#Exclusive NewsTop News
ಅಕ್ರಮ ನೀರಿನ ಸಂಪರ್ಕ ಪಡೆದಿದ್ರೆ ಇನ್ಮೇಲೆ ಎಚ್ಚರ.!

ಬೆಂಗಳೂರು ನಗರದಲ್ಲಿ ಲಕ್ಷಾಂತರ ಗ್ರಾಹಕರು ಅಕ್ರಮ ವಾಗಿ ಕಾವೇರಿ ನೀರು ಕುಡಿಯುತ್ತಿದ್ದು, ಹೀಗಾಗಿ ಅಕ್ರಮ ನೀರಿನ ಸಂಪರ್ಕ ಗಳ ವಿರುದ್ಧ ಜಲಮಂಡಳಿ ಸಮರ ಸಾರಿದೆ. ಅಕ್ರಮ ನೀರಿನ ಸಂಪರ್ಕ ಪಡೆದಿದ್ರೆ ಇನ್ಮೇಲೆ ಎಚ್ಚರ ವಹಿಸಿ.

ಕಾವೇರಿ ನೀರಿಗೆ ಕನ್ನ ಹಾಕಿದವರ ವಿರುದ್ಧ ಕ್ರಿಮಿನಲ್ ಕೇಸ್ಗೆ BWSSB ತಯಾರಿ ಮಾಡಿದ್ದು, ಬರೋಬ್ಬರಿ 1040 ಬಿಲ್ಡಿಂಗ್ ಮಾಲೀಕರಿಗೆ ನೋಟೀಸ್ ಕೊಟ್ಟಿದೆ. ಕೆಲವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ತಯಾರಿ ನಡೆಸಿದ್ದು, ಆಗಸ್ಟ್ ನಿಂದ 5200 ಕಡೆ ಜಲಮಂಡಳಿಯಿಂದ ಸರ್ವೇ ನಡೆದಿದೆ. ಈ ಪೈಕಿ 1040 ಕಟ್ಟಡ ಮಾಲೀಕರಿಗೆ ನೋಟೀಸ್ ಕೊಟ್ಟು ಅನಧಿಕೃತ ಸಂಪರ್ಕ ಅಧಿಕೃತಕ್ಕೆ ಸೂಚನೆ ನೀಡಿದೆ. ನೀರಿನ ಸಂಪರ್ಕ ಅಧಿಕೃತ ಮಾಡಿಕೊಳ್ಳದಿದ್ರೆ ಕ್ರಿಮಿನಲ್ ಕೇಸ್ ಎಚ್ಚರಿಕೆ ನೀಡಿದೆ….




