ಕನ್ನಡದ ಬಹುನಿರೀಕ್ಷಿತ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಈಗಾಗಲೇ ಶುರುವಾಗಿದೆ. ನಟ ಕಿಚ್ಚ ಸುದೀಪ್ ಸುಮ್ಮಖದಲ್ಲೇ ಎಲ್ಲಾ ಸ್ಪರ್ಧಿಗಳು ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಾಗಿದೆ. ಇದರ ಮಧ್ಯೆ ಕಿಚ್ಚನ ಮುಂದೆಯೇ ಬಿಗ್ಬಾಸ್ ವೇದಿಕೆ ಮೇಲೆ ಸ್ಪರ್ಧಿ ಒಬ್ಬರು ದರ್ಶನ್ ಬಗ್ಗೆ ಮಾತಾಡಿದ್ದಾರೆ.
ಈ ಬಾರಿ ಬಿಗ್ಬಾಸ್ ಮನೆಗೆ ಸ್ಯಾಂಡಲ್ವುಡ್ ನಟ ಕೀರ್ತಿರಾಜ್ ಮಗ ಧರ್ಮ ಕೀರ್ತಿರಾಜ್ ಎಂಟ್ರಿ ಕೊಟ್ಟಿದ್ದಾರೆ. ತನ್ನ ಬೆಳವಣಿಗೆಗೆ ಮೂಲ ಕಾರಣ ನಟ ದರ್ಶನ್ ಎಂದು ವೇದಿಕೆ ಮೇಲೆ ಧರ್ಮ ಹೇಳಿದ್ದಾರೆ.
ಬಿಗ್ಬಾಸ್ ವೇದಿಕೆ ಮೇಲೆ ಮಾತಾಡುವಾಗ ಧರ್ಮ ಅವರು, ನಾನು ನವಗ್ರಹ ಸಿನಿಮಾದಿಂದ ಸ್ಯಾಂಡಲ್ವುಡ್ ಎಂಟ್ರಿ ಕೊಟ್ಟಿದ್ದು. ಇದಕ್ಕೆ ಕಾರಣ ತೂಗುದೀಪ ಪ್ರೊಡಕ್ಷನ್. ನನ್ನ ಕರಿಯರ್ನಲ್ಲಿ ಮಹತ್ವದ ಪಾತ್ರ ವಹಿಸಿದ್ದು ನಟ ದರ್ಶನ್, ದಿನಕರ್ ಅವರು ಎಂದರು. ಈ ಸಂದರ್ಭದಲ್ಲಿ ಸುದೀಪ್ ಅವರು ಮಾತನ್ನು ಆಲಿಸಿದ್ರು.
ನವಗ್ರಹ ಚಿತ್ರದಲ್ಲಿ ಧರ್ಮ ಚಾಕ್ಲೆಟ್ ಬಾಯ್ ಆಗಿಯೇ ಕಾಣಿಸಿಕೊಂಡಿದ್ರು. ಇವರು ಓ ಮನಸೆ, ಚಾಣಾಕ್ಷ, ಖಡಕ್, ಮುಮ್ತಾಜ್, ಸುಮನ್ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಬಿಗ್ಬಾಸ್ ಮನೆಗೆ ಹೋಗಿದ್ದಾರೆ.