Monday, June 23, 2025
26.6 C
Bengaluru
Google search engine
LIVE
ಮನೆ#Exclusive NewsTop Newsವಿಜಯೇಂದ್ರ ನಿನ್ನ ಮನೆಯಯಿಂದಲೇ ಪ್ರವಾಸ ಶುರು ಮಾಡುತ್ತೇನೆ, ತಾಕತ್ತಿ ಇದ್ರೆ ನಿಲ್ಲಿಸು: ರಮೇಶ್‌ ಜಾರಕಿಹೊಳಿ

ವಿಜಯೇಂದ್ರ ನಿನ್ನ ಮನೆಯಯಿಂದಲೇ ಪ್ರವಾಸ ಶುರು ಮಾಡುತ್ತೇನೆ, ತಾಕತ್ತಿ ಇದ್ರೆ ನಿಲ್ಲಿಸು: ರಮೇಶ್‌ ಜಾರಕಿಹೊಳಿ

ಬೆಳಗಾವಿ: ವಿಜಯೇಂದ್ರ ನೀನು ಬಚ್ಚಾ, ನೀನು ಅಧ್ಯಕ್ಷ ಸ್ಥಾನಕ್ಕೆ ಯೋಗ್ಯನಲ್ಲ ಎಂದು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಏಕವಚನದಲ್ಲೇ ವಿಜಯೇಂದ್ರ ವಿರುದ್ಧವೇ ಗುಡುಗಿದ್ದಾರೆ.

ಗೋಕಾಕ್‌ನ ಅಂಕಲಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಜಗಳ ಇದೆ. ಅದು ಕೇವಲ‌ ಅಧ್ಯಕ್ಷ ಸ್ಥಾನ ಬದಲಾವಣೆಗಾಗಿ ಮಾತ್ರ. ಅಧ್ಯಕ್ಷ ಸ್ಥಾನ ಬದಲಾವಣೆಗೆ ಆಗದಿದ್ದರೂ ಪಕ್ಷ ಸಂಘಟನೆ ಮಾಡುತ್ತೇವೆ ಎಂದರು.

ಬಸನಗೌಡ ಪಾಟೀಲ್ ಮತ್ತು ಜಾರಕಿಹೊಳಿ ವಿಜಯೇಂದ್ರ ವಿರುದ್ಧ ಬೆಂಕಿಯುಗುಳುತ್ತಿದ್ದಾರೆ. ಓಡಾಡುವುದು ಕಷ್ಟವಾಗುತ್ತೆ ಅಂತ ವಿಜಯೇಂದ್ರ ಜಾರಕಿಹೊಳಿಗೆ ಹೇಳಿದ್ದು ಇಬ್ಬರಿಗೂ ಸಹ್ಯವಾಗುತ್ತಿಲ್ಲ. ತಾನು ಶಿಕಾರಿಪುರಕ್ಕೆ ಹೋಗಿ ವಿಜಯೇಂದ್ರ ಮನೆ ಮುಂದಿನಿಂದಲೇ ರಾಜ್ಯ ಪ್ರವಾಸ ಶುರುಮಾಡುತ್ತೇನೆ, ತಾನೊಬ್ಬನೇ ಅಲ್ಲಿಗೆ ಹೋಗುತ್ತೇನೆ, ದಿನಾಂಕವನ್ನು ವಿಜಯೇಂದ್ರನೇ ನಿಗದಿ ಮಾಡಲಿ ಎಂದು ಜಾರಕಿಹೊಳಿ ಸವಾಲೆಸೆದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments