Tuesday, June 24, 2025
25.1 C
Bengaluru
Google search engine
LIVE
ಮನೆಜಿಲ್ಲೆಮುಳ್ಳಿನ ದೇಗುಲದಲ್ಲಿ ಮಿಂದೆದ್ದ ಭಕ್ತರು

ಮುಳ್ಳಿನ ದೇಗುಲದಲ್ಲಿ ಮಿಂದೆದ್ದ ಭಕ್ತರು

ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ಪರಶುರಾಂಪುರ ಹೋಬಳಿಯ ಪರ‍್ಲಹಳ್ಳಿ ಬಳಿಯ ವಸಲು ದಿನ್ನೆಯಲ್ಲಿ ಕಾಡುಗೊಲ್ಲರ ಆರಾಧ್ಯ ದೈವ ಶ್ರೀ ಕೇತೇದೇವರ ಕಳ್ಳಿಮುಳ್ಳಿನ ಪರಿಷೆ ಮುಳ್ಳಿನ ದೇಗುಲ ಏರಿ ದೇಗುಲ ಮೇಲಿನ ಕಂಚಿನ ಕಳಶಗಳನ್ನು ವೀರಗಾರರು ಕೀಳುವ ರೋಚಕ ಕ್ಷಣವನ್ನು ಸಾಹಸ್ರಾರು ಭಕ್ತರು ಕಣ್ಣು ತುಂಬಿಕೊಂಡರು.

ಕಳೆದ ವಾರಗಳ ಹಿಂದೆ ಕಳ್ಳಿಮುಳ್ಳಿನಿಂದ ನಿರ್ಮಿಸಿದ್ದ ದೇಗುಲದೊಳಗೆ ಶ್ರೀ ಕೇತೇದೇವರು ಹಾಗೂ ಪರಿವಾರದ ದೇವರುಗಳಾದ ಬಂಜಗೆರೆಈರಣ್ಣ, ಐಗರ‍್ಲಹಳ್ಳಿ ಗ್ರಾಮದ ತಾಳೀದೇವರು, ಬತವಿನದೇವರು, ಈರಬಡಕ್ಕ, ಕಾಟಮಲಿಂಗ, ಕರಿಯಣ್ಣ, ಸಿರಿಯಣ್ಣ, ಹಾಗೂ ಮೀಸಲು ಹೆಣ್ಣು ಮಗಳ ದೇವತೆಯಾದ ಕೋಟೆ ಸಿತಮ್ಮ ದೇವರುಗಳಿಗೆ ರಾಜ್ಯದ ನಾನಾ ಕಡೆಗಳಿಂದ ಆಗಮಿಸಿದ ಸಾಹಸ್ರಾರು ಭಕ್ತರು ಬೆಳಿಗ್ಗೆ ಯಿಂದ ಸಂಜೆ ತನಕ ಸರದಿಯ ಸಾಲಲ್ಲಿ ನಿಂತು ದೇವರ ದರ್ಶನ ಪಡೆದು ತಮ್ಮ ಇಷ್ಟಾರ್ಥದ ಹರಕೆಗಳನ್ನು ತೀರಿಸಿದರು. ಬಳಿಕ ಸಂಜೆ ಸುಮಾರು ಐದು ಗಂಟೆ ಗೋಧೂಳಿ ಸಮಯಕ್ಕೆ ಕಳ್ಳೆ ಮುಳ್ಳಿನ ದೇಗುಲದಲ್ಲಿದ್ದ ದೇವರುಗಳನ್ನು ಪೂಜಿಸಿ ಹೊರ ತರಲಾಯಿತು.

ಈ ವೇಳೆಗಾಗಲೆ ಮುಳ್ಳಿನ ದೇಗುಲ ಏರಿ ಕಳಸ ಕೀಳಲು ಚಳ್ಳಕೆರೆ ತಾಲೂಕಿನ ಚೌಳೂರು ಗ್ರಾಮದ ಎಲ್.ಜಿ.ಗೌಡ, ಕರ‍್ಲಕುಂಟೆ ಗ್ರಾಮದ ಮಾರುತಿ, ಕೆ.ಟಿ ಹಳ್ಳಿಯ ಟಿ.ಕುಮಾರ, ಹಿರಿಯೂರು ತಾಲೂಕು ಈಶ್ವರಗೆರೆ ಗ್ರಾಮದ ಮನುಯಾದವ್ ಹಾಗೂ ತುಮಕೂರು ಜಿಲ್ಲೆ ಶಿರಾ ತಾಲೂಕು ದ್ವಾರನಕುಂಟೆ ಗ್ರಾಮದ ರಾಘವೇಂದ್ರ ಎಂಬ ಐದು ಮಂದಿ ಈರಗಾರರು ಬರಿಗಾಲು ಬರಿಮೈಯಲ್ಲೇ ಸನಿಹದ ಅಕ್ಕಮ್ಮ ದೇಗುಲದ ಬಳಿಯ ಮಜ್ಜನ ಬಾವಿಯ ತಣ್ಣೀರಲ್ಲಿ ಮಿಂದು ಸಾವಿರಾರು ಭಕ್ತರೊಂದಿಗೆ ಜಾನಪದ ವಾದ್ಯಗಳ ಮೂಲಕ ಮುಳ್ಳಿನ ದೇಗುಲದ ಬಳಿ ಆಗಮಿಸಿದರು.

ಬಳಿಕ ದೇವರಿಗೆ ನಮಸ್ಕರಿಸಿ ಸ್ಥಳದಲ್ಲಿದ್ದ ಪೊಲೀಸರÀ ಮಾರ್ಗದರ್ಶನ ಪಡೆದು ಮುಳ್ಳಿನ ದೇಗುಲವನ್ನು ಕ್ಷಣಾರ್ಧದಲ್ಲಿ ಪೈಪೋಟಿಯಿಂದ ಹತ್ತಿದರು. ಐವರ ಪೈಕಿ ಪ್ರಥಮ ಕಳಶವನ್ನು ಶಿರಾ ತಾಲೂಕು ದ್ವಾರನಕುಂಟೆ ಗ್ರಾಮದ ರಾಘವೇಂದ್ರ ತುದಿಯ ಕಳಸ ಕಿತ್ತು ಈ ವರ್ಷದ ವೀರಗಾರನೆನಸಿಕೊಂಡ. ಬಳಿಕ ಈ ವೇಳೆ ಮುಳ್ಳಿನ ಮುಳ್ಳಿನ ದೇಗುಲದ ಮೇಲೆ ಕುಣಿದು ಕುಪ್ಪಳಿಸಿ ಭಕ್ತರೆಡೆ ಕೈಬೀಸಿ ಹರ್ಷವನ್ನು ವ್ಯಕ್ತಪಡಿಸಿದರು. ಉಳಿದವರು ಇನ್ನುಳಿದ ಕಳಶಗಳನ್ನು ಇಳಿಸುವ ಮೂಲಕ ಮುಳ್ಳಿನ ದೇಗುಲ ಕೆಳಗಿಳಿದರು. ಕಳಸ ಕಿತ್ತ ದ್ವಾರನಕುಂಟೆ ರಾಘವೇಂದ್ರನಿಗೆ ಹೂವಿನ ಹಾರಹಾಕಿ ಭಕ್ತರು ಹೊತ್ತು ಕುಣಿದರು.

ಜಾತ್ರೆ ಸ್ಥಳಕ್ಕೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಜಿಪಂ ಮಾಜಿ ಅಧ್ಯಕ್ಷರಾದ ರವಿಕುಮಾರ, ಮೀಸೆ ಮಹಲಿಂಗಪ್ಪ, ಕಾಡುಗೊಲ್ಲ ಸಮಾಜದ ರಾಜ್ಯಧ್ಯಕ್ಷ ರಾಜಣ್ಣ, ತಾಲೂಕು ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ, ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಮುರುಳಿಧರ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಶಶಿಧರ, ಚನ್ನಮ್ಮನಾಗತಿಹಳ್ಳಿ ಗ್ರಾಪಂ ಅಧ್ಯಕ್ಷ ಆನಂದ್, ಜಾನಪದ ಹಾಡುಗಾರ ಮೋಹನ್, ತಹಸೀಲ್ದಾರ್ ರೆಹಾನ್ ಪಾಷಾ, ಎಎಸ್‌ಪಿ ಕುಮಾರಸ್ವಾಮಿ, ಡಿವೈಎಸ್‌ಪಿ ರಾಜಣ್ಣ, ಸಿಪಿಐ ಕೆ.ಸಮೀವುಲ್ಲ, ಮುಖಂಡರಾದ ಚೌಳೂರು ದೇವರಾಜ, ಸಿರಿಯಣ್ಣ, ಕೃಷ್ಣಮೂರ್ತಿ, ಜಿ.ಟಿ.ನಾಗರಾಜ್, ದೇವರ ಪೂಜಾರಿಗಳು, ಗೌಡರು, ಯಜಮಾನರು, ವೀರಗಾರ ವಂಶಸ್ಥರು ಹಾಗೂ ಸಾವಿರಾರು ಭಕ್ತರು ಇದ್ದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments