Monday, June 23, 2025
25.9 C
Bengaluru
Google search engine
LIVE
ಮನೆ#Exclusive NewsTop Newsಬಾಂಗ್ಲಾದೇಶದ ಶಿಕ್ಷಣ ಸಂಸ್ಥೆಳಿಂದ ತ್ರಿವರ್ಣ ಧ್ವಜಕ್ಕೆ ಅಪಮಾನಿಸಲು ವಿದ್ಯಾರ್ಥಿಗಳಿಗೆ ಒತ್ತಾಯ!

ಬಾಂಗ್ಲಾದೇಶದ ಶಿಕ್ಷಣ ಸಂಸ್ಥೆಳಿಂದ ತ್ರಿವರ್ಣ ಧ್ವಜಕ್ಕೆ ಅಪಮಾನಿಸಲು ವಿದ್ಯಾರ್ಥಿಗಳಿಗೆ ಒತ್ತಾಯ!

ಭಾರತ ಮತ್ತು ಬಾಂಗ್ಲಾದೇಶದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಬಾಂಗ್ಲಾದೇಶದ ಕೆಲವು ಶಿಕ್ಷಣ ಸಂಸ್ಥೆಗಳು ನೆಲದ ಮೇಲೆ ಭಾರತೀಯ ತ್ರಿವರ್ಣ ಧ್ವಜವನ್ನು ಚಿತ್ರಿಸಿ ವಿದ್ಯಾರ್ಥಿಗಳಿಗೆ ಅವುಗಳ ಮೇಲೆ ತುಳಿದು ನಡೆಯುವಂತೆ ಒತ್ತಾಯಿಸುತ್ತಿವೆ. ಇಸ್ಕಾನ್ ಲಾಂಛನ ಮತ್ತು ಇಸ್ರೇಲಿ ಧ್ವಜವನ್ನು ಸಹ ಅಪವಿತ್ರಗೊಳಿಸಲು ವಿದ್ಯಾರ್ಥಿಗಳನ್ನು ಒತ್ತಾಯಿಸಲಾಗುತ್ತಿದೆ.

ಸಂಸ್ಥೆಗಳಲ್ಲಿ ಬೊಗುರಾ ಪಾಲಿ ಟೆಕ್ನಿಕ್ ಇನ್‌ಸ್ಟಿಟ್ಯೂಟ್, ಬಾಂಗ್ಲಾದೇಶ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ  ಢಾಕಾ ವಿಶ್ವವಿದ್ಯಾಲಯ  ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯಗಳಲ್ಲಿ ಇಂತಹ ಕೃತ್ಯಗಳು ವರದಿಯಾಗಿವೆ.

“ಬಾಂಗ್ಲಾದೇಶದ ಕೆಲವು ಶಿಕ್ಷಣ ಸಂಸ್ಥೆಗಳು ಭಾರತೀಯ ತ್ರಿವರ್ಣ ಧ್ವಜವನ್ನು ಅಪವಿತ್ರಗೊಳಿಸುವುದನ್ನು ನೋಡಿದವು, ಅದನ್ನು ನೆಲದ ಮೇಲೆ ಚಿತ್ರಿಸಿ ವಿದ್ಯಾರ್ಥಿಗಳು ಅವುಗಳ ಮೇಲೆ ನಡೆಯಲು ಒತ್ತಾಯಿಸಲಾಯಿತು” ಎಂದು ಪ್ರೊಫೆಸರ್ ನಜ್ಮುಲ್ ಅಹ್ಸಾನ್ ಕಲೀಮುಲ್ಲಾ ಅವರು  ತಿಳಿಸಿದ್ದಾರೆ.

ಏತನ್ಮಧ್ಯೆ ಮತ್ತೊಬ್ಬ ಹಿಂದೂ ಅರ್ಚಕ ಶ್ಯಾಮ್ ದಾಸ್ ಪ್ರಭು ಅವರನ್ನು ಚಿತ್ತಗಾಂಗ್‌ನಲ್ಲಿ ಬಂಧಿಸಲಾಗಿದೆ. ಈ ಹಿಂದೆ ಬಂಧಿತರಾಗಿದ್ದ ಇಸ್ಕಾನ್‌ಗೆ ಸಂಬಂಧಿಸಿದ ಸನ್ಯಾಸಿ ಚಿನ್ಮೋಯ್ ದಾಸ್ ಅವರನ್ನು ಭೇಟಿ ಮಾಡಲು ಜೈಲಿಗೆ ಹೋದಾಗ ಈ ಬಂಧನ ನಡೆದಿದೆ. ಅಲ್ಲದೆ ಚಿನ್ಮೋಯ್ ದಾಸ್ ಸೇರಿದಂತೆ ಬಾಂಗ್ಲಾದೇಶದ 17 ಇಸ್ಕಾನ್ ಸದಸ್ಯರ ಬ್ಯಾಂಕ್ ಖಾತೆಗಳನ್ನು ಒಂದು ತಿಂಗಳ ಕಾಲ ಸ್ಥಗಿತಗೊಳಿಸಲಾಗಿದೆ.

ಚಿನ್ಮೋಯ್ ದಾಸ್ ಬಂಧನದ ವಿರುದ್ಧ ಪ್ರತಿಭಟನೆ ನಡೆದ ದಿನದಂದು ಚಿತ್ತಗಾಂಗ್‌ನ ನ್ಯಾಯಾಲಯದ ಆವರಣದ ಬಳಿ ಕೊಲೆಯಾದ ವಕೀಲ ಸೈಫುಲ್ ಇಸ್ಲಾಂ ಅಲಿಫ್ ಅವರ ಕುಟುಂಬವು 31 ವ್ಯಕ್ತಿಗಳು ಮತ್ತು 10-15 ಅಪರಿಚಿತರನ್ನು ಹೆಸರಿಸಿ ಪ್ರಕರಣವನ್ನು ದಾಖಲಿಸಿದೆ. ಗುರುತಿಸಲ್ಪಟ್ಟವರು ಹಿಂದೂಗಳು ಮತ್ತು ಚಿನ್ಮೋಯ್ ದಾಸ್ ಅವರ ಅನುಯಾಯಿಗಳು ಎಂದು ಹೇಳಲಾಗುತ್ತದೆ.

 

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments