Top Newsಜಿಲ್ಲೆ

ಮನೆಯ ಹಿತ್ತಲಲ್ಲಿದ್ದ ಶ್ರೀಗಂಧದ ಮರವನ್ನು ಕದ್ದ ಖದೀಮರು

ಧಾರವಾಡ: ಮನೆಯ ಹಿತ್ತಲಲ್ಲಿದ್ದ ಶ್ರೀಗಂಧದ ಮರವನ್ನು ಖದೀಮರು ಸದ್ದಿಲ್ಲದೇ ಕಟಾವು ಮಾಡಿರುವ ಘಟನೆ ಧಾರವಾಡದ ಕಲ್ಯಾಣನಗರ ಎರಡನೇ ಕ್ರಾಸ್​ ನಲ್ಲಿ ನಡೆದಿದೆ.

ತಡರಾತ್ರಿ 2 ಗಂಟೆ ಸುಮಾರಿಗೆ ಶ್ರೀಗಂಧ ಚೋರರು ಶ್ರೀಗಂಧದ ಮರಕ್ಕೆ ಕೊಡಲಿ ಏಟು ಕೊಟ್ಟಿದ್ದಾರೆ. ಅದಕ್ಕಿಂತ ಪೂರ್ವದಲ್ಲಿ ಬೀಟ್​ ಪೊಲೀಸರು ಬಂದು ಹೋಗಿದ್ದು, ಬಳಿಕ ಖದೀಮರು ಶ್ರೀಗಂಧದ ಮರವನ್ನು ಕದ್ದು ಪರಾರಿಯಾಗಿದ್ದಾರೆ.

ಮನೆಯವರು ಬೆಳಿಗ್ಗೆ ನೋಡಿದಾಗ ಶ್ರೀಗಂಧದ ಮರ ಕಟಾವು ಆಗಿರುವುದು ಗೊತ್ತಾಗಿದೆ. ಇನ್ನು ಮೂವರು ಕಳ್ಳರ ಚಲನವಲನಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಘಟನೆ ಸಂಬಂಧ ಉಪನಗರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Comments (0)

Your email address will not be published. Required fields are marked *

Back to top button