎಸ್)…
Read More » -

ಸೇನಾಧಿರಿಸಿನಲ್ಲಿ ಸಿಎಂ ಸಿದ್ದರಾಮಯ್ಯ ಆಕ್ಷನ್
ಸಿಎಂ ಸಿದ್ದರಾಮಯ್ಯ ಇಂದು ಬದಲಾಗಿದ್ರು. ಆಪರೇಷನ್ ಸಿಂಧೂರ್ ಪ್ರಭಾವವೋ ಏನೋ ಮುಖ್ಯಮಂತ್ರಿಗಳು ಇದೇ ಮೊದಲ ಬಾರಿಗೆ ಸೇನಾ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದು ವಿಶೇಷ.. ಮುಖ್ಯಮಂತ್ರಿಗಳ ಹಾವಭಾವ ಎಲ್ಲರ ಗಮನ…
Read More » -

ಜೈಲಿನಲ್ಲಿ ಹರ್ಷ ಕೊಲೆ ಆರೋಪಿಗಳು ಕಿರಿಕ್
ಬಳ್ಳಾರಿ: ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಆರೋಪಿಗಳು ಬಳ್ಳಾರಿ ಜೈಲಿನಲ್ಲಿ ರಂಪಾಟ ಮಾಡಿದ್ದಾರೆ. ಹರ್ಷ ಕೊಲೆ ಪ್ರಕರಣದ ಹತ್ತು ಜನ ಆರೋಪಿಗಳ ಪೈಕಿ ಜಿಲಾನ್ ಹಾಗೂ…
Read More » -

ಗಿಗ್ ಕಾರ್ಮಿಕರ ಕಲ್ಯಾಣ ಮಸೂದೆಗೆ ಅಂಕಿತ ;ಸಚಿವ ಸಂತೋಷ್ ಲಾಡ್ ಪ್ರಯತ್ನಕ್ಕೆ ದೊರೆತ ಫಲ
ಬೆಂಗಳೂರು : ಕರ್ನಾಟಕ ವೇದಿಕೆ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಹಾಗೂ ಕ್ಷೇಮಾಭಿವೃದ್ಧಿ) ಮಂಡಳಿ ರಚನೆಗೆ ರಾಜ್ಯಪಾಲರಿಂದ ಅಂಕಿತ ದೊರೆತಿದೆ.ರಾಜ್ಯದ ಅಸಂಘಟಿತ ವಲಯದ ಗಿಗ್ ಕಾರ್ಮಿಕರ…
Read More » -

ಚಿಕ್ಕಾಸು ಪಡೆಯದೇ ಅರಣ್ಯ ರಾಯಭಾರಿಯಾದ ಅನಿಲ್ ಕುಂಬ್ಳೆ
ಅನಿಲ್ ಕುಂಬ್ಳೆ ಅವರನ್ನು ಕರ್ನಾಟಕ ರಾಜ್ಯ ಅರಣ್ಯ ಮತ್ತು ವನ್ಯಜೀವಿ ರಾಯಭಾರಿಯಾಗಿ ನಾಮನಿರ್ದೇಶನ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ವಿಶೇಷ ಅಂದರೆ, ಮೂಲತಃ ಪರಿಸರ ಪ್ರೇಮಿ ಆಗಿರುವ…
Read More » -

ಎಸ್ ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಉಚ್ಛಾಟನೆ – ವಿಜಯೇಂದ್ರ ಮೇಲುಗೈ
ಪಕ್ಷ ವಿರೋಧಿ ಚಟುವಟಿಕೆ ಆರೋಪ ಹಿನ್ನೆಲೆಯಲ್ಲಿ ಶಾಸಕರಾದ ಎಸ್.ಟಿ. ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಅವರನ್ನು ಭಾರತೀಯ ಜನತಾ ಪಕ್ಷದಿಂದ ಆರು ವರ್ಷ ಉಚ್ಛಾಟಿಸಿ ಹೈಕಮಾಂಡ್ ತೀರ್ಮಾನ…
Read More » -

ಬೋವಿನಿಗಮ ಹಗರಣ – 26 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು
ಭೋವಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಆರೋಪಿಗಳಿಗೆ ಸೇರಿದ 26.27 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ. ಪ್ರಕರಣದ ಆರೋಪಿಗಳಾದ ಬಿ.ಕೆ.ನಾಗರಾಜಪ್ಪ, ಆರ್.ಲೀಲಾವತಿ ಮತ್ತು ಇತರೆ…
Read More » -

ಸಚಿವ ಬೈರತಿ ಸುರೇಶ್ ಗೆ ಡಿಸಿಎಂ ಡಿಕೆಶಿ ಸಾಂತ್ವಾನ
ತಾಯಿ ಅಗಲಿಕೆಯ ನೋವಿನಲ್ಲಿರುವ ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವ ಬೈರತಿ ಸುರೇಶ್ ಅವರಿಗೆ ಡಿಸಿಎಂ ಡಿಕೆ ಶಿವಕುಮಾರ್ ಸಾಂತ್ವಾನ ಹೇಳಿದ್ದಾರೆ. ಬೈರತಿ ಸುರೇಶ್ ಅವರ ನಿವಾಸಕ್ಕೆ…
Read More » -

ಫ್ರೀಡಂಟಿವಿ ವೀರವನಿತೆ ಅವಾರ್ಡ್ಸ್ ಮತ್ತು ಎಕ್ಸ್ ಪೋ ಸಂಪನ್ನ
ಮೂರು ದಿನಗಳಿಂದ ಬೆಂಗಳೂರಿನ ಯಲಹಂಕದ ವಿವೇಕಾನಂದ ಆಟದ ಮೈದಾನದಲ್ಲಿ ನಡೆದ ಫ್ರೀಡಂ ಟಿವಿ ವೀರವನಿತೆ ಅವಾರ್ಡ್ಸ್ ಮತ್ತು ಎಕ್ಸ್ ಪೋ ಸಂಪನ್ನಗೊಂಡಿದೆ. ಅಂತಿಮ ದಿನವಾದ ಭಾನುವಾರ ಮಹಿಳಾ…
Read More » -

ಯಲಹಂಕದಲ್ಲಿ ಫ್ರೀಡಂಟಿವಿ ಎಕ್ಸ್ ಪೋ.. ಇಂದೇ ಕೊನೆ ದಿನ ಬರೋದು ಮಿಸ್ ಮಾಡ್ಬೇಡಿ
ಮೂರು ದಿನಗಳಿಂದ ಬೆಂಗಳೂರಿನ ಯಲಹಂಕದ ವಿವೇಕಾನಂದ ಆಟದ ಮೈದಾನದಲ್ಲಿ ಫ್ರೀಡಂ ಟಿವಿ ವೀರವನಿತೆ ಅವಾರ್ಡ್ಸ್ ಮತ್ತು ಎಕ್ಸ್ ಪೋ ಭರ್ಜರಿಯಾಗಿ ನಡೀತಿದೆ.. ಅಂತಿಮ ದಿನವಾದ ಇಂದು ಸಂಜೆ…
Read More » -

ಸಚಿವ ಬೈರತಿ ಸುರೇಶ್ ಅವರಿಗೆ ಮಾತೃ ವಿಯೋಗ
ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವ ಬೈರತಿ ಸುರೇಶ್ ಅವರ ತಾಯಿ ಸುಶೀಲಮ್ಮ ರವರು ಶನಿವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಹೆಬ್ಬಾಳ ವಿಧಾನಸಭಾ…
Read More » -

ಡ್ಯಾನ್ಸ್ ಮಾಡುವಾಗಲೇ ಹಾರಿಹೋಯ್ತು ಪ್ರಾಣ ಪಕ್ಷಿ.. ಅಯ್ಯೋ
ಡ್ಯಾನ್ಸ್ ಮಾಡುವಾಗಲೇ ಪ್ರಾಣ ಹಾರಿಹೋದ ಮನಕಲಕುವ ಘಟನೆ ವಿಜಯಪುರದಲ್ಲಿ ನಡೆದಿದೆ. ಸಂಬಂಧಿಕರ ಮದುವೆಯಲ್ಲಿ ಡ್ಯಾನ್ಸ್ ಮಾಡ್ತಿದ್ದ ಯುವಕ ದಿಢೀರ್ ಹೃದಯಾಘಾತದಿಂದ ಕುಸಿದು ಸಾವನ್ನಪ್ಪಿದ್ದಾನೆ. ವಿಜಯಪುರ ನಗರದ ಚಪ್ಪರಬಂದ…
Read More » -

ಫ್ರೀಡಂಟಿವಿ ಎಕ್ಸ್ ಪೋ 2ನೇ ದಿನವೂ ಗ್ರ್ಯಾಂಡ್ ಸಕ್ಸಸ್ – ನಾಳೆಯೂ ಇದೆ ಬನ್ನಿ
ಬೆಂಗಳೂರಿನ ಯಲಹಂಕ ನ್ಯೂ ಟೌನ್ನಲ್ಲಿರುವ ವಿವೇಕಾನಂದ ಆಟದ ಮೈದಾನದಲ್ಲಿ ನಿನ್ನೆಯಿಂದ ಫ್ರೀಡಂ ಟಿವಿ ವೀರವನಿತೆ ಅವಾರ್ಡ್ಸ್ ಮತ್ತು ಎಕ್ಸ್ ಪೋಗೆ ಇಂದು ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.. ಮಳೆಯ…
Read More » -

ಸರ್ಕಾರಿ ಭೂಮಿ ಪರಭಾರೆ ಕೇಸ್ – ಇಬ್ಬರು ಕಂದಾಯ ಅಧಿಕಾರಿಗಳಿಗೆ ಬಂಧನ ಭೀತಿ
ಸರ್ಕಾರಿ ಭೂಮಿ ಪರಭಾರೆ – ಇಬ್ಬರು ಕಂದಾಯ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಅನುಮತಿ ಕೋರಿ ಕೆಆರ್ ಎಸ್ ಠಾಣಾ ಪೊಲೀಸರಿಂದ ಡಿಸಿಗೆ ನ್ಯಾಯಾಲಯ ಮನವಿ ಮಂಡ್ಯ: ಸರ್ಕಾರಿ…
Read More » -

ರೋಹಿತ್ ವಾರಸ್ದಾರ ಗಿಲ್ -ಕರುಣ್ ನಾಯರ್ ಗೆ ಕಡೆಗೂ ಮಣೆ
ರೋಹಿತ್ ಶರ್ಮಾ ವಾರಸ್ದಾರ ಗಿಲ್ – ಶುಭಮನ್ ಗಿಲ್ ಗೆ ಟೆಸ್ಟ್ ನಾಯಕತ್ವ – ಜೂನ್ ತಿಂಗಳಲ್ಲಿ ಇಂಗ್ಲೆಂಡ್ ಪ್ರವಾಸ – 18 ಆಟಗಾರರ ತಂಡ ಪ್ರಕಟಿಸಿದ ಬಿಸಿಸಿಐ – ಕನ್ನಡಿಗ…
Read More » -

Good News: ಇನ್ಮುಂದೆ ರಜಾ ದಿನಗಳಲ್ಲಿಯೂ ಆಸ್ತಿ ನೋಂದಣಿ..!
ಸಾಮಾನ್ಯವಾಗಿ ಹಲವರು ತಮ್ಮ ಆಸ್ತಿಯನ್ನು ಮಾರಾಟ ಮಾಡಬೇಕಾದಾಗ ಅಥವಾ ಕ್ರಯಕ್ಕೆ ಪಡೆಯಬೇಕಾದಾಗ, ತಮ್ಮ ಕಚೇರಿಗಳಿಗೆ ರಜೆ ಹಾಕಿ ನೋಂದಣಿ ಕಚೇರಿಗೆ ಹೋಗಬೇಕಾಗುತ್ತದೆ. ಮಾರಾಟಗಾರರು ಮತ್ತು ಖರೀದಿದಾರರು ಸಮಯ…
Read More » -

ಯಲಹಂಕದಲ್ಲಿ ಫ್ರೀಡಂಟಿವಿ ಮೆಗಾ ಎಕ್ಸ್ ಪೋ ಶುರು.. ಬನ್ನಿ ಜೊತೆಯಾಗಿ
ನಿಮ್ಮ ನೆಚ್ಚಿನ ಫ್ರೀಡಂ ಟಿವಿಯು ಬೆಂಗಳೂರಿನಲ್ಲಿ ವೀರ ವನಿತೆ ಅವಾರ್ಡ್ಸ್ 2025 ಆಯೋಜಿಸಿದೆ. ಯಲಹಂಕ ನ್ಯೂಟೌನ್ನಲ್ಲಿರುವ ವಿವೇಕಾನಂದ ಪ್ಲೇ ಗ್ರೌಂಡ್ನಲ್ಲಿ ಇಂದಿನಿಂದ 3 ದಿನಗಳ ಕಾಲ ಈ…
Read More » -

ಕೊಲೆ ಆರೋಪಿ ನಟ ದರ್ಶನ್ಗೆ ಮತ್ತೆ ಸಂಕಷ್ಟ..!
ಮೈಸೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿಯಾಗಿರುವ ನಟ ದರ್ಶನ್ ಮೇಲೆ ಮತ್ತೊಂದು ಕೇಸ್ ದಾಖಲಾಗಿದೆ. ಟಿ.ನರಸೀಪುರ ರಸ್ತೆಯಲ್ಲಿರುವ ಫಾರ್ಮೌಸ್ನಲ್ಲಿ ವಿದೇಶಿ ಬಾತುಕೋಳಿ ಸಾಕಾಣಿಕೆ ಮಾಡಿದ್ದಕ್ಕೆ…
Read More » -

ಪ್ರಶಸ್ತಿಯ ಕ್ರೆಡಿಟ್ಟು ಮತ್ತು ಲಂಕೇಶು
ಬಾನು ಮತ್ತು ದೀಪಾ ಅವರಿಗೆ ಬುಕರ್ ಪ್ರಶಸ್ತಿ ಬಂದಿದ್ದಾಯ್ತು. ಇದೀಗ ಎಂದಿನಂತೆ, ಈ ಪ್ರಶಸ್ತಿಯ ಕ್ರೆಡಿಟ್ಟನ್ನು ಹರಿದುಹಂಚಿಕೊಳ್ಳುವ ಕೆಟ್ಟ ಚಾಳಿ ಚಾಲ್ತಿಯಲ್ಲಿದೆ. ಕೆಲವರು ಬಾನು ಅವರ ಗಂಡನಿಗೆ…
Read More » -

ಸಾಲೂರು ಮಠದ ಗುರುಸ್ವಾಮಿಗಳು ಲಿಂಗೈಕ್ಯ
ಮಲೆಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಹಿರಿಯ ಶ್ರೀಗಳಾದ ಗುರುಸ್ವಾಮೀ ಬುದ್ದಿಯವರು ಇನ್ನಿಲ್ಲ. ಅವರು 70ನೇ ವಯಸ್ಸಿಗೆ ಲಿಂಗೈಕ್ಯರಾಗಿದ್ದಾರೆ. ವಯೋಸಹಜ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಗುರುಸ್ವಾಮೀ ಶ್ರೀಗಳು ಸಾಲೂರು…
Read More » -

ಬೆಂಗಳೂರಿನ ಎಲ್ಲೆಲ್ಲಿ ಏನೇನು ಮಳೆ ಹಾನಿ?
ಬೆಂಗಳೂರು ನಗರದಲ್ಲಿ ರಾತ್ರಿ 10.00 ಗಂಟೆಯಿಂದ ಬೆಳಗ್ಗೆ 6.00 ಗಂಟೆಯವರೆಗೆ ಸರಾಸರಿ 66 ಮಿ.ಮೀ ಮಳೆಯಾಗಿದೆ. ಅತಿ ಹೆಚ್ಚು ಕೆಂಗೇರಿಯಲ್ಲಿ 132 ಮಿ.ಮೀ, ಅತೀ ಕಡಿಮೆ ಗೊಟ್ಟಿಗೆರೆಯಲ್ಲಿ…
Read More » -

ಪ್ರವಾಸ ಹೋಗಿ ಅಪಘಾತಕ್ಕೆ ಕೆಂಕೆರೆಯ ಮೂವರು ಬಲಿ
ಆಂಧ್ರಪ್ರದೇಶ ಪ್ರವಾಸ ಕೈಗೊಂಡಿದ್ದ ತುಮಕೂರು ಜಿಲ್ಲೆಯ ಮೂವರು ಕಾರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಕರ್ನೂಲ್ ಬಳಿ ನಡೆದಿದೆ. ಮೃತರನ್ನು ಚಿಕ್ಕನಾಯಕನಹಳ್ಳಿ ತಾಲೂಕಿನ ಕೆಂಕೆರೆಯ ನವೀನ್, ಸಂತೋಷ್, ಲೋಕೇಶ್…
Read More » -

ಭಾರೀ ಮಳೆಗೆ ಸಿಲಿಕಾನ್ ಸಿಟಿ ಹೈರಾಣ
ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಮಳೆಯಾಗಿದೆ. ಭಾರಿ ಮಳೆಯಿಂದ ರಾಜಕಾಲುವೆಗಳು ತುಂಬಿ ಹರಿದಿವೆ. ಹಲವು ರಸ್ತೆಗಳಲ್ಲಿ ಮಳೆ ನೀರು ನಿಂತು, ಹೊಳೆಯಂತೆ ಕಾಣ್ತಿದ್ದವು. ಸಿಲ್ಕ್ ಬೋರ್ಡ್ ಬೊಮ್ಮನಹಳ್ಳಿ, ಎಲೆಕ್ಟ್ರಾನಿಕ್…
Read More » -

ನಡುರಸ್ತೆಯಲ್ಲಿ ಹಠಾತ್ ಗುಂಡಿ.. ಮಗುಚಿತು ಕಾರ್
ಹಠಾತ್ ಸೃಷ್ಟಿಯಾದ ರಸ್ತೆಯ ಗುಂಡಿಗೆ ಕಾರು ಮಗುಚಿ ಅಪಘಾತ ಸಂಭವಿಸಿದ ಘಟನೆ ಚೆನ್ನೈನಲ್ಲಿ ನಡೆದಿದೆ. ಚೆನ್ನೈನ ತಿರುವನ್ಮಿಯೂರಿನಲ್ಲಿರುವ ಟೈಡಲ್ ಪಾರ್ಕ್ ಸಿಗ್ನಲ್ ಬಳಿ ರಸ್ತೆಯಲ್ಲಿ ಹಠಾತ್ ಗುಂಡಿ…
Read More » -

ಅಮಾಯಕನ ಮೇಲೆ ಕೈ ಮುಖಂಡ- ಉಪ ತಹಶೀಲ್ದಾರ್ ಹಲ್ಲೆ
ಗದಗ ನಗರದ ತಹಶೀಲ್ದಾರ್ ಕಚೇರಿ ಆಳುವ ಮಂದಿಯ ದುರ್ವರ್ತನೆಗೆ ಸಾಕ್ಷಿಯಾಗಿದೆ. ನ್ಯಾಯ ಕೇಳಲು ಬಂದ ಯುವಕನೊಬ್ಬನಿಗೆ ಕಾಂಗ್ರೆಸ್ ಮುಖಂಡ, ಉಪ ತಹಶೀಲ್ದಾರ್ ಹಾಗೂ ಅವರ ಸಂಗಡಿಗರು ಕಚೇರಿಯಲ್ಲೇ…
Read More » -

ಕಂಡಕ್ಟರ್ ಗೆ ಚಾಕು ಹಾಕಿದ ಚಾಲಕ
ಖಾಸಗಿ ಬಸ್ ಚಾಲಕನೊಬ್ಬ ಕಂಡಕ್ಟರ್ ಗೆ ಚಾಕುವಿನಿಂದ ಇರಿದ ಘಟನೆ ತಿರುವನಂತಪುರಂನಲ್ಲಿ ನಡೆದಿದೆ. ಬಸ್ ನಲ್ಲಿ ಕುಳಿತಿದ್ದ ಕಂಡಕ್ಟರ್ ಬಿನೋಜ್ ಮೇಲೆ ಚಾಲಕ ಬಾಬುರಾಜ್ ಏಕಾಏಕಿ ಚಾಕುವಿನಿಂದ…
Read More » -

ತಾಳಿ ಕಟ್ಟಿದ ಅರ್ಧಗಂಟೆಯಲ್ಲೇ ವರ ಸಾವು ..! – ವರನಿಗೆ ಏನಾಯ್ತು ಗೊತ್ತಾ..?
ತಾಳಿ ಕಟ್ಟಿದ ಅರ್ಧ ಗಂಟೆಯಲ್ಲೇ ವರ ಸಾವನ್ನಪ್ಪಿದ್ದಾನೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ದುರಂತ ನಡೆದಿದೆ. ಪ್ರವೀಣ ಕುರಣಿ ಹೃದಯಾಘಾತದಿಂದ ಮೃತಪಟ್ಟ ವರ. ಮದುವೆಯ…
Read More » -

ಮೋದಿಗೆ ಹೇಳಿ.. ಅನ್ಯಾಯ ನಿಲ್ಲಿಸಿ – ಸಿಎಂ ಸಿದ್ದರಾಮಯ್ಯ
ಮಂಗಳೂರು : ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ 4.5 ಲಕ್ಷ ಕೋಟಿ ತೆರಿಗೆ ಕೊಡ್ತೀವಿ. ಕೇಂದ್ರ ರಾಜ್ಯಕ್ಕೆ ವಾಪಾಸ್ ಕೊಡುವುದು, ಸ್ಮಾರ್ಟ್ ಸಿಟಿ ಯೋಜನೆ ಸೇರಿ ಕೇವಲ 65…
Read More » -

ಗುಡ್ ನ್ಯೂಸ್ – ತುಮಕೂರಿಗೂ ಮೆಟ್ರೋ ವಿಸ್ತರಣೆ?
ತುಮಕೂರು-ಬೆಂಗಳೂರು ನಡುವೆ ನಿತ್ಯ ಓಡಾಡುವ ಮಂದಿಗೆ ಗುಡ್ ನ್ಯೂಸ್. ಇಷ್ಟು ದಿನ ಬೆಂಗಳೂರಿಗಷ್ಟೇ ಸೀಮಿತಾವಾಗಿದ್ದ ಮೆಟ್ರೋ, ತುಮಕೂರು ಜಿಲ್ಲೆಗೂ ವಿಸ್ತರಣೆಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ರಾಜ್ಯ ಸರ್ಕಾರಕ್ಕೆ…
Read More » -

ಕೊಡಗಿನ ಸಂಪತ್ ಶವವಾಗಿ ಪತ್ತೆ
ಕೊಡಗಿನ ಸಂಪತ್ ಆಲಿಯಾಸ್ ಶಂಭು ನಿಗೂಢವಾಗಿ ಸಾವನ್ನಪ್ಪಿದ್ದಾನೆ. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ಯಸಳೂರು ಹೋಬಳಿ ಮಾಗೇರಿಯ ಸಮೀಪದ ಕಲ್ಲಹಳ್ಳಿ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಕಾರಿನಲ್ಲಿ ಸಂಪತ್ ಶವ…
Read More » -

ಖಾಸಗಿ ಹಿಡಿತದಿಂದ ಮುಕ್ತವಾಗ್ತಿದೆ 108 ಆಂಬ್ಯುಲೆನ್ಸ್ – ಇನ್ನಾದರೂ ಸರಿಹೋಗಲಿ ಆರೋಗ್ಯ ಸೇವೆ
108 ಆಂಬ್ಯುಲೆನ್ಸ್ ನಿರ್ವಹಣೆಯನ್ನ ಖಾಸಗಿ ಏಜೆನ್ಸಿಗಳ ಹಿಡಿತದಿಂದ ತಪ್ಪಿಸಿ ರಾಜ್ಯ ಸರ್ಕಾರ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ…
Read More » -

ಪಾಪಿಗಳು ಹಸುವಿನ ಕೆಚ್ಚಲು ಕತ್ತರಿಸಿದ್ರು
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ತಮ್ಮಿಹಳ್ಳಿಯಲ್ಲಿ ದುಷ್ಕರ್ಮಿಗಳು ಹಸುವಿನ ಕೆಚ್ಚಲು ಕತ್ತರಿಸಿ ಕ್ರೌರ್ಯ ಮೆರೆದಿದ್ದಾರೆ. ತಮ್ಮಿಹಳ್ಳಿ ಗ್ರಾಮದ ಶೇಖರಪ್ಪ ಎಂಬುವರಿಗೆ ಸೇರಿದ 20 ಹಸುಗಳನ್ನು ಕದ್ದೊಯ್ಯಲು ಪ್ರಯತ್ನಿಸಿದ್ದಾರೆ.…
Read More » -

ನಾನು ಮತ್ತೆ ಬಿಜೆಪಿಗೆ ಬರ್ತಿನಿ-ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ವಿಜಯಪೂರ : ನಾನು ಬಿಜೆಪಿಗೆ ಮತ್ತೆ ಮರಳಿ ಬಂದೆ ಬರ್ತಿನಿ.ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರನನ್ನು ಕೆಳಗಿಳಿಸಿದರೆ ನಾನು ಬಿಜೆಪಿಗೆ ಬರುತ್ತೇನೆ ಎಂದು ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್…
Read More » -

HDK ಆರೋಗ್ಯದ ಬಗ್ಗೆ ನಿಖಿಲ್ ಫಸ್ಟ್ ರಿಯಾಕ್ಷನ್
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅನಾರೋಗ್ಯದ ಬಗ್ಗೆ ಇದೇ ಮೊದಲ ಬಾರಿಗೆ ಜೆಡಿಎಸ್ ಯುವನಾಯಕ, ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ…
Read More » -

ಸತತ ಆರು ಗಂಟೆಯ ಕಳ್ಳ-ಪೊಲೀಸ್ ಆಟ.. ಕಡೆಗೆ ಏನಾಯ್ತು?
ಬೆಂಗಳೂರು: ದೇಶದಲ್ಲಿಗ ಯುದ್ದದ ಕಾರ್ಮೋಡ ಕವಿದಿದೆ. ಆತಂಕದಲ್ಲೆ ಕಾಲ ದುಡುತ್ತಿರೋ ಸಮಯವಿದು. ಇಂತಹ ಹೊತ್ತಲ್ಲಿ ವೆಪನ್ ಹಿಡಿದು ರಾಜಾಜಿ ನಗರದ ಬಹುಮಹಡಿ ಕಟ್ಟಡದಲ್ಲಿರುವ ಜಿಯೋಮೆಟ್ರಿ ಪಬ್ ಒಳಗಡೆ…
Read More » -

ಖಾಲಿ ಟ್ರಂಕು, ಖಾಲಿ ಮಾತು: ಕುಮಾರಸ್ವಾಮಿಗೆ ಡಿಕೆ ಶಿವಕುಮಾರ್ ಗುದ್ದು
ರಾಮನಗರ : ಯಾರು, ಎಷ್ಟೇ ಕುತಂತ್ರ ಮಾಡಿದರೂ ಬೆಂಗಳೂರು ದಕ್ಷಿಣ ಹೆಸರನ್ನು ಅಳಿಸಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಕೇಂದ್ರ ಮಂತ್ರಿ ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್…
Read More » -

ಕಾಂತಾರ ಶೂಟಿಂಗ್ – ಮೇಲಿಂದ ಮೇಲೆ ಅಹಿತಕರ ಘಟನೆ
ಕಾಂತಾರ ಚಾಪ್ಟರ್ 1 ಸಿನಿಮಾ ಶೂಟಿಂಗ್ ಶುರುವಾದ ದಿನದಿಂದ ಒಂದಲ್ಲ ಒಂದು ಅವಾಂತರಗಳು ಉಂಟಾಗ್ತಿವೆ. ರಿಷಬ್ ಶೆಟ್ಟಿ ನಿರ್ದೇಶನದ ಹೊಂಬಾಳೆ ಫಿಲಮ್ಸ್ ನಿರ್ಮಾಣದ ಪ್ರತಿಷ್ಠಾತ್ಮಕ ಚಿತ್ರಕ್ಕೆ ಹೆಜ್ಜೆ…
Read More » -

ಕಾಂತಾರ ನಟ ರಾಕೇಶ್ ಪೂಜಾರಿ ಇನ್ನಿಲ್ಲ
ಕಾಂತಾರ ಸಿನಿಮಾದ ಸಹ ನಟ, ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ಆಕಸ್ಮಿಕ ಸಾವು ಕಂಡಿದ್ದಾರೆ. 33 ವರ್ಷದ ರಾಕೇಶ್ ಪೂಜಾರಿ ಹೃದಯಾಘಾತದಿಂದ ದಿಢೀರ್ ನಿಧನ ಹೊಂದಿದ್ದಾರೆ. ನಿನ್ನೆ…
Read More » -

ಕಾಶ್ಮೀರ ವಿವಾದದಲ್ಲಿ ಮೂಗು ತೂರಿಸಲು ಅಮೆರಿಕಾ ಯತ್ನ
ಭಾರತ-ಪಾಕಿಸ್ತಾನ ನಡುವೆ ಕದನ ವಿರಾಮ ಒಪ್ಪಂದ ಜಾರಿ ಆಗುತ್ತಲೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ಟ್ವೀಟ್ ಮಾಡಿದ್ದಾರೆ.ಅಮೆರಿಕದ ಮಧ್ಯಸ್ಥಿಕೆ ವಹಿಸಿದ ನಂತರ ಭಾರತ ಮತ್ತು ಪಾಕಿಸ್ತಾನ…
Read More » -

ಸ್ಲಂ ಬೋರ್ಡ್ ಅನರ್ಹ CE ವಿರುದ್ಧ ದೂರು
ಬೆಂಗಳೂರು:ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ಯ ಪ್ರಭಾರ ಮುಖ್ಯ ಎಂಜಿನಿಯರ್ ಸುದೀರ್ ಗೆ ಸಂಕಷ್ಟ ಎದುರಾಗಿದೆ. ಸ್ಲಂ ಬೋರ್ಡ್ ಪ್ರಭಾರ ಮುಖ್ಯ ಎಂಜಿನಿಯರ್ ಸುದೀರ್ ವಿರುದ್ದ ಸರ್ಕಾರಕ್ಕೆ…
Read More » -

ಇದು ಕರ್ನಲ್ ಸೋಫಿಯಾ ಅಸಲಿ ಸಾಧನೆ
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಜೊತೆಗೆ ಕೇಳಿ ಬರುತ್ತಿರುವ ಹೆಸರು ಕರ್ನಲ್ ಸೋಫಿಯಾ ಖುರೇಷಿ ಅವರದ್ದು. ಕನ್ನಡಿಗರು ಈಕೆ ನಮ್ಮ ಹೆಮ್ಮೆಯ…
Read More » -

ಇದೇ ಸಿಂಧೂರದ ಪವರ್.. ನಾರಿ ಶಕ್ತಿ ಮೂಲಕವೇ ಭಾರತ ಟಕ್ಕರ್
ಆಪರೇಷನ್ ಸಿಂಧೂರ.. ಹೆಸರೇ ಸೂಚಿಸುವಂತೆ ಇದು ಸಿಂಧೂರ ಅಳಿಸಿದವರ ವಿರುದ್ಧದ ಕಾರ್ಯಾಚರಣೆ.. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಶತಕೋಟಿ ಭಾರತೀಯರ ಹೃದಯವನ್ನು ಗೆದ್ದಿದ್ದಾರೆ. ಆಪರೇಷನ್ ಸಿಂಧೂರದ…
Read More » -

ಭಾರತದ ಬತ್ತಳಿಕೆಯಲ್ಲಿದ್ದ ಹೊಸ ಅಸ್ತ್ರ ಪ್ರಯೋಗ
ಪಾಕಿಸ್ತಾನಕ್ಕೆ ಕಾಳರಾತ್ರಿ ಅಂದ್ರೇನು ಎಂಬುದನ್ನು ಭಾರತ ತೋರಿಸಿದೆ. ತ್ರಿವಿಧ ದಳಗಳು ಅತ್ಯಂತ ಸಮನ್ವಯದಿಂದ ನಿರ್ವಹಿಸಿದ ಆಪರೇಷನ್ ಸಿಂದೂರದಲ್ಲಿ ಭಾರತೀಯ ಸೇನೆಯ ಬತ್ತಳಿಕೆಯಲ್ಲಿದ್ದ ಅತ್ಯಾಧುನಿಕ ಆಯುಧಗಳನ್ನು ಬಳಕೆ ಮಾಡಿದೆ.…
Read More » -

ಆಪರೇಷನ್ ಸಿಂಧೂರ.. ಫ್ರೀಡಂ ಟಿವಿಯಲ್ಲಿ ಸಂಪೂರ್ಣ ವಿವರ
ಆಪರೇಷನ್ ಸಿಂಧೂರ.. ಫ್ರೀಡಂ ಟಿವಿಯಲ್ಲಿ ಸಂಪೂರ್ಣ ವಿವರ ಭಾರತದಿಂದ 21 ಟಾರ್ಗೆಟ್.. ಪಾಕ್ ನ 12 ಕಡೆ, ಪಿಓಕೆಯ 9 ಕಡೆ ದಾಳಿ ಆರೋಗ್ಯ ಕೇಂದ್ರಗಳನ್ನು ಅವಾಯ್ಡ್…
Read More » -

ಜಸ್ಟೀಸ್ ಈಸ್ ಸರ್ವಡ್ – ಇಂಡಿಯನ್ ಆರ್ಮಿ ಘೋಷಣೆ
ರಾತ್ರೋರಾತ್ರಿ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದೆ. ಮಧ್ಯರಾತ್ರಿ 1.44ಕ್ಕೆ ಸರಿಯಾಗಿ ಆಪರೇಷನ್ ಸಿಂದೂರ್ ಹೆಸರಿನಲ್ಲಿ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ಸೇನೆ ಕ್ಷಿಪ್ರ ದಾಳಿ…
Read More » -

ಪಾಕ್ ಮೇಲೆ ಭಾರತದಿಂದ ಸರ್ಜಿಕಲ್ ಸ್ಟ್ರೈಕ್
ಪಹಲ್ಗಾಮ್ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಳ್ಳಲು ಶುರು ಮಾಡಿದೆ. ರಾತ್ರೋರಾತ್ರಿ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದೆ. ಮಧ್ಯರಾತ್ರಿ 1.44ಕ್ಕೆ ಸರಿಯಾಗಿ ಆಪರೇಷನ್ ಸಿಂದೂರ್ ಹೆಸರಿನಲ್ಲಿ ಪಾಕಿಸ್ತಾನದ…
Read More » -

ಯುದ್ಧ ಮೆತ್ತನೆಯ ಹಾಸಿಗೆಯಲ್ಲ.. ವಿಶಾಲ ಸ್ಮಶಾನದಂತೆ – ಆರ್ಮಿ ಪೈಲೆಟ್ ಟ್ರೈನರ್ ಅರವಿಂದ್ ಶರ್ಮಾ
400 ಭಾರತೀಯ ಯೋಧರಿಗೆ ಪೈಲೆಟ್ ತರಬೇತಿ ಕೊಟ್ಟಿರುವ ಕ್ಯಾಪ್ಟನ್ ಅರವಿಂದ್ ಶರ್ಮಾ ಅವರ ಸಂದರ್ಶನವನ್ನು ಫ್ರೀಡಂ ಟಿವಿಯ ಆಂಕರ್ ಸಾಹೀಲ್ ಮಾಡಿದ್ದಾರೆ. ಯುದ್ಧ ಮೆತ್ತನೆಯ ಹಾಸಿಗೆ ಅಲ್ಲ..…
Read More » -

ಡಿಕೆಶಿ ಸಿಎಂ ಆಗೇ ಆಗ್ತಾರೆ – ಅಜ್ಜಯ್ಯ ಸ್ವಾಮೀಜಿ ಭವಿಷ್ಯ
ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿಸಿ, ಅವರಿಂದಲೇ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲ್ಲೂಕಿನ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ತ್ರಿಕೋಟಿ ಶಿವಲಿಂಗ ಸ್ಥಾಪಿಸುವೆ ಎಂದು ನೊಣವಿನಕೆರೆ ಕಾಡಸಿದ್ದೇಶ್ವರಮಠದ ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಶಿವಾಚಾರ್ಯ…
Read More » -

ಪೊಲೀಸರಿಗೆ ಎಸಿ ಹೆಲ್ಮೆಟ್ – ನಿಮ್ಮ ತಲೆ ತಣ್ಣಗಿರ್ಲಿ
ರಾಜ್ಯದಲ್ಲಿ ಮೊದಲ ಬಾರಿಗೆ ಟ್ರಾಫಿಕ್ ಪೊಲೀಸರಿಗೆ ಎಸಿ ಹೆಲ್ಮೆಟ್ ವಿತರಣೆ ಮಾಡಲಾಯ್ತು. ಕಲಬುರಗಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತ ಡಾ. ಶರಣಪ್ಪ…
Read More » -

ಮಾಕ್ ಡ್ರಿಲ್ ಅಂದ್ರೆ ಕ್ರಿಕೆಟ್ ಮ್ಯಾಚ್ ಗೆ ಮುನ್ನ ಪ್ರಾಕ್ಟೀಸ್ ಇದ್ದಂತೆ – ನಿವೃತ್ತ ಸೇನಾನಿ ಎಸ್ಎಂ ತಳವಾರ್
ಮಾಕ್ ಡ್ರಿಲ್ ಅಂದ್ರೆ ಏನು ಅನ್ನೋದನ್ನು ತುಂಬಾನೆ ಸಿಂಪಲ್ ಆಗಿ, ಎಲ್ಲರಿಗೂ ಅರ್ಥ ಆಗುವಂತೆ ವಿವರಿಸಿದ್ದಾರೆ ವಾಯುಪಡೆಯ ನಿವೃತ್ತ ಅಧಿಕಾರಿ ಎಸ್ ಎಂ ತಲವಾರ್. 1964ರಲ್ಲಿ ಏರ್…
Read More » -

ಮಾಕ್ ಡ್ರಿಲ್ ಅಂದ್ರೆ ಏನು..? 1971ರಲ್ಲಿ ಏನಾಗಿತ್ತು ಗೊತ್ತಾ?
ಭಾರತ- ಪಾಕಿಸ್ತಾನ ನಡುವಿನ ಉದ್ವಿಗ್ನತೆ ಉಚ್ಛಮಟ್ಟವನ್ನು ತಲುಪಿದ ಕಾರಣ ಕೇಂದ್ರ ಗೃಹ ಸಚಿವಾಲಯ, ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಜೆಗಳು ಹೇಗೆ ಪ್ರಾಣ ಕಾಪಾಡಿಕೊಳ್ಳಬೇಕು ಎಂಬ ಬಗ್ಗೆ ಅವಗಾಹನೆ ಕಲ್ಪಿಸಲು…
Read More » -

ಗಾಲಿ ಜನಾರ್ದನ ರೆಡ್ಡಿ ಮುಂದಿರುವ ಆಯ್ಕೆಗಳೇನು?
ಓಬುಳಾಪುರಂ ಮೈನಿಂಗ್ ಪ್ರಕರಣದಲ್ಲಿ ಗಂಗಾವತಿಯ ಶಾಸಕ ಜನಾರ್ದನ ರೆಡ್ಡಿಗೆ ಸಿಬಿಐ ಕೋರ್ಟ್ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಹೀಗಾಗಿ ಜನಾರ್ದನ ರೆಡ್ಡಿಗೆ ಜೈಲು ಶಿಕ್ಷೆಯ ಭೀತಿ…
Read More » -

ಗಣಿ ಅಕ್ರಮ ಕೇಸಲ್ಲಿ ಜನಾರ್ದನ ರೆಡ್ಡಿಗೆ ಏಳು ವರ್ಷ ಜೈಲು
ಓಬುಳಾಪುರಂ ಮೈನಿಂಗ್ ಪ್ರಕರಣದಲ್ಲಿ ಹೈದ್ರಾಬಾದ್ ನಲ್ಲಿರುವ ನಾಂಪಲ್ಲಿ ಕೋರ್ಟ್ ಅಂತಿಮವಾಗಿ ಮಹತ್ವದ ತೀರ್ಪು ನೀಡಿದೆ. ಸುದೀರ್ಘ 15 ವರ್ಷ ವಿಚಾರಣೆ ನಡೆಸಿದ್ದ ಸಿಬಿಐ ಕೋರ್ಟ್ ಇಂದು ತೀರ್ಪು…
Read More » -

ಭಾರತದ ನಡೆಗೆ.. ಪಾಕಿಸ್ತಾನ ದೇಶಕ್ಕೆ ಹೆಚ್ಚಿದ ಆತಂಕ..!
ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ನರಮೇದಕ್ಕೆ 28 ಜನ ಭಾರತೀಯರು ಬಲಿಯಾಗಿದ್ದಾರೆ. ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಮೇ 7 ರಂದು ಮಾಕ್…
Read More » -

ಸೈನಿಕರ ಜೊತೆ ಬಿಜೆಪಿ ಮುಖಂಡನ ನೃತ್ಯ..ದೇಶದ್ಯಂತ ಭುಗಿಲೆದ್ದ ಆಕ್ರೋಶ..!
ಬೆಂಗಳೂರು : ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ಅಟ್ಟಹಾಸಕ್ಕೆ 28 ಜನ ಸಾವನ್ನಪ್ಪಿದ್ದಾರೆ.ಆದರೆ ಬಿಜೆಪಿ ಮುಖಂಡನೊಬ್ಬ ಸೈನಿಕರ ಜೊತೆ ರೀಲ್ಸ್ ಮಾಡಿ ಕುಣಿದು ಕುಪ್ಪಳಿಸುತ್ತಿದ್ದಾನೆ.ಜಮ್ಮು ಕಾಶ್ಮೀರದ ಮಾಜಿ…
Read More » -

ನೀಟ್ ಪರೀಕ್ಷೆಯಲ್ಲೂ ಜನಿವಾರ ವಿವಾದ – ಆಕ್ರೋಶ ಸ್ಫೋಟ
ಜನಿವಾರ-ಶಿವದಾರ ವಿವಾದ ಮತ್ತೆ ಮತ್ತೆ ಸದ್ದು ಮಾಡ್ತಿದೆ. ಕಲಬುರಗಿಯಲ್ಲಿ ನೀಟ್ ಪರೀಕ್ಷೆಯಲ್ಲಿಯೂ ಬಲವಂತವಾಗಿ ಪರೀಕ್ಷಾರ್ಥಿಯಿಂದ ಜನಿವಾರ ತೆಗೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಕಲಬುರಗಿಯ ಸಂತ ಮೇರಿ ಶಾಲೆಯ…
Read More » -

ಕೋಮು ಪ್ರಚೋದನೆ – BJP ಶಾಸಕ ಹರೀಶ್ ಪೂಂಜಾ ವಿರುದ್ಧ FIR
ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ನಂತರ ಕೋಮು ಪ್ರಚೋದನಕಾರಿ ಭಾಷಣ, ಪೋಸ್ಟ್ ಹಾಕುವವರ ವಿರುದ್ಧ ಪೊಲೀಸರು ಪ್ರಕರಣದ ಮೇಲೆ ಪ್ರಕರಣ ದಾಖಲು ಮಾಡುತ್ತಿದ್ದಾರೆ. ಇದೀಗ ಮುಸ್ಲಿಂ ಧರ್ಮದ…
Read More » -

ಸಿಎಂ ಆಣಿಮುತ್ತು ಹೆಕ್ಕಿ ಹೆಕ್ಕಿ ಇಡ್ತೀವಿ – ಜೆಡಿಎಸ್ ವಾರ್ನಿಂಗ್
ಗೌಡರ ಗರಡಿಯಲ್ಲೇ ಬೆಳೆದು ರಾಜಕೀಯ ಬದುಕು ಕಟ್ಟಿಕೊಂಡ ಸಿದ್ದರಾಮಯ್ಯನವರು ಇಬ್ಬಗೆಯ ನೀತಿ ಬಗ್ಗೆ ಆಣಿಮುತ್ತು ಉದುರಿಸಿದ್ದಾರೆ. ಆಣಿಮುತ್ತು ಉದುರಿಸುವ ಭರದಲ್ಲಿ ತಾವೇನು? ತಮ್ಮ ನಿಜಬಣ್ಣವೇನು ಎಂಬುದನ್ನು ಮತ್ತೊಮ್ಮೆ…
Read More » -

ಜಾತಿಗಣತಿ: ಶಂಖದಿಂದ ಬಂದರೆ ಮಾತ್ರ ತೀರ್ಥ – ಸಿದ್ದರಾಮಯ್ಯ
ಜಾತಿಗಣತಿಯನ್ನು ಮಾಡಿಸುವ ಮೂಲಕ ಸಿದ್ದರಾಮಯ್ಯ ಜಾತಿ ಜಾತಿಗಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಡುತ್ತಿದ್ದಾರೆ ಎಂದು ಟೀಕೆ ಮಾಡುತ್ತಿದ್ದವರು ಈಗ ಕೇಂದ್ರ ಸರ್ಕಾರ ಜಾತಿಗಣತಿ ಮಾಡಿಸುವುದನ್ನು ಮುಕ್ತ ಮನಸ್ಸಿನಿಂದ ಸ್ವಾಗತ…
Read More » -

ಸುಪಾರಿಗೆ ಪರಿಹಾರ ಹಣ – ನಂಗೊತ್ತಿಲ್ಲ ಅಂದ್ರು ಸಿಎಂ
ಹಾನಗಲ್ – ಸಮಾಜಘಾತಕ ಶಕ್ತಿಗಳನ್ನು ಮಟ್ಟಹಾಕಲು ಹಾಗೂ ಪತ್ತೆ ಹಚ್ಚಲು ಒಂದು ವಿಶೇಷ ಪಡೆಯ ಅಗತ್ಯವಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಕರಾವಳಿಯಲ್ಲಿ ಕೋಮು ಹಿಂಸೆ ನಿಗ್ರಹ ಕಾರ್ಯಪಡೆ…
Read More » -

ಪೋಕ್ಸೋ ಅಪರಾಧಿಗೆ 8 ವರ್ಷ ಜೈಲು
ಮಂಡ್ಯ -ಪ್ರಾಪ್ತ ಬಾಲಕಿ ಮೇಲೆ ತೀವ್ರತರ ಲೈಂಗಿಕ ದೌರ್ಜನ್ಯ ನಡೆಸಿದ್ದ ಪೋಕ್ಸೋ ಅಪರಾಧಿಗೆ ಎಂಟು ವರ್ಷ ಜೈಲು ಶಿಕ್ಷೆ ವಿಧಿಸಿ ಪೋಸ್ಕೋ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.…
Read More » -

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕತಿಕ್ಯಾತನಹಳ್ಳಿಯ ಪ್ರಗತಿ ಉತ್ತಮ ಸಾಧನೆ
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪಾವಗಡ ತಾಲೂಕು ವೈಎನ್ ಹೊಸಕೋಟೆ ಹೋಬಳಿ ಮರಿದಾಸನಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕತಿಕ್ಯಾತನಹಳ್ಳಿ ಗ್ರಾಮದ ಬಾಲಕಿ ಕೆವಿ ಪ್ರಗತಿ ಉತ್ತಮ ಸಾಧನೆ ಮಾಡಿದ್ದಾರೆ. ನಿಡಗಲ್ ಹೋಬಳಿ…
Read More » -

ಪುಕ್ಸಟ್ಟೆ ಪ್ರಚಾರ ಪಡೆದ್ರಾ ಸಚಿವ ಶಿವಾನಂದ ಪಾಟೀಲ್
ಸಚಿವ ಶಿವಾನಂದ ಪಾಟೀಲ್ ಮತ್ತು ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಲ್ ನಡುವಿನ ರಾಜಕೀಯ ಜಂಗೀಕುಸ್ತಿ ತಾರಕಕ್ಕೆ ಏರಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಸ್ಪರ್ಧೆ…
Read More » -

ಪೆಹಲ್ಗಾಂ ಗೆ ಪ್ರಧಾನಿ ಮೋದಿ ಏಕೆ ಭೇಟಿ ನೀಡಲಿಲ್ಲ?
ಬೆಂಗಳೂರು : ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆಯಾದ ಸ್ಥಳಕ್ಕೆ ಬಿಜೆಪಿಯವರು ಭೇಟಿ ನೀಡಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ, ಬಿಜೆಪಿಯವರು ಯಾವಾಗಲೂ ರಾಜಕೀಯವಾಗಿ…
Read More » -

ಬಿಜೆಪಿ ಮಹಿಳಾ ಮಂತ್ರಿಯನ್ನು ಬಿಡದ ಪೋಕಿರಿಗಳು.. ಫೋನ್ ಟಾರ್ಚರ್…
ಮಹಾರಾಷ್ಟ್ರದ ಮಹಿಳಾ ಮಂತ್ರಿ, ಬಿಜೆಪಿ ನಾಯಕಿ ಪಂಕಜಾ ಮುಂಡೆ ಪೋಕಿರಿಗಳಿಂದ ಕಿರುಕುಳ ಅನುಭವಿಸಿದ್ದಾರೆ. ಬಿಜೆಪಿ ನಾಯಕಿಗೆ ಟಾರ್ಚರ್ ಕೊಟ್ಟ ವ್ಯಕ್ತಿಯನ್ನು ಪುಣೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಕಳೆದ ಕೆಲ…
Read More » -

BDA ಕೆಂಪೇಗೌಡ ಬಡಾವಣೆ ಅಧ್ವಾನಗಳ ಮಹಾಪೂರ
ಬಿಡಿಎ ಕೆಂಪೇಗೌಡ ಲೇಔಟ್ ನಿರ್ಮಿಸಿ ದಶಕ ಕಳೆದ್ರೂ ಮೂಲಭೌತ ಸೌಕರ್ಯಗಳು ಸಿಕ್ಕಿಲ್ಲ. ಬಡಾವಣೆಯಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಅಧಿಕಾರಿ ವರ್ಗ ವಿಳಂಬ ಧೋರಣೆ ತಾಳುತ್ತಿದೆ. 2024ರ ನವೆಂಬರ್…
Read More » -

ಮನೆ ದೇವರಿಗೆ ಲಾಲಿ ಹಾಡಿದ ಸಿಎಂ
ಅಲ್ಲಪಟ್ಟಣದಿಂದ ಮೆಲ್ಲ ಮೆಲ್ಲನೇ ಬಂದೆ, ಅನ್ನದಾನೇಶ್ವರಾ…ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮನೆದೇವರ ಕುರಿತಾದ ಲಾವಣಿಯ ಸಾಲುಗಳನ್ನು ಹಾಡಿದರು. ಶ್ರೀರಂಗಪಟ್ಟಣದ ಅಲ್ಲಾಪಟ್ಟಣದ ಶ್ರೀ ಅನ್ನದಾನೇಶ್ವರ ಸ್ವಾಮಿ ದೇವ್ಥಾನ…
Read More » -

ಬಿಜೆಪಿ ಮತ್ತು ಆರ್.ಎಸ್.ಎಸ್ ಗೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಮೇ 02 : ಬಿಜೆಪಿ ಮತ್ತು ಆರ್.ಎಸ್.ಎಸ್ ಗೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಲ್ಲ. ಈ ಬಗ್ಗೆ ಅವರಿಗೆ ಬದ್ಧತೆಯೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…
Read More » -

ಸಚಿವ ಶಿವಾನಂದ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ..!
ಬಿಜೆಪಿ ಉಚ್ಚಾಟಿತ ಶಾಸಕ ಬಸವನಗೌಡ ಪಾಟೀಲ್ ಸವಾಲ್ ಸ್ವೀಕರಿಸಿದ ಸಚಿವ ಶಿವಾನಂದ ಪಾಟೀಲ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸ್ಪೀಕರ್ ಯುಟಿ ಖಾದರ್ ಅವರಿಗೆ ತಮ್ಮ…
Read More » -

SSLC ಫಲಿತಾಂಶ ಪ್ರಕಟ : ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ..ಹಾಗಾದ್ರೆ ಕೊನೆ ಸ್ಥಾನ ಯಾವುದು…?
ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ 2024-25ನೇ ಸಾಲಿನ SSLC ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಇಂದು ಶುಕ್ರವಾರ ಪ್ರಕಟಿಸಿದ್ದು, ಈ ವರ್ಷ ಶೇ.…
Read More » -

ಉ.ಕ. ಮಂದಿಗೆ ಸಿದ್ದರಾಮಯ್ಯರ ಮೇಲಿದ್ದ ಗೌರವ ಕಡಿಮೆ ಆಯಿತು….!
1994 ಬ್ಯಾಚಿನ ಅತ್ಯಂತ ಗೌರವಾನ್ವಿತ ಪೋಲೀಸು ನೌಕರಿ ಮಾಡುತ್ತಿರುವ ಹಿರಿಯ ಪೋಲೀಸು ಅಧಿಕಾರಿ, ಧಾರವಾಡದ ಹೆಚ್ಚುವರಿ ಪೋಲೀಸು ವರಿಷ್ಠರಾದ ನಾರಾಯಣ.ವಿ.ಭರಮನಿಯರ ಜೊತೆಗೆ ತುಂಬಿದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ…
Read More » -

ಬಸ್ನಲ್ಲೇ ನಮಾಜ್ ಮಾಡಿದ್ದ ಚಾಲಕ ಎ.ಆರ್. ಮುಲ್ಲಾ ಅಮಾನತು..!
ಹುಬ್ಭಳ್ಳಿ-ಹಾವೇರಿ : ಪ್ರಯಾಣಿಕರು ಇರುವಾಗಲೇ ಸರ್ಕಾರಿ ಬಸ್ ಮಾರ್ಗ ಮಧ್ಯೆ ನಿಲ್ಲಿಸಿ ಬಸ್ನಲ್ಲೇ ನಮಾಜ್ ಮಾಡಿದ ಚಾಲಕನನ್ನು ಕೆಲಸದಿಂದ ಅಮಾನತು ಮಾಡಿದ NWKRTC. ಸರ್ಕಾರಿ ಬಸ್ನಲ್ಲಿ ನಮಾಜ್…
Read More » -

ನಾನು ಡಿ ಕೆ ಸುರೇಶ್ ಹೆಂಡತಿ..! ಆ ಮಹಿಳೆ ಯಾರು..?
ನಾನು ಡಿ ಕೆ ಸುರೇಶ್ ಹೆಂಡತಿ ಎಂದು ಹೇಳಿದ್ದ ಮಹಿಳೆ ಮೇಲೆ ಎಫ್ಐಆರ್ ದಾಖಲಾಗಿದೆ. ಮಾಜಿ ಸಂಸದ ಡಿ ಕೆ ಸುರೇಶ್ ಅವರ ವಕೀಲ ಪ್ರದೀಪ್ ಕೊಟ್ಟ…
Read More » -

ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಯುವಕನ ಹತ್ಯೆ – ಪೊಲೀಸ್ ಇನ್ಸ್ಪೆಕ್ಟರ್ ಅಮಾನತು
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಲ್ಲಿ ನಡೆದಿದ್ದ ಹತ್ಯೆ ಸಂಬಂಧ ಪೊಲೀಸ್ ಇನ್ಸ್ಪೆಕ್ಟರ್ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಮಂಗಳೂರು ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಶಿವಕುಮಾರ್ ಕೆ ಆರ್, ಹೆಡ್…
Read More » -

ಡಿಕೆ ಸುರೇಶ್ ನನ್ನ ಗಂಡ ಎಂದ ಮಹಿಳೆ ಮೇಲೆ FIR..!
ಮಾಜಿ ಸಂಸದ ಡಿಕೆ ಸುರೇಶ್ ಅವರ ಹೆಂಡತಿ ಎಂದು ಹೇಳಿಕೊಂಡು ಫೇಸ್ಬುಕ್ನಲ್ಲಿ ವಿಡಿಯೋ ಹರಿಬಿಟ್ಟ ಮಹಿಳೆ ಮೇಲೆ ದೂರು ದಾಖಲಾಗಿದೆ.. ವಿಡಿಯೋ ಹರಿಬಿಟ್ಟ ಬಿಟ್ಟ ಮಹಿಳೆ: ನಾನು…
Read More » -

ಲಾಯರ್ ಜಗದೀಶ್ ಗೆ ಬೇಲ್.. ಆದರೆ..?
ಇಂದು ವಕೀಲ ಕೆಎನ್ ಜಗದೀಶ್ ಅವರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆದರೆ, ಜಾಮೀನಿನ ಪ್ರಕ್ರಿಯೆಗಳು ಮುಗಿದಿಲ್ಲ. ನಾಳೆ ಸರ್ಕಾರಿ ರಜೆ ಇರುವ ಕಾರಣ ನಾಡಿದ್ದು ಅವರು…
Read More » -

ದೇಶ ವಿರೋಧಿಗಳ ವಿರುದ್ಧ ಸ್ಪೈವೇರ್ ಬಳಸಿದ್ರೆ ತಪ್ಪೇನು? : ಸುಪ್ರೀಂಕೋರ್ಟ್
ಮಹತ್ವದ ಬೆಳವಣಿಗೆಯಲ್ಲಿ ದೇಶದಲ್ಲಿ ಭದ್ರತೆಗಾಗಿ ಬೇಹುಗಾರಿಕೆ ತಂತ್ರಾಂಶ ಬಳಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಇದೇ ವೇಳೆ, ಖಾಸಗಿ ವ್ಯಕ್ತಿಗಳ ವಿರುದ್ಧ ಅದನ್ನು ಬಳಸಲಾಗುತ್ತಿದೆ ಎಂಬ…
Read More » -

35 ಎಸೆತಗಳಲ್ಲಿ ಐಪಿಎಲ್ ಸೆಂಚುರಿ..? ಅದೂ 14ನೇ ವಯಸ್ಸಲ್ಲಿ..? ಅದ್ಭುತ ಹುಡುಗ..!
ಅಬ್ಬಾ.. ಅದೇನು ಧೈರ್ಯ.. ಅದೇನು ವೈಭವ..? ಅದೇನು ಆಟ.. ಈತ ಬರೀ ಪೋರನಲ್ಲ.. ಪ್ರಚಂಡ ಪೋರ.. ಐಪಿಎಲ್ ಹುಟ್ಟಿದಾಗ ವೈಭವ್ ಸೂರ್ಯವಂಶಿ ಹುಟ್ಟಿಯೇ ಇರಲಿಲ್ಲ.. ಐಪಿಎಲ್ ಶುರುವಾಗಿ…
Read More » -

ಸಿದ್ದರಾಮಯ್ಯ ಪಾಕಿಸ್ತಾನದ ಏಜೆಂಟ್ – ಯತ್ನಾಳ್
ಪಾಕಿಸ್ತಾನದ ಜೊತೆಗೆ ಯುದ್ಧ ಮಾಡುವ ಅನಿವಾರ್ಯತೆ ಇಲ್ಲ ಅಂತಾ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ, ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ. ಹುಬ್ಬಳ್ಳಿಯಲ್ಲಿ ವಾಗ್ದಾಳಿ ನಡೆಸಿರುವ…
Read More » -

ರಾಜ್ಯದಲ್ಲಿ 2 ರಾಜಕೀಯ ಪಕ್ಷಗಳ ಉದಯಕ್ಕೆ ಸಿದ್ಧತೆ
ರಾಜ್ಯದಲ್ಲಿ ಎರಡು ಹೊಸ ರಾಜಕೀಯ ಪಕ್ಷಗಳ ಉದಯವಾಗಲಿದೆ. ಪ್ರಾದೇಶಿಕ ಪಕ್ಷ ಜೆಡಿಎಸ್ಗೆ ಹೊಸ ಪಾರ್ಟಿ ಸೆಡ್ಡು ಹೊಡೆಯಲು ಮುಂದಾಗಿದೆ. ಕನ್ನಡ ಆಸ್ಮಿತೆ ಉಳಿಸಲು ಕರವೇ ಪಾರ್ಟಿ ಜನ್ಮ…
Read More » -

ಬಿಜೆಪಿಯವ್ರಿಗೆ ಒಂದೇ ಒಂದು ಸಭೆ ಮಾಡಲು ಬಿಡುವುದಿಲ್ಲ :ಡಿ.ಕೆ.ಶಿವಕುಮಾರ್
ಬೆಳಗಾವಿ : ಕರ್ನಾಟಕ ಬಿಜೆಪಿ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಎಚ್ಚರಿಕೆ ಕೊಟ್ಟ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್.ಕರ್ನಾಟಕದಲ್ಲಿ ಒಂದೇ ಒಂದು ಸಭೆ ಮಾಡಲು ಬಿಡಲ್ಲ ಇದು ನಮ್ಮ ಪ್ರತಿಜ್ಞೆ…
Read More » -

ಪಹಲ್ಗಾಮ್ ದಾಳಿ – ವಿಜಯೇಂದ್ರ ಬಚಾವ್!
ರಾಜಕೀಯ ಪಲ್ಲಟಗಳ ಕಾರಣ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಕೊಕ್ ಕೊಡಲು ಹೈಕಮಾಂಡ್ ಮುಂದಾಗಿದೆ.. ಅಂದ್ಕೊಂಡಂತೆ ಎಲ್ಲಾ ಆಗಿದ್ರೆ ಇಷ್ಟೊತ್ತಿಗೆ ಬಿಜೆಪಿ ರಾಜ್ಯಾಧ್ಯಕ್ಷ…
Read More » -

ಸುಧಾಕರ್-ಪ್ರದೀಪ್ ಈಶ್ವರ್ ರಾಜಕೀಯ ಆಟ.. ಕರಗ್ತಿವೆ ಬೆಟ್ಟಗುಡ್ಡ
ಚಿಕ್ಕಬಳ್ಳಾಪುರದಲ್ಲಿ ಕಲ್ಲುಕ್ವಾರಿ ಪಾಲಿಟಿಕ್ಸ್ ಜೋರಾಗಿದೆ. ರೈತನಿಗೆ ಗುಂಡಿಟ್ಟ ಪ್ರಕರಣ ಸಂಬಂಧ ರಾಜಕೀಯ ಕೆಸರೆರಚಾಟ ಜೋರಾಗಿದೆ. ಕಳೆದ ವಾರ ರೈತನ ಮೇಲೆ ಗುಂಡು ಹಾರಿಸಿದ್ದ ಉದ್ಯಮಿ ಸಕಲೇಶ್ ಗೆ…
Read More » -

ಎಎಸ್ಪಿ ಮೇಲೆ ಕೈ ಎತ್ತಿದ ಸಿಎಂ.. ಆಗಿದ್ದಾದ್ರೂ ಏನು?
ಬೆಳಗಾವಿ ಕಾರ್ಯಕ್ರಮದಲ್ಲಿ ಎಎಸ್ಪಿ ಮೇಲೆ ಸಿಎಂ ಸಿದ್ದರಾಮಯ್ಯ ಹಲ್ಲೆಗೆ ಯತ್ನಿಸಿದ ಪ್ರಸಂಗ ನಡೆದಿದೆ.. ವೇದಿಕೆಯಲ್ಲೇ ಭದ್ರತೆಗೆ ನಿಯೋಜನೆಗೊಂಡಿದ್ದ ಧಾರವಾಡ ಎಎಸ್ಪಿ ನಾರಾಯಣ ಭರಮನಿಗೆ ಹೊಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ…
Read More » -

ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರುವುದಿಲ್ಲ :ಸಿಎಂಗೆ ಸಲಹೆ ಕೊಟ್ಟ ಆರ್.ಅಶೋಕ್
ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರುವುದಿಲ್ಲ. ಇನ್ನು ಮುಂದಾದರೂ ಸಿಎಂ ಸಿದ್ದರಾಯ್ಯ ಅವರು ತಮ್ಮ ಹೇಳಿಕೆಗಳಿಂದ ಕನ್ನಡಿಗರು ತಲೆ ತಗ್ಗಿಸುವಂತಹ ಸನ್ನಿವೇಶ ನಿರ್ಮಾಣವಾಗದಂತೆ ವರ್ತಿಸಿ ಎಂದು…
Read More » -

ಪರೀಕ್ಷೆಯಲ್ಲಿ ಜನಿವಾರವಾಯ್ತು..ಈಗ ಮಂಗಳಸೂತ್ರವೂ ಧರಿಸುವಂತಿಲ್ಲ..!
ರೈಲ್ವೆ ನೇಮಕಾತಿ ಮಂಡಳಿ ಪರೀಕ್ಷೆಯಲ್ಲಿ ಮಂಗಳಸೂತ್ರ ಮತ್ತು ಧರ್ಮದ ಸಂಕೇತಗಳನ್ನು ಧರಿಸದಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.. ಇತ್ತೀಚೆಗೆ ರಾಜ್ಯದಲ್ಲಿ ಸಿಇಟಿ ಪರೀಕ್ಷೆ ವೇಳೆ ಪರೀಕ್ಷಾರ್ಥಿಗಳು ಜನಿವಾರ…
Read More » -

ಯುದ್ಧ ಬೇಕಾ ಬೇಡ್ವಾ? ಸಿದ್ದರಾಮಯ್ಯ ಏನಂದ್ರು ಗೊತ್ತಾ?
ಯುದ್ಧ ಅಗತ್ಯವಿಲ್ಲ.. ಕಠಿಣ ಕ್ರಮ ಕೈಗೊಂಡ್ರೆ ಸಾಕು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತು ಭಾರೀ ಚರ್ಚೆಗೆ ಗ್ರಾಸವಾಗಿದೆ. ಸಿದ್ದರಾಮಯ್ಯ ಹೇಳಿಕೆ ಪಾಕಿಸ್ತಾನದ ಮೀಡಿಯಾಗಳಲ್ಲೂ ಸದ್ದು ಮಾಡಿದೆ. ಬಿಜೆಪಿ…
Read More » -

ಪಹಲ್ಗಾಮ್ ದಾಳಿಯಿಂದ ದೇಶದ ರಕ್ತ ಕುದಿಯುತ್ತಿದೆ : ನರೇಂದ್ರ ಮೋದಿ
ದೆಹಲಿ : ಜಮ್ಮು & ಕಾಶ್ಮೀರದ ಪಹಲ್ಗಾಮ್ ದಾಳಿಯಿಂದ ಭಾರತ ದೇಶದ ಪ್ರಜೆಗಳ ರಕ್ತ ಕುದಿಯುತ್ತಿದೆ.ದಾಳಿಕೋರರಿಗೆ ಕಠಿಣಾತಿ ಕಠಿಣ ಶಿಕ್ಷೆ ಕೋಡುತ್ತೇವೆ ಎಂದು ಪ್ರಧಾನ ಮಂತ್ರಿ ನರೇಂದ್ರ…
Read More » -

ಕಣಿವೆ ನಾಡಿಂದ ರಾಹುಲ್ ಗಾಂಧಿ ಸಂದೇಶ
ನಾವೆಲ್ಲ ಭಾರತೀಯರು.. ಒಗ್ಗಟ್ಟಾಗಿರಬೇಕು.ಭಯೋತ್ಪಾದಕರ ಕೃತ್ಯವನ್ನು ಮೆಟ್ಟಿ ನಿಲ್ಲಬೇಕು ಎಂದು ಲೋಕಸಭೆ ವಿಪಕ್ಹೇಷ ನಾಯಕ ರಾಹುಲ್ ಗಾಂಧಿ ಕರೆ ನೀಡಿದ್ದಾರೆ. ಭೀಕರ ಭಯೋತ್ಪಾದಕ ದಾಳಿಗೆ ಸಾಕ್ಷಿಯಾದ ಪಹಲ್ಗಾಮ್ಗೆ ಭೇಟಿ…
Read More » -

ಪಾಕಿಸ್ತಾನಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟ ಅಮಿತ್ ಶಾ..!
ಜಮ್ಮು ಕಾಶ್ಮೀರದ ಪಹಲ್ಗಾಂ ಜಿಲ್ಲೆಯಯಲ್ಲಿ ನಡೆದ ಉಗ್ರರ ಅಟ್ಟಹಾಸಕ್ಕೆ ಕೇಂದ್ರ ಸರ್ಕಾರ ಪ್ರತೀಕಾರಕ್ಕೆ ಮುಂದಾಗಿದೆ.ಭಾರತದಲ್ಲಿರುವ ಪಾಕಿಸ್ತಾನಿಗಳಿಗೆ ಭಾರತ ಬಿಟ್ಟು ಹೋಗುವಂತೆ ಗಡುವು ನೀಡಿದ ಕೇಂದ್ರ ಗೃಹ ಸಚಿವ…
Read More » -

ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ನಿಂದ ತೀವ್ರ ತರಾಟೆ..!
ಇನ್ಮುಂದೆ ವೀರ್ ಸಾವರ್ಕರ್ ವಿರುದ್ದ ಮಾತನಾಡಿದರೆ ಸ್ವಯಂ ದೂರು ದಾಖಲಿಸುಕೊಳ್ಳುತ್ತೇವೆ ಎಂದು ಸುಪ್ರೀಂ ಕೋರ್ಟ್ನಿಂದ ರಾಹುಲ್ ಗಾಂಧಿಗೆ ಛಡಿಯೇಟು. ವೀರ್ ಸಾವರ್ಕರ್ ವಿರುದ್ದ ಹೇಳಿಕೆ ನೀಡಿರುವ ವಿರೋಧ…
Read More »



















































































































































