ಕೆಲವೊಮ್ಮೆ ನೀರು ಕಲುಷಿತವಾಗಿದ್ದರೆ ಅಥವಾ ಅದರಲ್ಲಿ ಬ್ಯಾಕ್ಟೀರಿಯಾಗಳು ಇದ್ದರೆ ಆಗ ಅದರಿಂದ ಗಂಟಲು ನೋವಿನ ಸಮಸ್ಯೆಯು ಕಾಡಬಹುದು. ಇದಕ್ಕಾಗಿ ವೈದ್ಯರಲ್ಲಿಗೆ ಹೋಗುವ ಬದಲು ಮನೆಯಲ್ಲೇ ಕೆಲವು ಮನೆಮದ್ದುಗಳನ್ನು ಬಳಸಿಕೊಂಡರೆ ಆಗ ಅದು ತುಂಬಾ ಪರಿಣಾಮಕಾರಿ ಆಗಿರುವುದು. ಅದು ಹೇಗೆ ಎಂದು ತಿಳಿದುಕೊಳ್ಳಿ.
ತುಳಸಿಯಲ್ಲಿ ಹಲವಾರು ಬಗೆಯ ಔಷಧೀಯ ಗುಣಗಳು ಇವೆ ಎನ್ನುವುದು ತಿಳಿದೇ ಇದೆ. ಇದನ್ನು ಹಲವಾರು ಬಗೆಯ ಮನೆಮದ್ದುಗಳಲ್ಲಿ ಕೂಡ ಬಳಕೆ ಮಾಡಲಾಗುತ್ತದೆ. ಕೆಮ್ಮು, ಕಫ ಕಟ್ಟುವಿಕೆ, ಶೀತ ಇತ್ಯಾದಿಗಳಿಗೆ ಇದು ಒಳ್ಳೆಯದು.
ತಯಾರಿಸುವ ವಿಧಾನ
ತುಳಸಿ ಕಷಾಯ ತಯಾರಿಸಲು ಒಂದು ಲೋಟ ನೀರಿಗೆ ಸ್ವಲ್ಪ ತುಳಸಿ ಎಲೆಗಳನ್ನು ಹಾಕಿ ಕುದಿಸಿ. ಇದಕ್ಕೆ ಕರಿಮೆಣಸಿನ ಕಾಳು, ಉಪ್ಪು ಮತ್ತು ಶುಂಠಿ ಕೂಡ ಹಾಕಿ. ಇದನ್ನು ಹಾಗೆ ಕುದಿಸಿ ಮತ್ತು ಶೋಧಿಸಿ. ಬಿಸಿಯಾಗಿರುವಾಗಲೇ ಇದನ್ನು ಕುಡಿಯಿರಿ. ಇದರಿಂದ ಗಂಟಲಿನ ನೋವು ಶಮನ ಆಗುವುದು. ನೀರು ಅರ್ಧಕ್ಕೆ ಬರುವ ತನಕ ಇದನ್ನು ಕುದಿಸಿ ಮತ್ತು ಇದರ ಬಳಿಕ ಬಿಸಿ ಬಿಸಿಯಾಗಿ ಕುಡಿದರೆ ಒಳ್ಳೆಯ ಫಲಿತಾಂಶ ಸಿಗುವುದು.
ಲಿಂಬೆ ನೀರಿನಲ್ಲಿ ಹಲವಾರು ಬಗೆಯ ಆರೋಗ್ಯ ಲಾಭಗಳಿದ್ದು, ಇದು ಗಂಟಲಿನ ನೋವನ್ನು ಪರಿಣಾಮಕಾರಿ ಆಗಿ ನಿವಾರಿಸುವುದು. ಇದು ದೇಹಕ್ಕೆ ಶಕ್ತಿ ನೀಡಲು ಸಹಕಾರಿ. ಪ್ರತಿರೋಧಕ ಶಕ್ತಿ ವೃದ್ಧಿಸುವ ಜತೆಗೆ ಇದು ದೇಹಕ್ಕೆ ವಿಟಮಿನ್ ಸಿ ಒದಗಿಸುವುದು.
ತಯಾರಿಸುವ ವಿಧಾನ
ಲಿಂಬೆ ನೀರನ್ನು ತಯಾರಿಸಲು ಕುದಿಯುವ ನೀರಿಗೆ ಒಂದು ಲಿಂಬೆಯನ್ನು ಹಿಂಡಿಕೊಳ್ಳಿ. ಅಗತ್ಯವಿದ್ದರೆ ಇದಕ್ಕೆ ಸಕ್ಕರೆ ಸೇರಿಸಿ. ಬಿಸಿ ಇರುವಾಗಲೇ ಇದನ್ನು ಸೇವನೆ ಮಾಡಿ. ಇದನ್ನು ಬೇಗನೆ ತಯಾರಿಸಬಹುದು ಮತ್ತು ಹಲವಾರು ಲಾಭಗಳು ಇವೆ. ಮಧುಮೇಹವಿದ್ದರೆ ಸಕ್ಕರೆ ಬಳಸಬಾರದು.