ಇತ್ತೀಚಿನ ದಿನಮಾನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಮನುಷ್ಯ ಔಷಧಿ ಇಲ್ಲದೆ ಬದುಕಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಮುಖ್ಯ ಕಾರಣ ಪ್ರತಿನಿತ್ಯ ನಾವು ಸೇವಿಸುವ ಆಹಾರ ಪದ್ಧತಿ, ಪ್ರತಿಯೊಬ್ಬರೂ ಒಂದಿಲ್ಲಾ ಒಂದು ದೊಡ್ಡ ಕಾಯಿಲೆಯಿಂದ ಬಳಲುತ್ತಿರುತ್ತಾರೆ. ದೇಶ-ವಿದೇಶಗಳಿಗೆ ಸುತ್ತಿ, ದೊಡ್ಡ-ದೊಡ್ಡ ಆಸ್ಪತ್ರೆಯಲ್ಲಿ ಹಣದ ಸುರಿಮಳೆಯನ್ನೇ ಸುರಿಸಿದರೂ ಗುಣಮುಖರಾಗಿರುವುದು ತೀರ ವಿರಳ. ಆದರೆ, ಗದಗ ಜಿಲ್ಲೆಯ ನರಗುಂದ ತಾಲೂಕಿನ ವಾಸನ ಗ್ರಾಮದಲ್ಲೊಬ್ಬ ಪಾರಂಪರಿಕ ವೈದ್ಯ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಎಲ್ಲ ರೋಗಗಳಿಗೂ ಚಿಕಿತ್ಸೆ ನೀಡುವ ಮೂಲಕ ನೊಂದವರ ಪಾಲಿಗೆ ಸಂಜೀವಿನಿಯಾಗಿದ್ದಾರೆ. ಇಂತವರ ಬಗ್ಗೆ ಒಂದು ಕಿರು ಪರಿಚಯ ನೋಡಿಕೊಂಡು ಬರೋಣ ಬನ್ನಿ.
ಇವರ ಹೆಸರು ಡಾ. ಹನುಮಂತ ಮಳಲಿ. ಸುಮಾರು 33 ವರ್ಷಗಳಿಂದ ವಂಶ ಪಾರಂಪರಿಕವಾಗಿ ಬಂದಿರುವ ತಮ್ಮ ಪಾರಂಪರಿಕ ಕಲೆಯನ್ನು ಸಾರ್ವಜನಿಕರಿಗೆ ಧಾರೆ ಎರೆಯುತ್ತಾ ಬದುಕುತ್ತಿದ್ದಾರೆ. ಇದುವರೆಗೂ ಲಕ್ಷಾಂತರ ರೋಗಿಗಳು ಗುಣಮುಖರಾಗಿ ಇಂದಿಗೂ ಇವರ ಹೆಸರು ಹೇಳಿ ಬದುಕುತ್ತಿದ್ದಾರೆ. ರಾಜ್ಯದ ವಿವಿಧ ಜಿಲ್ಲೆ ಸೇರಿದಂತೆ ನೆರೆಯ ಮಹಾರಾಷ್ಟ್ರ, ಗೋವಾ, ಆಂಧ್ರ, ತಮಿಳುನಾಡು, ಉತ್ತರ ಪ್ರದೇಶ ಸೇರಿದಂತೆ ದೇಶ-ವಿದೇಶಗಳಿಂದಲೂ ಆಗಮಿಸಿ ಇವರ ಕೈಯಿಂದ ಔಷಧಿ ಪಡೆದುಕೊಂಡು ಹೋಗುತ್ತಾರೆ.
ಔಷಧಿಗಳನ್ನು ಸ್ವಂತ ಮನೆಯಲ್ಲೆ ಶಾಸ್ತ್ರೋತ್ತವಾಗಿ ತಯಾರಿಸುತ್ತಾರೆ.ಸೂರ್ಯ ಉದಯದ ನಂತರ ಹಾಗೂ ಸೂರ್ಯಸ್ತ ಆಗುವವರಿಗೆ ಮಾತ್ರ ಇವರು ಔಷಧಿ ವಿತರಿಸುತ್ತಾರೆ. ಪ್ರತಿ ಬುಧವಾರ ಮಾತ್ರ ಇವರು ಚಿಕಿತ್ಸೆ ನೀಡುತ್ತಿದ್ದು, ಔಷಧಿ ಪಡೆಯುತ್ತಿರುವ ಎಲ್ಲ ರೋಗಿಗಳು ಭಾಗಶಃ ಗುಣಮುಖರಾಗುತ್ತಾರೆ ಎನ್ನುವುದು ಸ್ಥಳೀಯರ ಅಭಿಪ್ರಾಯ. ಹೀಗಾಗಿ ನಾನಾ ಭಾಗಗಳಿಂದ ಜನರು ಆಗಮಿಸಿ ಚಿಕಿತ್ಸೆ ಪಡೆದು ಅದರಿಂದ ಯಶಸ್ವಿಯಾಗಿದ್ದಾರೆ.
ಮೊದ-ಮೊದಲು ಪ್ರತಿ ಬುಧವಾರ 80 ರಿಂದ 100 ಜನ ಚಿಕಿತ್ಸೆ ಪಡೆಯಲು ಆಗಮಿಸುತ್ತಿದ್ದರು. ಆದರೆ, ಈಗ ಪ್ರತಿ ಬುಧವಾರಕೊಮ್ಮೆ 100-1500 ಜನರು ಆಗಮಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನು ಸಹಿಸದ ಕೆಲವರು ಇವರ ವಿರುದ್ಧ ಅಪಪ್ರಚಾರ ಮಾಡಿದ್ದು ಉಂಟು. ಆದರೆ, ಯಾವುದಕ್ಕೂ ಜಗ್ಗದ ಡಾ. ಹನುಮಂತ ಮಳಲಿ ಅವರು ತಮ್ಮ ಸೇವೆಯನ್ನು ನಿಸ್ವಾರ್ಥದಿಂದ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ವಾಸನ ಗ್ರಾಮದಲ್ಲಿ ಪ್ರತಿ ಬುಧವಾರಕೊಮ್ಮೆ ದೊಡ್ಡ ಸಂಖ್ಯೆಯಲ್ಲಿ ಜನ ಬರುವುದರಿಂದ ಉದ್ಯೋಗ ಸೃಷ್ಟಿಯು ಕೂಡ ಆಗುತ್ತಿದೆ. ಹೋಟೆಲ್, ಎಳೆನೀರು ಮಾರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಒಟ್ಟಾರೆಯಾಗಿ ಇವರಿಂದ ಸಾರ್ವಜನಿಕರಿಗೆ ಒಳ್ಳೆಯದಾಗುತ್ತಿದೆ ಎನ್ನುವುದು ಹೆಮ್ಮೆಯ ವಿಷಯ.