ತುಮಕೂರು: ಮಹಿಳಾ ಪ್ರಯಾಣಿಕರಿಗೆ ಸರ್ಕಾರ ನೀಡಿರುವ ಉಚಿತ್ ಬಸ್ ಯೋಜನೆ ಹಲವು ಸಂಕಷ್ಟದ ಸ್ಥಿತಿಗಳನ್ನು ತಂದಿಡುತ್ತಿದೆ. ಬಸ್ನಲ್ಲಿ ಮಹಿಳೆಯೊಬ್ಬಳು ಉಸಿರುಗಟ್ಟಿ ಕೂಗಿಕೊಂಡಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣದಲ್ಲಿ ನಡೆದಿದೆ.
ಬಸ್ನಲ್ಲಿ ಜನಸಂದಣಿಯಿಂದ ಒಂದೇ ಸಮನೆ ನೂಕು-ನುಗ್ಗಲು ಉಂಟಾಗಿದ್ದು, ಮಹಿಳೆಯೊಬ್ಬರಿಗೆ ಉಸಿರಾಡಲು ತೊಂದರೆ ಉಂಟಾಗಿದೆ. ನನ್ನನ್ನು ಕಾಪಾಡಿ.. ಬಸ್ಸಿನಿಂದ ಕೆಳಗಿಳಿಸಿ ಎಂದು ಮಹಿಳೆ ಜೋರಾಗಿ ಕೂಗಿಕೊಂಡಿದ್ದಾಳೆ. ಕೂಡಲೇ ನಿರ್ವಾಹಕ ಬಸ್ ನಿಲ್ಲಿಸಿ ಮಹಿಳೆಯನ್ನು ಕೆಳಗಡೆ ಇಳಿಸಿದ್ದಾರೆ.
ಬಸ್ ಮೈಸೂರಿನಿಂದ ತುಮಕೂರಿಗೆ ಹೋಗುತ್ತಿದ್ದು, ಕುಣಿಗಲ್ನ ಗೌಡಗೆರೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಮಹಿಳೆಯರ ತಂಡ ಬಸ್ನಲ್ಲಿ ಹೊರಟಿದ್ದು, ಈ ವೇಳೆ ಅವಾಂತರ ನಡೆದಿದೆ.


