Sunday, December 7, 2025
18.9 C
Bengaluru
Google search engine
LIVE
ಮನೆರಾಜ್ಯಗಂಡನ ಮೆಲಿನ ಅನುಮಾನಕ್ಕೆ ಕಾದ ಎಣ್ಣೆ ಸುರಿದು ಕೊಲೆಗೆ ಯತ್ನಿಸಿದ ಪತ್ನಿ

ಗಂಡನ ಮೆಲಿನ ಅನುಮಾನಕ್ಕೆ ಕಾದ ಎಣ್ಣೆ ಸುರಿದು ಕೊಲೆಗೆ ಯತ್ನಿಸಿದ ಪತ್ನಿ

ಬೆಳಗಾವಿ: ಪತಿಯ ಮೇಲಿನ ಅನುಮಾನದಿಂದ ಪತಿಯ ಮೇಲೆ ಪತ್ನಿ ಕಾದ ಅಡುಗೆ ಎಣ್ಣೆಯನ್ನು ಸುರಿದು ಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದ ರಾಮನಗರದಲ್ಲಿ ನಡೆದಿದೆ.. ಪತಿ ಸುಭಾಷ ಪಾಟೀಲ್ ಮೇಲೆ ಪತ್ನಿ ವೈಶಾಲಿ ಪಾಟೀಲ್​ ಎಣ್ಣೆ ಸುರಿದ ಹಿನ್ನೆಲೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಸುಭಾಷ್ ಪಾಟೀಲ್ ಸಿಲಿಂಡರ್ ವಿತರಣೆಯ ಕೆಲಸ ಮಾಡುತ್ತಿದ್ದರು. ದಿನನಿತ್ಯದ ಕೆಲಸ ಮುಗಿಸಿ ಮನೆಗೆ ವಾಪಸಾದ ಸುಭಾಷ್, ರಾತ್ರಿಯ ಊಟಕ್ಕೆ ಕುಳಿತಿದ್ದ ವೇಳೆ ಈ ಘಟನೆ ನಡೆದಿದೆ. ವೈಶಾಲಿ, ತನ್ನ ಪತಿಯ ಮೇಲೆ ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ಸಂಶಯಗೊಂಡಿದ್ದರು. ಈ ಸಂಶಯದಿಂದಾಗಿ, ಹಲವಾರು ವರ್ಷಗಳಿಂದ ದಂಪತಿಗಳ ನಡುವೆ ಸಂಸಾರದ ಕಲಹ ಮುಂದುವರೆದಿತ್ತು.

ಆದರೆ, ಈ ಬಾರಿ ವೈಶಾಲಿಯ ಕೋಪ ತಾರಕಕ್ಕೇರಿ, ಏಕಾಏಕಿ ಕಾದಿರುವ ಅಡುಗೆ ಎಣ್ಣೆಯನ್ನು ಪತಿಯ ತಲೆಯ ಮೇಲೆ ಸುರಿದಿದ್ದಾರೆ. ಬಿಸಿ ಎಣ್ಣೆಯಿಂದ ತೀವ್ರವಾಗಿ ಸುಟ್ಟುಹೋಗಿರುವ ಸುಭಾಷ್, ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.

ವೈಶಾಲಿಯ ಈ ಕೃತ್ಯವು ಕೇವಲ ಕೋಪದಿಂದ ಉಂಟಾದುದೇ, ಅಥವಾ ಯೋಜಿತವಾಗಿ ನಡೆದ ಕೊಲೆ ಯತ್ನವೇ ಎಂಬುದನ್ನು ಪೊಲೀಸರು ತನಿಖೆಯ ಮೂಲಕ ಕಂಡುಹಿಡಿಯಲಿದ್ದಾರೆ. ಸದ್ಯಕ್ಕೆ, ವೈಶಾಲಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಆಕೆಯ ವಿರುದ್ಧ ಕೊಲೆ ಯತ್ನದ ಆರೋಪದಡಿ ಪ್ರಕರಣ ದಾಖಲಾಗಿದೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments