ಶಕ್ತಿ ಯೋಜನೆ ಎಫ್ಟೆಕ್ಟ್ ಬಿಜೆಪಿ ಮುಖಂಡರಿಗೆ ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ. ಎಲ್ಲಿ ಬಸ್ ಸಮಸ್ಯೆಯಾದ್ರೂ ಬಿಜೆಪಿ ಮತ್ತು ಜೆಡಿಎಸ್ ನವರು ಆ ವಿಡಿಯೋ ವೈರಲ್ ಮಾಡಿ ಆರೋಪ ಮಾಡ್ತಾ ಇದ್ದಾರೆ. ಇದಕ್ಕೆ ಇಂದು ಧಾರವಾಡದಲ್ಲಿ ರಾಮಲಿಂಗಾರೆಡ್ಡಿ ವಿರೋಧ ಪಕ್ಷಗಳಿಗೆ ಟಾಂಗ್ ನೀಡಿದ್ದಾರೆ. ಸಾರಿಗೆ ಬಸ್ ನಿಲ್ದಾಣಕ್ಕೆ ಚಾಲನೆ ಕೊಟ್ಟು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಶಕ್ತಿ ಯೋಜನೆಯಿಂದಾಗಿ ಮುಜರಾಯಿ ಇಲಾಖೆಗೆ ಒಳಪಟ್ಟಿರುವ ದೇಗುಲಗಳಿಗೆ ಆದಾಯ ಬರುತ್ತಿರುವುದು ಸತ್ಯ. ಆದ್ರೆ ಆ ಆದಾಯವನ್ನ ದೇವಸ್ಥಾನದ ಅಭಿವೃದ್ದಿಗೆ ಬಳಸಿಕೊಳ್ಳಲಾಗುತ್ತೆ. ನಮ್ಮ ರಾಜ್ಯದಲ್ಲಿ 34 ಸಾವಿರ ದೇವಸ್ಥಾನಗಳು ಮುಜರಾಯಿ ಆಡಳಿತಕ್ಕೆ ಒಳಪಟ್ಟಿದ್ದು, ಆ ದೇಗುಲಗಳ ಆದಾಯ ಹೆಚ್ಚಾಗಿದೆ.
ಇದು ಶಕ್ತಿ ಯೋಜನೆ ಕೊಡುಗೆ ಇನ್ನು ನಗರ ಸಾರಿಗೆ ಸೇರಿ ವಾಯುವ್ಯ ರಸ್ತೆಗೆ ಇಳಿಯಲಿವೆ ಸುಮಾರು 884 ಬಸ್ ಗಳು.. ಫೆಬ್ರವರಿ ಕೊನೆಯಲ್ಲಿ ಈ ಬಸ್ ಗಳು ಬರೋದ್ರಿಂದ ಶಾಲಾ ಮಕ್ಕಳಿಗೆ ತೊಂದರೆ ಇಲ್ಲದಂತಾಗುತ್ತೆ. ಬಿಜೆಪಿಯವರಿಗೆ ಮಾಡೋದಿಕ್ಕೆ ಕೆಲಸ ಇಲ್ಲ. ಸುಮ್ಮನೆ ಗೂಬೆ ಕೂರುಸ್ತಾರೆ.. ಕೆಲಸ ಮಾಡೋದು ಇಲ್ಲ, ಮಾಡೋದಿಕ್ಕೂ ಬಿಡೋದಿಲ್ಲ ಅಂತ ಜನ ಅವರು.. ಅಲ್ಲಾ, ಬಿಜೆಪಿ ಸರಕಾರ ಒಂದು ನೌಕರಿ ನೇಮಕಾತಿ ಮಾಡಿಲ್ಲ..13888 ಜನ ನಿವೃತ್ತಿಯಾಗಿದ್ರು. ಆ ಜಾಗಕ್ಕೆ ನೇಮಕಾತಿ ಮಾಡಬಹುದಿತ್ತು ಮಾಡಿಲ್ಲ.. ಇನ್ನು ಅವರ ಅವಧಿಯಲ್ಲಿ ಒಂದು ಬಸ್ ಕೂಡ ಖರೀದಿ ಮಾಡಿಲ್ಲ.. ಸುಮ್ಮನೇ ಹೊಟ್ಟೆ ಉರಿಯಿಂದ ಮಾತಾಡ್ತಾರೆ ಎಂದು ರಾಮಲಿಂಗಾರೆಡ್ಡಿ ಟಾಂಗ್ ನೀಡಿದ್ದಾರೆ.
ಬರುವ ಫೆಬ್ರವರಿ ಇಲ್ಲ ಮಾರ್ಚ್ ಮೊದಲ ವಾರದಲ್ಲಿ ಕೆಎಸ್ ಆರ್ ಟಿಸಿ ಸಿಬ್ಬಂದಿಗಳಿಗೆ ಒತ್ತಡ ಕಡಿಮೆಯಾಗುತ್ತೆ. ಶಾಲಾ ಮಕ್ಕಳಿಗೂ ಬಸ್ ಸಮಯಕ್ಕೆ ಸರಿಯಾಗಿ ಸಿಗುತ್ತೆ. 2000 ಚಾಲಕರು ನಿರ್ವಾಹಕರನ್ನ ನೇಮಕ ಮಾಡಿಕೊಳ್ಳಲಿದ್ದೇವೆ.. ಎಲ್ಲಾ ಸರಿ ಹೋಗುತ್ತೆ.. ಎಂದು ರಾಮಲಿಂಗಾರೆಡ್ಡಿ ಶಕ್ತಿ ಯೋಜನೆ ಸಮಸ್ಯೆಗೆ ಕಾಂಗ್ರೆಸ್ ಪರಿಹಾರ ಕಂಡುಕೊಳ್ಳಲಿದೆ ಎಂದು ತಿಳಿಸಿದ್ದಾರೆ.