ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್ ನೋಡಲು 10ನೇ ಬಾರಿ ಬಳ್ಳಾರಿ ಜೈಲಿಗೆ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿದ್ದಾರೆ.ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ರನ್ನು ನೋಡಲು ಆರೋಗ್ಯ ವಿಚಾರಿಸಲು ಪತ್ನಿ ವಿಜಯಲಕ್ಷ್ಮಿ ಮತ್ತು ಸಂಬಂಧಿ ಸುಶಾಂತ್ ನಾಯ್ಡು ಜೈಲಿಗೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ, ಬ್ಯಾಗ್ನಲ್ಲಿ ದರ್ಶನ್ಗೆ ಅಗತ್ಯವಿರುವ ಬಟ್ಟೆ, ತಿಂಡಿ ತಿನಿಸುಗಳನ್ನು ತಂದಿದ್ದಾರೆ. ಬಳಿಕ ದರ್ಶನ್ಗೆ ಸ್ಕ್ಯಾನಿಂಗ್ ಮಾಡಿಸುವ ಕುರಿತು ಮತ್ತು ಕಾನೂನು ಸಮರದ ಕುರಿತು ಚರ್ಚಿಸಿದ್ದಾರೆ.