#Exclusive NewsTop Newsಜಿಲ್ಲೆಸುದ್ದಿ

ಕಾರ್ಮಿಕ ಸಚಿವರ ತವರು ಜಿಲ್ಲೆಯಲ್ಲಿ ಬೀದಿಗಿಳಿದ ಕಾರ್ಮಿಕರು..!

ಧಾರವಾಡ : ಕಾರ್ಮಿಕ ಸಚಿವರ ತವರು ಜಿಲ್ಲೆಯಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೀದಿಗೆ ಇಳಿದ ಕಾರ್ಮಿಕರು.ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ದ ಅಸಮಾಧಾನ ಹೊರಹಾಕಿದರು.

ಧಾರವಾಡ : ಜಿಲ್ಲಾಧಿಕಾರಿ‌ ಕಚೇರಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಒಕ್ಕೂಟ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಸರ್ಕಾರ ಸೇರಿ ಇಲಾಖೆಯ ಅಧಿಕಾರಿಗಳ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.ಕಾರ್ಮಿಕ‌ ಇಲಾಖೆ ಮಂಡಳಿಯ ನೂತನ ತಂತ್ರಾಂಶ ದೋಷದಿಂದ ಕಾರ್ಮಿಕರಿಗೆ ಹಲವು ರೀತಿಯ ತೊಂದರೆ ಉಂಟಾಗುತ್ತಿದೆ. ಇದರ ಬಗ್ಗೆ ಇಲಾಖೆಯ ಅಧಿಕಾರಿಗಳಿ ಈಗಾಗಲೇ ಸಾಕಷ್ಡು ಬಾರಿ ಮನವರಿಕೆ ಮಾಡಿಕೊಡಲಾಗಿದೆ, ಆದರೂ ದೋಷ ನಿವಾರಣೆಗೆ ಯಾವುದೇ ಕ್ರಮವಾಗಿಲ್ಲ.

ಜತೆಗೆ ಈಗಾಗಲೇ ಇಲಾಖೆಯ ಸಚಿವರಿಗೂ ನಮ್ಮ ಬೇಡಿಕೆಗಳ ಬಗ್ಗೆ ಹಲವು ಬಾರಿ ಮನವಿ ನೀಡಿದ್ದೇವೆ ಭರವಸೆ ಸಿಗುತ್ತಿದೆ ಹೊರತು, ಬೇಡಿಕೆ ಈಡೇರಿಸುವ ಕೆಲಸಗಳು ಆಗುತ್ತಿಲ್ಲ. ಹಾಗಾಗಿ ಈ‌ ಕೂಡಲೇ ಸಿಎಂ‌ ಸಿದ್ದರಾಮಯ್ಯವರು ನಮ್ಮ ಬೇಡಿಕೆಗಳಿಗೆ ಸ್ಪಂದನೆ ಮಾಡಬೇಕು ಎಂದು ಮನವಿ‌ ಮಾಡಿದರು. ಜಿಲ್ಲಾಧಿಕಾರಿಗಳ‌ ಮೂಲಕ‌ ಮುಖ್ಯಮಂತ್ರಿಗಳಿಗೆ ಮನವಿ‌ಸಲ್ಲಿಸಿದರು.

Comments (0)

Your email address will not be published. Required fields are marked *

Back to top button