Wednesday, April 30, 2025
24.6 C
Bengaluru
LIVE
ಮನೆUncategorizedNyay Yatra: ಕೈ ಜೋಡಿಸಿದ ರಾಹುಲ್ ಗಾಂಧಿ-ಅಖಿಲೇಶ್ ಯಾದವ್

Nyay Yatra: ಕೈ ಜೋಡಿಸಿದ ರಾಹುಲ್ ಗಾಂಧಿ-ಅಖಿಲೇಶ್ ಯಾದವ್

ಆಗ್ರಾ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎದುರಿಸಲು ಜೊತೆಗೂಡಿ ಸ್ಪರ್ಧೆ ಮಾಡುವ ವಿಚಾರವಾಗಿ ವಿರೋಧ ಪಕ್ಷಗಳೆಲ್ಲಾ ತೀವ್ರ ಕಸರತ್ತು ಮಾಡುತ್ತಿವೆ. ಉತ್ತರಪ್ರದೇಶದಲ್ಲಿ ಕಾಂಗ್ರೆಸ್-ಸಮಾಜವಾದಿ ಪಕ್ಷದ ಮಧ್ಯೆ ಸೀಟು ಹಂಚಿಕೆ ಒಪ್ಪಂದ ಈಗಾಗಲೇ ಏರ್ಪಟ್ಟಿದೆ. ಇದರ ಭಾಗವಾಗಿ ರಾಹುಲ್ ಗಾಂಧಿಯ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಅಖಿಲೇಶ್ ಸಿಂಗ್ ಯಾದವ್ ಪಾಲ್ಗೊಂಡಿದ್ದಾರೆ.

ನ್ಯಾಯ್​ಯಾತ್ರೆ ಉತ್ತರಪ್ರದೇಶದ ಆಗ್ರಾ ತಲುಪಿದ ಸಂದರ್ಭದಲ್ಲಿ ಯಾತ್ರೆಯ ಭಾಗವಾದ ಅಖಿಲೇಶ್ ಸಿಂಗ್ ಯಾದವ್, ರಾಹುಲ್ ಗಾಮಧಿ ಹೋರಾಟಕ್ಕೆ ಬೆಂಬಲ ಘೋಷಿಸಿದರು. ಈ ಕ್ಷಣಕ್ಕೆ ಪ್ರಿಯಾಂಕಾ ಗಾಂಧಿ ಕೂಡ ಸಾಕ್ಷಿಯಾದರು.

ಭಾರತ್ ಜೋಡೋ ನ್ಯಾಯ್​ ಯಾತ್ರೆ ಶುರುವಾದ ಬಳಿಕ ವಿರೋಧಪಕ್ಷಗಳ ಪ್ರಮುಖ ನಾಯಕರೊಬ್ಬರು ಇದರ ಭಾಗವಾಗಿರೋದು ಇದು ಮೊದಲ ಬಾರಿ. ಇದಕ್ಕೆ ಮೊದಲು ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನ್ಯಾಯ್​ಯಾತ್ರೆಯ ಭಾಗವಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಆಕೆ ಮಾತ್ರ ಯಾತ್ರೆಯಿಂದ ದೂರವೇ ಉಳಿದಿದ್ದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments