Wednesday, April 30, 2025
30.3 C
Bengaluru
LIVE
ಮನೆ#Exclusive Newsಖಾಸಗಿ ಬಸ್ ಗಳ ಸಂಚಾರದ ಮೇಲೆ ಹದ್ದಿನ ಕಣ್ಣಿಟ್ಟ ಸಾರಿಗೆ ಇಲಾಖೆ!

ಖಾಸಗಿ ಬಸ್ ಗಳ ಸಂಚಾರದ ಮೇಲೆ ಹದ್ದಿನ ಕಣ್ಣಿಟ್ಟ ಸಾರಿಗೆ ಇಲಾಖೆ!

ಸೆಪ್ಟೆಂಬರ್ 6-7 ರಂದು ಗೌರಿ -ಗಣೇಶ ಹಬ್ಬದ ಹಿನ್ನಲೆ ಖಾಸಗಿ ಬಸ್ ಗಳ ಸಂಚಾರದ ಮೇಲೆ ಸಾರಿಗೆ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಖಾಸಗಿ ಬಸ್ ಮಾಲೀಕರಿಂದ ದುಬಾರಿ ಟಿಕೆಟ್ ದರ ವಸೂಲಿ ಆರೋಪ ಕೆಳಿಬಂದಿದ್ದು, ಆರ್ ಟಿ ಓ ಅಧಿಕಾರಿಗಳಿಂದ ಕಾರ್ಯಾಚರಣೆ ಆರಂಭವಾಗಿದೆ.

ಖಾಸಗಿ ಬಸ್ ಗಳ ಮೇಲೆ ಆರ್ಟಿಓ ಅಧಿಕಾರಿಗಳು ದಾಳಿ ನಡೆಸಿ ಬಸ್ ಗಳಲ್ಲಿ ಹೆಚ್ಚುವರಿ ಟಿಕೆಟ್ ವಸೂಲಿ ಬಗ್ಗೆ ಪರಿಶೀಲನೆ ನಡೆಸುತಿದ್ದಾರೆ. ಸಾರಿಗೆ ಇಲಾಖೆ ಜಂಟಿ ಆಯುಕ್ತೆ ಶೋಭಾ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಬೆಂಗಳೂರು ವ್ಯಾಪ್ತಿಯ ಹತ್ತು ಆರ್ ಟಿ ಓ ಕಚೇರಿ ವ್ಯಾಪ್ತಿಯಲ್ಲಿ ದಾಳಿ ಹಾಗೂ ನಿಯಮ ಉಲ್ಲಂಘಿಸಿ ಹೆಚ್ಚುವರಿ ಟಿಕೆಟ್ ವಸೂಲಿ ಮಾಡುತ್ತಿದ್ದ ಬಸ್ ಗಳ ಮಾಲೀಕರು,ಚಾಲಕರ ವಿರುದ್ಧ, ಕ್ರಮಕ್ಕೆ ಮುಂದಾಗಿದ್ದಾರೆ…

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments