ಧಾರವಾಡ: ನಿಧನರಾದ ನಿವೃತ್ತ ಪ್ರೊಫೆಸರ್ ಒಬ್ಬರ ಶರೀರವನ್ನು ಅವರ ಕುಟುಂಬಸ್ಥರು ಧಾರವಾಡ ಎಸ್ಡಿಎಂ ಆಸ್ಪತ್ರೆಗೆ ದಾನ ಮಾಡುವ ಮೂಲಕ ತಮ್ಮ ನೋವಿನಲ್ಲೂ ಮಾದರಿಯ ಕಾರ್ಯ ಮಾಡಿದ್ದಾರೆ.
ಧಾರವಾಡದ ವಿಶ್ವಭಾರತಿ ಕಾಲೋನಿಯ ನಿವಾಸಿಯಾಗಿದ್ದ ನಿವೃತ್ತ ಪ್ರೊಫೆಸರ್ ಮಲ್ಲಿಕಾರ್ಜುನ ಯಡಳ್ಳಿ ನಿಧನರಾಗಿದ್ರು. ಈ ಮೊದಲೇ ಎಸ್ಡಿಎಂ ಆಸ್ಪತ್ರೆಗೆ ಅವರು ತಮ್ಮ ಶರೀರ ದಾನ ಮಾಡುವದಾಗಿ ಬರೆದು ಕೊಟ್ಟಿದ್ದರು. ಮಲ್ಲಿಕಾರ್ಜುನ ಅವರ ಆಶಯದಂತೆ ಅವರ ಕುಟುಂಬದವರು ಎಸ್ಡಿಎಂ ಆಸ್ಪತ್ರೆಗೆ ದಾನ ಮಾಡಿದ್ರು.
ಮೃತ ನಿವೃತ್ತ ಪ್ರೊಫೆಸರ್ ಈ ಹಿಂದೆ ಬೆಳಗಾವಿ ಜಿಲ್ಲೆಯ ಸಂಕೇಶ್ವರದ ಎಲ್.ಕೆ.ಖೋತ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರೊಪೆಸರ್ ಆಗಿ ಅದೇ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದರು.