ಜಿಲ್ಲೆಸುದ್ದಿ

ಮಂತ್ರಾಲಯದ ಹುಂಡಿ ಎಣಿಕೆ: 21 ದಿನಗಳಲ್ಲಿ 2.48 ಕೋಟಿ ರೂಪಾಯಿ ಕಾಣಿಕೆ ಸಂಗ್ರಹ

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಕಳೆದ 21 ದಿನಗಳ ಕಾಣಿಕೆ ಹುಂಡಿ ಎಣಿಕೆ ಕಾರ್ಯವು ಮಂಗಳವಾರ ರಾತ್ರಿ ಪೂರ್ಣಗೊಂಡಿದ್ದು, ಒಟ್ಟು 2,48,28,737 ರೂಪಾಯಿ ಕಾಣಿಕೆ ಸಂಗ್ರಹವಾಗಿದೆ. ಭಕ್ತರು ಭಕ್ತಿಯಿಂದ ಅರ್ಪಿಸಿದ ಈ ಮೊತ್ತದಲ್ಲಿ 2,39,26,137 ರೂಪಾಯಿ ಕರೆನ್ಸಿ ನೋಟುಗಳ ರೂಪದಲ್ಲಿದ್ದರೆ, 9,02,600 ರೂಪಾಯಿ ನಾಣ್ಯಗಳ ರೂಪದಲ್ಲಿ ಸಂಗ್ರಹವಾಗಿದೆ. ನಗದು ಹಣದ ಜೊತೆಗೆ 14 ಗ್ರಾಂ ಚಿನ್ನ ಹಾಗೂ 2,163 ಗ್ರಾಂ ಬೆಳ್ಳಿಯ ವಸ್ತುಗಳನ್ನು ಕೂಡ ರಾಯರ ಸನ್ನಿಧಿಗೆ ಕಾಣಿಕೆಯಾಗಿ ನೀಡಲಾಗಿದೆ. ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿಯ ಸದಸ್ಯರು ಹಾಗೂ ಕರಸೇವಕರು ಈ ಬೃಹತ್ ಎಣಿಕೆ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಕಲಿಯುಗ ಕಾಮಧೇನು ಎಂದೇ ಖ್ಯಾತರಾದ ರಾಯರ ದರ್ಶನಕ್ಕೆ ದೇಶದಾದ್ಯಂತ ಭಕ್ತ ಸಾಗರವೇ ಹರಿದು ಬರುತ್ತಿದ್ದು, ಮಾರ್ಚ್ ತಿಂಗಳ ಈ ಅಲ್ಪ ಅವಧಿಯಲ್ಲೇ ಕೋಟ್ಯಂತರ ರೂಪಾಯಿ ಕಾಣಿಕೆ ಹರಿದು ಬಂದಿರುವುದು ಭಕ್ತರ ಅಚಲ ವಿಶ್ವಾಸಕ್ಕೆ ಸಾಕ್ಷಿಯಾಗಿದೆ.

Comments (0)

Your email address will not be published. Required fields are marked *

Back to top button