Wednesday, August 20, 2025
18.9 C
Bengaluru
Google search engine
LIVE
ಮನೆ#Exclusive NewsTop Newsಸಿದ್ದರಾಮಯ್ಯ ಮೈಸೂರು ಪ್ರವಾಸದ ರದ್ದು-ಕಾರಣ ಮುಡಾ ಕೇಸ್

ಸಿದ್ದರಾಮಯ್ಯ ಮೈಸೂರು ಪ್ರವಾಸದ ರದ್ದು-ಕಾರಣ ಮುಡಾ ಕೇಸ್

ಬೆಂಗಳೂರು, ಸೆಪ್ಟೆಂಬರ್​ 01: ಹೈಕೋರ್ಟ್​ ಅಂಗಳದಲ್ಲಿ ಮುಡಾ ಕಾನೂನು ಸಮರ ನಡೆಯುತ್ತಿದೆ. ಈವರೆಗೆ ಎರಡು ಬಾರಿ ಹೈಕೋರ್ಟ್​ನಲ್ಲಿ ರಾಜ್ಯಪಾಲರ ಪ್ರಾಸಿಕ್ಯೂಷನ್​ ಸಂಬಂಧದ ವಿಚಾರಣೆ ಮುಂದೂಡಿಕೆ ಆಗಿದೆ. ಆದರೆ ನಾಳೆ ಸಿಎಂ ಸಿದ್ದರಾಮಯ್ಯಗೆ ಪ್ರಮುಖ ದಿನವೆಂದು ಹೇಳಬಹುದು. ನಾಳೆ ಹೈಕೋರ್ಟ್​ನಲ್ಲಿ ಪ್ರಾಸಿಕ್ಯೂಷನ್ ಕುರಿತು ಅರ್ಜಿ ವಿಚಾರಣೆ ಹಿನ್ನಲೆ ನಾಳಿನ ಮೈಸೂರು ಪ್ರವಾಸದಲ್ಲಿ ಬದಲಾವಣೆ ಆಗಿದ್ದು, ಬೆಳಗ್ಗೆ ಬದಲಾಗಿ ಸಂಜೆ ಮೈಸೂರಿಗೆ ತೆರಳಲಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರ ಅನುಮತಿ ವಿಚಾರವಾಗಿ ನಾಳೆ ಹೈಕೋರ್ಟ್​​ನಲ್ಲಿ ಪ್ರಾಸಿಕ್ಯೂಷನ್ ಕುರಿತ ಅರ್ಜಿ ವಿಚಾರಣೆ ನಡೆಯಲಿದೆ. ಆಗಸ್ಟ್​​ 19, 31ರಂದು ಹೈಕೋರ್ಟ್​ನಲ್ಲಿ ನಡೆದಿದ್ದ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆಯಾಗಿತ್ತು. ಹೀಗಾಗಿ ಹೈಕೋರ್ಟ್​​ನಲ್ಲಾಗುವ ಬೆಳವಣಿಗೆಗಳ ಮೇಲೆ‌ ಸಿಎಂ ನಿಗಾ ಇಡಲಿದ್ದಾರೆ. ಹಾಗಾಗಿ ಮನೆಯಲ್ಲೇ ವಾದ, ಪ್ರತಿವಾದದ ಮೇಲೆ ನಿಗಾ ಇಡಲಿದ್ದಾರೆ. ನಾಳೆ ಸಂಜೆ 5ರವರೆಗೆ ಯಾವುದೇ ಕಾರ್ಯಕ್ರಮ ಇಟ್ಟುಕೊಂಡಿಲ್ಲ. ಇದೇ ಕಾರಣಕ್ಕೆ ನಾಳೆ‌ ಕೈಗೊಂಡಿದ್ದ ಸಿಎಂ ಮೈಸೂರು ಪ್ರವಾಸದಲ್ಲಿ ಕೂಡ ಬದಲಾವಣೆ ಮಾಡಲಾಗಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments