
ಜೀ ಕನ್ನಡದ ‘ಸರಿಗಮಪ ಲಿಟಲ್ ಚಾಂಪ್ಸ್’ ಕಾರ್ಯಕ್ರಮ ಅಂದಾಕ್ಷಣ ನೆನಪಾಗುವುದು ಅಪ್ಪಟ ಪ್ರತಿಭೆಗಳು. ಆದರೆ ಕಳೆದ ಕೆಲವು ಸೀಸನ್ಗಳಿಂದ, “ಈ ಶೋನಲ್ಲಿ ಕೇವಲ ಬಡತನ ಅಥವಾ ಕಷ್ಟದ ಕಥೆ ಇರುವವರಿಗೆ ಮಾತ್ರ ಮಣೆ ಹಾಕಲಾಗುತ್ತದೆ” ಎಂಬ ಟೀಕೆಗಳು ಕೇಳಿಬರುತ್ತಿದ್ದವು. ಈ ಬಾರಿ ಪ್ರೋಮೋ ಮೂಲಕವೇ ವಾಹಿನಿ ಇದಕ್ಕೆ ಸ್ಪಷ್ಟನೆ ನೀಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರೋಮೋ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. “ನಿಜವಾದ ಪ್ರತಿಭೆಗಳಿಗೆ ನ್ಯಾಯ ಸಿಗಲಿ” ಎಂದು ಅನೇಕರು ಆಶಿಸಿದ್ದರೆ, “ಪ್ರೋಮೋ ಶೈಲಿ ಸಖತ್ ಆಗಿದೆ” ಎಂದು ಸಂಗೀತ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶೋ ಯಾವಾಗ ಆರಂಭ?
ಸದ್ಯ ಆಡಿಷನ್ ಪ್ರಕ್ರಿಯೆಗಳು ಮುಗಿದಿದ್ದು, ಶೀಘ್ರದಲ್ಲೇ ಕಾರ್ಯಕ್ರಮದ ಪ್ರಸಾರದ ದಿನಾಂಕವನ್ನು ವಾಹಿನಿ ಅಧಿಕೃತವಾಗಿ ಘೋಷಿಸಲಿದೆ. ಎಂದಿನಂತೆ ಮಹಾ ಗುರುಗಳಾದ ಹಂಸಲೇಖ, ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಮತ್ತು ರಾಜೇಶ್ ಕೃಷ್ಣನ್ ಅವರು ತೀರ್ಪುಗಾರರಾಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.




