Editorial
- Editorial

ಸಂಪಾದಕೀಯ..
ಹುದ್ದೆಗಳ ಸೇಲ್ ಕಾಲದಲ್ಲಿ ಆಡಳಿತಕ್ಕೆ ವಕ್ಕರಿಸಿದ ಅಧಿಕಾರಿಗಳ ಪಾಪ ಕೃತ್ಯದಿಂದ ಇಡೀ ರಾಜ್ಯವೇ ನರಳುತ್ತಿದೆ. ಯಾವುದೇ ಸೇವೆ ಸಿಗದ ಜನಸಾಮಾನ್ಯರದ್ದು ನರಕವೂ ಇಲ್ಲದ ಸ್ವರ್ಗವೂ ಇಲ್ಲದ ತ್ರಿಶಂಕು ಸ್ಥಿತಿ. ಸ್ವತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಜನರ ಜಮೀನು ಅವರ ಹೆಸರಿಗೆ ಆಗಿಲ್ಲ. ಲಂಚ ಕೊಡದೆ ಹುಲ್ಲುಕಡ್ಡಿಯೂ ಅಲುಗಲ್ಲ. ಗವರ್ನಮೆಂಟ್ ಜಾಬ್ ಬಿಟ್ರೆ ಯಾವುದೇ ಬಿಸಿನೆಸ್ ಮಾಡಿದರೂ ವೇಸ್ಟ್. ಕೃಷಿ ಮಾಡಿದರೂ ಬೆಳೆಯಲ್ಲ, ಉದ್ಯಮ ಕಟ್ಟಿದರೂ ಬೆಳೆಯೋಕಾಗಲ್ಲ. ಇದಕ್ಕೆ ಪ್ರಮುಖ ಅಡ್ಡಿಯೇ ಅಧಿಕಾರಶಾಹಿ. ಅಧಿಕಾರಶಾಹಿಯ ಕಬಂಧಬಾಹುಗಳು ಕಾನೂನುಗಳನ್ನು ಮೀರಿ ದೇಶವಾಸಿಗಳನ್ನು ಶೋಷಿಸಲು ನಿಂತಿವೆ. ನ್ಯಾಯಾಂಗ, ಶಾಸಕಾಂಗ ಮತ್ತು ಬ್ಯೂರೋಕ್ರಸಿಯ ಕೆಲ ಸುಧಾರಕರು ಎಷ್ಟೇ ಯತ್ನಪಟ್ಟರೂ ಭ್ರಷ್ಟರ ಕೋಟೆ ಭೇದಿಸಲು ಅಸಾಧ್ಯ ಎನ್ನುವಂತಾಗಿದೆ. ಇಂಥದ್ದೇ ಭ್ರಷ್ಟ ಕೂಟವೊಂದು ಬಿಡಿಎಯಲ್ಲಿ ಎಸಗಿರುವ ಮಹಾ ಹಗರಣವೊಂದು ಇದೀಗ ಚರ್ಚೆಯಲ್ಲಿದೆ. ಬಿಡಿಎಯನ್ನು ಜನಪರವಾಗಿಸಲು ಡಿಕೆ ಶಿವಕುಮಾರ್ ಅವರು ಆಯುಕ್ತ ಮಣಿವಣ್ಣನ್ ಅವರ ಮೂಲಕ ಪ್ರಯತ್ನ ಮಾಡುತ್ತಿದ್ದರೆ, ಇತ್ತ ಭ್ರಷ್ಟ ಅಧಿಕಾರಿಗಳು ತಾವೇ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿರೋದು ಬಯಲಾಗಿದೆ.ಎಪ್ಪತ್ತಕ್ಕೂ ಹೆಚ್ಚು ಅಧಿಕಾರಿಗಳು ಬಿಡಿಎ ನಿರ್ಮಾಣ ಮಾಡುತ್ತಿರುವ ಬಡಾವಣೆಗಳಲ್ಲಿ ರೈತರ ಜಮೀನನ್ನು ತಾವೇ ಬೇನಾಮಿಯಾಗಿ ಖರೀದಿಸಿ ಪರಿಹಾರ ಪಡೆಯಲು ಮುಂದಾಗಿದ್ದಾರೆ. ತಮ್ಮ ನೆಂಟರು, ಸ್ನೇಹಿತರು, ಕಡೆಗೆ ಅವರವರ ಪ್ರೇಯಸಿಯರ ಹೆಸರಲ್ಲೂ ಬೇನಾಮಿ ಹೂಡಿಕೆ ಮಾಡಿದ್ದಾರೆ. ಪರಿಹಾರ ಕೇಳಿ ಬರುವ ರೈತರಿಂದಲೇ ಜಿಪಿಎ, ಕ್ರಯದ ಕರಾರು ಒಪ್ಪಂದ ಮಾಡಿಕೊಂಡು ಸರ್ಕಾರಕ್ಕೆ ದ್ರೋಹ ಬಗೆಯುತ್ತಿದ್ದಾರೆ. ಕಮಾಯಿಸಿದ ಬ್ಲಾಕ್ ಮನಿಯನ್ನು ಎಸ್ಆರ್ ರೇಟ್ನಲ್ಲಿ ಬ್ಯಾಂಕ್ ಅಕೌಂಟ್ ಮೂಲಕ ಮತ್ತು ಉಳಿದ್ದನ್ನು ಕ್ಯಾಶ್ ಮೂಲಕ ಇನ್ವೆಸ್ಟ್ ಮಾಡಿ ನೂರಾರು ಕೋಟಿ ವೈಟ್ ಮನಿ ಮಾಡಿಕೊಳ್ಳುವತ್ತ ದಾಪುಗಾಲಿಡುತ್ತಿದ್ದಾರೆ. ಅಮಾಯಕ ರೈತರಿಂದ ಭೂಮಿ ಬರೆಸಿಕೊಳ್ಳುವ ನೀಚರು ತಿಂದ ತಟ್ಟೆಯಲ್ಲಿ ಶೌಚ ಮಾಡುವ ದುಷ್ಕೃತ್ಯಕ್ಕೆ ಇಳಿದಿದ್ದಾರೆ. ಹೇಗೋ ಇವರ ದಂಧೆ ಡಿಸಿಎಂ ಡಿಕೆ ಶಿವಕುಮಾರ್ಗೆ ಗೊತ್ತಾಗಿದೆ. ಇಂಥ ದಂಧೆಕೋರರ ಆಟವನ್ನು ದಶಕಗಳಿಂದ ಬಲ್ಲ ಡಿಸಿಎಂ, ಬೇನಾಮಿ ಲ್ಯಾಂಡ್ ಡೀಲಿಂಗ್ ನಡೆಸುತ್ತಿದ್ದ ಅಧಿಕಾರಿಗಳ ಪಟ್ಟಿ ತರಿಸಿ ಎಲ್ಲರೆದುರು ನಿಲ್ಲಿಸಿ ಆಟ ನಿಲ್ಲಿಸದಿದ್ದರೆ ಜೋಡು ಕೈಗೆತ್ತಿಕೊಳ್ಳುವುದಾಗಿ ಗದರಿಸಿರುವ ಘಟನೆ ವರದಿಯಾಗಿದೆ. ಡಿಸಿಎಂ ಕೈಲಿ ಉಗಿಸಿಕೊಂಡ …
KANNADA NEWS
- ದೇಶ/ವಿದೇಶ

ಪಶ್ಚಿಮ ಏಷ್ಯಾದಲ್ಲಿ ಬಾಂಬ್ಗಳಿಗಿಂತ ಭೀಕರವಾಗುತ್ತಿದೆ ಸಾಂಕ್ರಾಮಿಕ ರೋಗಗಳ ಹಾವಳಿ!
ಪಶ್ಚಿಮ ಏಷ್ಯಾದಲ್ಲಿ ಹೆಚ್ಚಿರುವ ಸಂಘರ್ಷವು ಕೇವಲ ಯುದ್ಧಕ್ಕೆ ಸೀಮಿತವಾಗದೆ, ಬೃಹತ್ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಾಗಿ ಮಾರ್ಪಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಇರಾನ್ ಸೇರಿದಂತೆ ಹಲವು…
Read More » -

-

-











































