Wednesday, April 30, 2025
32 C
Bengaluru
LIVE
ಮನೆUncategorizedಅಮೃತಹಳ್ಳಿ ಪೊಲೀಸ್ ಠಾಣೆ ಮೇಲೆ SHRC ದಾಳಿ‌ ಕೇಸ್.! ಪೊಲೀಸ್ ಇನ್ಸ್​ಪೆಕ್ಟರ್ ಅಂಬರೀಶ್​ಗೆ ನೋಟಿಸ್ ಜಾರಿ..!

ಅಮೃತಹಳ್ಳಿ ಪೊಲೀಸ್ ಠಾಣೆ ಮೇಲೆ SHRC ದಾಳಿ‌ ಕೇಸ್.! ಪೊಲೀಸ್ ಇನ್ಸ್​ಪೆಕ್ಟರ್ ಅಂಬರೀಶ್​ಗೆ ನೋಟಿಸ್ ಜಾರಿ..!

ಬೆಂಗಳೂರು : ಆರೋಪಿಯನ್ನು 9 ದಿನಗಳ ಕಾಲ ಠಾಣೆಯಲ್ಲಿ ಅಕ್ರಮವಾಗಿ ‌ಬಂಧನದಲ್ಲಿರಿಸಿದ್ದ ಆರೋಪದಡಿ ಮಾನವ ಹಕ್ಕು ಆಯೋಗ ದಾಳಿ‌ ಮಾಡಿತ್ತು.ಇದೀಗ ಇನ್ಸ್​ಪೆಕ್ಟರ್ ಅಂಬರೀಶ್​ಗೆ ನೋಟಿಸ್ ಜಾರಿ ಮಾಡಿದೆ.ಅಕ್ರಮ ಬಂಧನ ಪ್ರಕರಣಕ್ಕೆ ಸಂಬಂಧ ಡಿಟೇಲ್ಸ್ ನೀಡುವಂತೆ ನೋಟಿಸ್ ನೀಡಿದೆ. ಇನ್ನು ವಿಚಾರಣೆಗೆ ಹಾಜರಾಗುವಂತೆ ಕೂಡ ಸೂಚನೆ ನೀಡಿದೆ.. DySP ಸುಧೀರ್ ಹೆಗಡೆ ತಂಡದಿಂದ ವಿಚಾರಣೆ ನಡೆದಿದ್ದು, ವಾರಂಟ್ ಜಾರಿಯಾಗಿದ್ದ ಆರೋಪಿ ಯಾಸಿನ್ ಮೆಹಬೂಬ್​ ಖಾನ್​​​ ಎಂಬಾತನನ್ನು ಅಕ್ರಮವಾಗಿ ಬಂಧಿಸಿದ್ದರು.

ಯಾಸಿನ್ ಮೆಹಬೂಬ್​ ಖಾನ್​​ನ್ನು ಇನ್ಸ್​ಪೆಕ್ಟರ್​​ ಅಂಬರೀಶ್​ ಸೂಚನೆ ಮೇರೆಗೆ ಕರೆತಂದಿದ್ದ ಆರೋಪ ಕೇಳಿಬಂದಿದೆ. 9 ದಿನಗಳ ಕಾಲ ಇನ್ಸ್​ಪೆಕ್ಟರ್ ಅಂಬರೀಶ್ ಅಕ್ರಮವಾಗಿ ‌ಬಂಧನದಲ್ಲಿರಿಸಿದ್ದರು. ಆರೋಪಿಯನ್ನು ಬಂಧಿಸಲು ಕ್ರೈಂ ಕಾನ್​​ಸ್ಟೇಬಲ್​ಗಳು ಹಿರಿಯ ಅಧಿಕಾರಿಗಳ ಗಮನಕ್ಕೆ ತರದೇ ಮುಂಬೈಗೆ ಹೋಗಿದ್ರು.ಕಾನ್​​ಸ್ಟೇಬಲ್​​ಗಳು ರೂಲ್ಸ್ ವೈಲೇಶನ್ ಮಾಡಿ ಅಕ್ರಮ ಬಂಧನದಲ್ಲಿ ಇಟ್ಟಿದ್ದು ಸಾಬೀತಾಗಿದ್ದು, ಕಮಿಷನರ್ ದಯಾನಂದ್ ಪ್ರಕರಣ ಸಂಬಂಧ ಡಿಸಿಪಿಯಿಂದ ವರದಿ ಕೇಳಿದ್ದಾರೆ. ಅಂಬರೀಶ್ ಕೆ.ಆರ್ ಪುರಂ ಇನ್ಸ್​ಪೆಕ್ಟರ್​ ಆಗಿದ್ದ ವೇಳೆ MLA ಗೆ ಬೆಳ್ಳಿ ಗಧೆ ನೀಡಿದ್ದರು. ಇದೇ ಇನ್ಸ್​ಪೆಕ್ಟರ್ ಅಂಬರೀಶ್ ಮೇಲೆ 3 ವರ್ಷಗಳ ಹಿಂದೆ ಗಂಭೀರ ಆರೋಪವಿದೆ..

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments