Thursday, August 21, 2025
26.3 C
Bengaluru
Google search engine
LIVE
ಮನೆ#Exclusive NewsTop Newsತುಮಕೂರಿನಲ್ಲಿ ಯೂರಿಯಾ ಖರೀದಿಗೆ ಮುಗಿಬಿದ್ದ ಜನ; ಪೊಲೀಸರ ಸಮ್ಮುಖದಲ್ಲಿ ವಿತರಣೆ

ತುಮಕೂರಿನಲ್ಲಿ ಯೂರಿಯಾ ಖರೀದಿಗೆ ಮುಗಿಬಿದ್ದ ಜನ; ಪೊಲೀಸರ ಸಮ್ಮುಖದಲ್ಲಿ ವಿತರಣೆ

ತುಮಕೂರು: ರಾಜ್ಯದಲ್ಲಿ ಯೂರಿಯಾ ಗೊಬ್ಬರ ಕೊರತೆ ಮುಂದುವರಿದಿದೆ. ರೈತರು ಯೂರಿಯಾ ಖರೀದಿಗೆ ಮುಗಿಬಿದ್ದಿರುವ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪಟ್ಟಣದ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ನಡೆದಿದೆ.

ಯೂರಿಯಾ ಖರೀದಿಗೆ ಕೈಯಲ್ಲಿ ಆಧಾರ್ ಕಾರ್ಡ್ ಹಿಡಿದು ಸಾಲಿನಲ್ಲಿ ನಿಂತ ರೈತರು ತಾ ಮುಂದು ನಾ ಮುಂದು ಎಂದು ಯೂರಿಯಾ ಖರೀದಿಗೆ ಮುಗಿ ಬಿದ್ದಿದ್ದಾರೆ. ರೈತರ ನೂಕಾಟ- ತಳ್ಳಾಟ ಕಂಡು ಸೂಸೈಟಿ ಸಿಬ್ಬಂದಿ ಪೊಲೀಸರ ಮೊರೆ ಹೋಗಿದ್ದು, ಪೊಲೀಸರ ನೆರವಿನೊಂದಿಗೆ ರಸಗೊಬ್ಬರ ವಿತರಣೆ ಮಾಡಿದ್ದಾರೆ. ಇನ್ನು ಸೊಸೈಟಿಯಲ್ಲಿ ಕಳೆದ ಮೂರ್ನಾಲ್ಕು ದಿನದಿಂದ ಗೊಬ್ಬರ ಖಾಲಿಯಾಗಿದ್ದು, ಈಗ ಬಂದಿರುವುದರಿಂದ ಖರೀದಿಗೆ ನೂರಾರು ರೈತರು ಮುಗಿ ಬಿದ್ದಿದ್ದರು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments