Monday, June 23, 2025
26.6 C
Bengaluru
Google search engine
LIVE
ಮನೆUncategorizedಎಸ್‌.ಎಂ.ವಿ.ಟಿ. ಬೆಂಗಳೂರು -–ಕಲಬುರಗಿ ವಂದೇ ಭಾರತ್‌ ಎಕ್ಸ್‌ ಪ್ರೆಸ್‌ ರೈಲಿಗೆ ಯಾದಗಿರಿ ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಗೆ ...

ಎಸ್‌.ಎಂ.ವಿ.ಟಿ. ಬೆಂಗಳೂರು -–ಕಲಬುರಗಿ ವಂದೇ ಭಾರತ್‌ ಎಕ್ಸ್‌ ಪ್ರೆಸ್‌ ರೈಲಿಗೆ ಯಾದಗಿರಿ ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಗೆ  ವಿ. ಸೋಮಣ್ಣ, ಸನ್ಮಾನ್ಯ ರೈಲ್ವೆ ಖಾತೆ ರಾಜ್ಯ ಸಚಿವರಿಂದ ಚಾಲನೆ

ವಿ. ಸೋಮಣ್ಣ,  ರೈಲ್ವೆ ಮತ್ತು ಜಲಶಕ್ತಿ ಖಾತೆಯ ರಾಜ್ಯ ಸಚಿವರು ದಿನಾಂಕ 03.08.2024ರಂದು ರೈಲು ಸಂಖ್ಯೆ 22232 ಎಸ್‌.ಎಂ.ವಿ.ಟಿ. ಬೆಂಗಳೂರು- ಕಲಬುರಗಿ ವಂದೇ ಭಾರತ್‌ ಎಕ್ಸ್‌ ಪ್ರೆಸ್‌ ಗೆ ಯಾದಗಿರಿ ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಗೆ ಬೆಂಗಳೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಾರ್ಯಾಲಯದಿಂದ ವಿಡಿಯೋ ಲಿಂಕ್‌ ಮೂಲಕ ಹಸಿರು ನಿಶಾನೆ ತೋರಿದರು.  ಈ ಸಂದರ್ಭದಲ್ಲಿ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ  ಯೋಗೇಶ್‌ ಮೋಹನ್‌, ಅಪರ ವಿಭಾಗೀಯ ರೈಲ್ವೆ ವ್ಯವಸ್ಥಾಪಕರುಗಳಾದ  ಪರೀಕ್ಷಿತ್‌ ಮೋಹನ್ಪೂರಿಯಾ ಮತ್ತು  ಆಶುತೋಷ್‌ ಮಾಥುರ್‌ ಮತ್ತಿತರ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.  ಯಾದಗಿರಿ ನಿಲ್ದಾಣದಲ್ಲಿ ನಡೆದ ಸ್ಥಳೀಯ ಕಾರ್ಯಕ್ರಮದಲ್ಲಿ ಗುರುಮಿಠ್ಕಲ್‌ ಕ್ಷೇತ್ರದ ಸನ್ಮಾನ್ಯ ವಿಧಾನಸಭಾ ಸದಸ್ಯರಾದ  ಶರಣಗೌಡ ಕಂದಕೂರ್‌, ದಕ್ಷಿಣ ಮಧ್ಯ ರೈಲ್ವೆಯ ಅಪರ ಪ್ರಧಾನ ವ್ಯವಸ್ಥಾಪಕರಾದ  ಧನಂಜಯುಲು, ಗುಂತಕಲ್‌ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ  ಎಂ. ವಿಜಯ್‌ ಕುಮಾರ್‌ ಮತ್ತಿತರ ರೈಲ್ವೆ ಅಧಿಕಾರಿಗಳು ಭಾಗವಹಿಸಿದ್ದರು. 

ಈ ಸಂದರ್ಭದಲ್ಲಿ ಮಾತನಾಡಿದ  ವಿ. ಸೋಮಣ್ಣನವರು ಇಂದು ವಂದೇಭಾರತ್‌ ರೈಲು ಸೇವೆಯು ಯಾದಗಿರಿ ಜಿಲ್ಲೆಗೆ ದೊರೆತಿರುವುದರಿಂದ  ಜಿಲ್ಲೆಯ ಜನರಿಗೆ  ಇದೊಂದು ಸಂತಸದ ದಿನವಾಗಿದೆ.  ಸ್ವದೇಶಿ ತಂತ್ರಜ್ಞಾನದ ವಂದೇ ಭಾರತ್‌ ರೈಲು  ವಿಶ್ವ ದರ್ಜೆಯ ವೈಶಿಷ್ಟ್ಯಗಳನ್ನು ಹೊಂದಿದ್ದು ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣವನ್ನು ಒದಗಿಸುವುದರ ಜೊತೆಗೆ ಮತ್ತಷ್ಟು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಹೇಳಿದರು. 

2024-25ರ ಬಜೆಟ್‌ ನಲ್ಲಿ  ಕರ್ನಾಟಕದಲ್ಲಿ ರೈಲ್ವೆಗೆ 7560 ಕೋಟಿ ರೂಪಾಯಿಗಳ ಅನುದಾನವನ್ನು ನೀಡಲಾಗಿದ್ದು ಇದು 2009-14ರ ಅವಧಿಯ ವಾರ್ಷಿಕ ಸರಾಸರಿ ಅನುದಾನಕ್ಕಿಂತ 9 ಪಟ್ಟು ಹೆಚ್ಚಾಗಿದೆ.  2024-25ರಲ್ಲಿ ಭಾರತೀಯ ರೈಲ್ವೆಗೆ 2.62 ಲಕ್ಷ ಕೋಟಿ ರೂಪಾಯಿಗಳ ಅನುದಾನ ನೀಡಲಾಗಿದೆ.  ಕರ್ನಾಟಕದ ಎಲ್ಲ ಪ್ರಮುಖ ಮಾರ್ಗಗಳನ್ನು ದ್ವಿಪಥೀಕರಣಗೊಳಿಸಲಾಗಿದೆ ಎಂದರು. 

ಕರ್ನಾಟಕದ 90% ರೈಲ್ವೆ ಮಾರ್ಗವನ್ನು ವಿದ್ಯುದೀಕರಣಗೊಳಿಸಲಾಗಿದೆ.  ಕಳೆದ 10 ವರ್ಷಗಳಲ್ಲಿ ಭಾರತೀಯ ರೈಲ್ವೆಯಲ್ಲಿ 31 ಸಾವಿರ ಕಿ.ಮೀ. ಗಳಷ್ಟು ರೈಲ್ವೆ ಮಾರ್ಗದ ನಿರ್ಮಾಣವಾಗಿದೆ.  ಕರ್ನಾಟಕದ ಎಲ್ಲ ಮಾನವರಹಿತ ಲೆವೆಲ್‌ ಕ್ರಾಸಿಂಗ್‌ ಗೇಟ್‌ಗಳನ್ನು ಮುಚ್ಚಲಾಗಿದೆ.  2014ರಿಂದ ಇಲ್ಲಿಯವರೆಗೆ 534 ರಸ್ತೆ ಮೇಲ್ಸೇತುವೆ/ಕೆಳ ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.

ಕೇಂದ್ರ ಸರ್ಕಾರವು ಕಳೆದ 10 ವರ್ಷಗಳಲ್ಲಿ ರೈಲ್ವೆಯಲ್ಲಿ 5 ಲಕ್ಷ ಉದ್ಯೋಗಗಳನ್ನು ನೀಡಿದೆ.  ನೇಮಕಾತಿ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲಾಗಿದೆ.   ಸಾಮಾನ್ಯ ವರ್ಗದವರ ಪ್ರಯಾಣಕ್ಕೆ ಅನುಕೂಲವಾಗುವ ದೃಷ್ಟಿಯಿಂದ 10 ಸಾವಿರ ಸಾಮಾನ್ಯ ದರ್ಜೆಯ (ಜನರಲ್‌) ಕೋಚ್‌ ಗಳ ನಿರ್ಮಾಣಕ್ಕೆ ರೈಲ್ವೆ ಸಚಿವಾಲಯದಿಂದ ಕಾರ್ಯ ಯೋಜನೆಯನ್ನು ರೂಪಿಸಲಾಗಿದೆ ಎಂದರು. 

ಕರ್ನಾಟಕದಲ್ಲಿ 2900 ಕೋಟಿ ರೂಪಾಯಿಗಳ ವೆಚ್ಚದಲ್ಲಿ 59 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ ಕಾರ್ಯ ನಡೆಯುತ್ತಿದ್ದು ಸುಮಾರು 7.5 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಯಾದಗಿರಿ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾರ್ಯ ಆಗುತ್ತಿದೆ.  ಹಾಗೆಯೇ ರಾಯಚೂರು ನಿಲ್ದಾಣವನ್ನು ಉನ್ನತೀಕರಿಸಲು 12.5 ಕೋಟಿ ರೂಪಾಯಿಗಳ ಅನುದಾನವನ್ನು ನೀಡಲಾಗಿದೆ ಎಂದರು. 

ಯಾದಗಿರಿ ನಿಲ್ದಾಣದಲ್ಲಿ ವಂದೇ ಭಾರತ್‌ ಎಕ್ಸ್‌ ಪ್ರೆಸ್‌ ನಿಲುಗಡೆಯ ವಿಶೇಷತೆಗಳು
ಇದು ಬೆಂಗಳೂರಿಗೆ ಪ್ರಯಾಣಿಸಲು ಯಾದಗಿರಿ ನಿಲ್ದಾಣದಿಂದ ಮೊದಲ ವಂದೇ ಭಾರತ್‌  ಎಕ್ಸ್‌ ಪ್ರೆಸ್‌
ಕಲಬುರಗಿಯಿಂದ ಬೆಂಗಳೂರಿಗೆ ಹೊರಡುವ ರೈಲು ಬೆಳಿಗ್ಗೆ 5:55 ಕ್ಕೆ ಯಾದಗಿರಿಯಿಂದ ಹೊರಡಲಿದ್ದು ಬೆಂಗಳೂರಿನಿಂದ ಕಲಬುರಗಿಗೆ ಹೊರಡುವ ರೈಲು ರಾತ್ರಿ 9:44ಕ್ಕೆ ಯಾದಗಿರಿಯನ್ನು ತಲುಪಲಿದೆ. 
ಈ ರೈಲು ಸಂಪೂರ್ಣ ಹವಾನಿಯಂತ್ರಿತ ರೈಲಾಗಿದ್ದು ಎ.ಸಿ. ಚೇರ್‌ ಕಾರ್‌ ಮತ್ತು ಎಕ್ಸಿಕ್ಯೂಟಿವ್‌ ದರ್ಜೆಯ ಪ್ರಯಾಣವನ್ನು ಹೊಂದಿದೆ. 
ಯಾದಗಿರಿಯಿಂದ ಕರ್ನಾಟಕದ ರಾಜಧಾನಿಗೆ ಹೋಗಿ ಬರಲು ಅತ್ಯಂತ ಅನುಕೂಲಕರವಾದ ವೇಳಾಪಟ್ಟಿಯನ್ನು ಹೊಂದಿದೆ. 

03.08.2024ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ  22232 ಎಸ್‌.ಎಂ.ವಿ.ಟಿ. ಬೆಂಗಳೂರು- ಕಲಬುರಗಿ  ವಂದೇ ಭಾರತ್‌ ಎಕ್ಸ್‌ ಪ್ರೆಸ್‌ ಮತ್ತು 04.08.2024ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 22231 ಕಲಬುರಗಿ – ಎಸ್‌.ಎಂ.ವಿ.ಟಿ. ಬೆಂಗಳೂರು ವಂದೇ ಭಾರತ್‌ ಎಕ್ಸ್‌ ಪ್ರೆಸ್‌‌ ಗೆ ಯಾದಗಿರಿಯಲ್ಲಿ ನಿಲುಗಡೆಯನ್ನು ಒದಗಿಸಲಾಗಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments