Sunday, December 7, 2025
18.9 C
Bengaluru
Google search engine
LIVE
ಮನೆಜಿಲ್ಲೆಕೊಪ್ಪಳ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ; ತಂಗಡಗಿ ರಾಜೀನಾಮೆ ನೀಡಲಿ- ಜನಾರ್ದನರೆಡ್ಡಿ

ಕೊಪ್ಪಳ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ; ತಂಗಡಗಿ ರಾಜೀನಾಮೆ ನೀಡಲಿ- ಜನಾರ್ದನರೆಡ್ಡಿ

ಕೊಪ್ಪಳ: ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಇದರ ನೈತಿಕಹೊಣೆ ಹೊತ್ತು ಸಚಿವ ಶಿವರಾಜ್​ ತಂಗಡಗಿ ರಾಜೀನಾಮೆ ನೀಡಲಿ ಎಂದು ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಈಗಾಗಲೇ ಬಿತ್ತನೆ ಮಾಡಿದ ರೈತರಿಗೆ ಯೂರಿಯಾ ಗೊಬ್ಬರ ಸಿಗುತ್ತಿಲ್ಲ.‌ ‌ಖಾಸಗಿ ಅಂಗಡಿಗಳಲ್ಲಿ ಕಾಳ ಸಂತೆಯಲ್ಲಿ‌ ದುಬಾರಿ ದರಕ್ಕೆ ಇದು ಸಿಗುತ್ತಿದೆ. ಕಾಳ‌ಸಂತೆಕೋರರ‌ ಹಿಂದೆ ಕಾಂಗ್ರೆಸ್ ನಾಯಕರು ಇದ್ದಾರೆ. ರೈತರು‌ ಕಂಗಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಸಚಿವ ಶಿವರಾಜ ತಂಗಡಗಿ ಗೊಬ್ಬರ ತರಿಸುವುದನ್ನು ಬಿಟ್ಟು ರಾಜಕೀಯ‌ ಮಾತನಾಡುತ್ತಿದ್ದಾರೆ. ಪ್ರಧಾನಿ ಮೋದಿಯವರನ್ನು ಕೇಳಿ ಅಂತಾ ರಾಜಕೀಯ ಹೇಳಿಕೆ ನೀಡುತ್ತಾ ಇದ್ದಾರೆ.‌ ಕೇಂದ್ರದಿಂದ‌ ಸಾಕಷ್ಟು ಯೂರಿಯಾ ಬಂದಿದೆ. ಆದ್ರೆ ಅದು ಕಾಳ ಸಂತೆಗೆ ಹೋಗಿದೆ. ತಂಗಡಗಿ ರೈತರ ವಿಷಯದಲ್ಲಿ ರಾಜಕೀಯ ಮಾಡೋದನ್ನು‌ ಬಿಟ್ಟು ರೈತರಿಗೆ ಸ್ಪಂದಿಸಲಿ, ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ನೆರವಾಗಲಿ ಎಂದು ಕಿಡಿಕಾರಿದ್ರು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments