Thursday, August 21, 2025
26.4 C
Bengaluru
Google search engine
LIVE
ಮನೆಜಿಲ್ಲೆಕಬ್ಬು ತುಂಬಿದ ಟ್ರ್ಯಾಕ್ಟರಗೆ ಡಿಕ್ಕಿ ಸ್ಥಳದಲ್ಲಿ ಇಬ್ಬರ ಸಾವು

ಕಬ್ಬು ತುಂಬಿದ ಟ್ರ್ಯಾಕ್ಟರಗೆ ಡಿಕ್ಕಿ ಸ್ಥಳದಲ್ಲಿ ಇಬ್ಬರ ಸಾವು

ಕಬ್ಬು ತುಂಬಿ ಸಕ್ಕರೆ ಕಾರ್ಖಾನೆಗೆ ತೆರಳುತಿದ್ದ ಟ್ರ್ಯಾಕ್ಟರಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಇಬ್ಬರು ಬೈಕ್ ಸವಾರರು ಸಾವಿಗಿಡಾದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ನಡೆದಿದೆ.

ಗೋಕಾಕನಗರದ ಲೋಳಸೂರ ಸೇತುವೆ ಹತ್ತಿರ ಕಬ್ಬು ತುಂಬಿಕೊಂಡು ಬಾಗೆವಾಡಿ ಸಕ್ಕರೆ ಕಾರ್ಖಾನೆಗೆ ತೆರಳುತಿದ್ದ ಟ್ರ್ಯಾಕ್ಟರಗೆ ಗೋಕಾಕ ಪಟಗುಂದಿ ಹನುಮಾನ ದೇವಸ್ಥಾನದಿಂದ ಕಚ್ಚಾ ದಾರಿ ಮುಖಾಂತರ ಮುಖ್ಯ ರಸ್ತೆಗೆ ಸೇರುವ ಕಚ್ಚಾ ದಾರಿಯಲ್ಲಿ ವೇಗವಾಗಿ ಬಂದು ಮುಖ್ಯ ರಸ್ತೆ ಸೇರುವ ಭರದಲ್ಲಿ ತಿರುವು ಪಡೆಯುತ್ತಿರುವಾಗ ನಿಯಂತ್ರಣ ತಪ್ಪಿದ ಬೈಕ್ ಸವಾರರು ಟ್ರ್ಯಾಕ್ಟರಗೆ ಸಿಕ್ಕಿ ಸ್ಥಳದಲ್ಲಿಯೆ ಸಾವನ್ನಪ್ಪಿದ್ದಾರೆ.

ಮೃತರು ಮೂಡಲಗಿ ತಾಲೂಕಿನ ಶಿವಾಪುರ ಗ್ರಾಮದ ದುಂಡಪ್ಪಾ ಹಡಗಿನಾಳ ( 45),
ಸತ್ತೆಪ್ಪಾ ರಾಮಪ್ಪ ಚಿಂಚಲಿ( 50) ಎಂದು ತಿಳಿದು ಬಂದಿದೆ.ಗೋಕಾಕ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments