ಶಿವಮೊಗ್ಗ : ಮೋದಿಯವರ ಸಾವನ್ನು ಬಯಸುವುದು ಸರಿಯಲ್ಲ ಎಂದು ರಾಜು ಕಾಗೆ ಹೇಳಿಕೆಗೆ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ತಿರುಗೇಟು ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಬಹಳ ಎಚ್ಚರಿಕೆಯಿಂದ ಮಾತನಾಡಬೇಕು. ಇದು ಯಾವುದೇ ಯುದ್ಧವಲ್ಲ, ಮೋದಿಯವರ ಸಾವು ಬಯಸುವುದು ಅಕ್ಷಮ್ಯ ಅಪರಾಧ. ಈ ರೀತಿ ವ್ಯಯಕ್ತಿಕ ಟೀಕೆಗಳು ಮಾಡುವುದನ್ನು ಬಿಡಬೇಕು ಎಂದು ಮನವಿ ಮಾಡಿದರು.
ಇಂದು ರಾಹುಲ್ ಗಾಂಧಿ ಶಿವಮೊಗ್ಗ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸಹಜವಾಗಿ ಚುನಾವಣೆ ಸಂದರ್ಭದಲ್ಲಿ ಆಯಾ ಪಕ್ಷದವರು ಬಂದು ಹೋಗುತ್ತಾರೆ. ಹೀಗಾಗಿ ಅವರು ಕೂಡ ಬಂದು ಹೋಗುತ್ತಾರೆ. ನಮ್ಮ ನಾಯಕರು ಹಾಗೂ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾಜಿಯವರು ಕೂಡ ಬಂದಿದ್ದರು ಎಂದರು. ಉತ್ತಮವಾದ ಸಂಘಟನೆಯಾಗಿದೆ. ನಾವು ಗೆಲುವಿನ ಸನಿಹದಲ್ಲಿದ್ದೆವೆ ಎಂದು ಬಿ.ವೈ. ರಾಘವೇಂದ್ರ ತಿಳಿಸಿದರು.
ಫ್ರೀಡಂ ಟಿವಿಯಲ್ಲಿ ಜಾಹೀರಾತು ನೀಡಲು
ಈ ನಂಬರ್ ಗೆ ಸಂಪರ್ಕಿಸಿ
Phone Number : +91 9164072277
Email id : salesatfreedomtv@gmail.com