Wednesday, April 30, 2025
32 C
Bengaluru
LIVE
ಮನೆಜಿಲ್ಲೆಕಾನ್ಸ್​​​ಟೇಬಲ್ ಮೇಲೆ ​​​ ಶಾಸಕಿ ಕರೆಮ್ಮ ಪುತ್ರನಿಂದ ಹಲ್ಲೆ​ ಸಹೋದರರ ಅಕ್ರಮಕ್ಕೆ ಸಾಥ್ ನೀಡಿದ್ರಾ ದೇವದುರ್ಗ...

ಕಾನ್ಸ್​​​ಟೇಬಲ್ ಮೇಲೆ ​​​ ಶಾಸಕಿ ಕರೆಮ್ಮ ಪುತ್ರನಿಂದ ಹಲ್ಲೆ​ ಸಹೋದರರ ಅಕ್ರಮಕ್ಕೆ ಸಾಥ್ ನೀಡಿದ್ರಾ ದೇವದುರ್ಗ ಶಾಸಕಿ?

ರಾಯಚೂರು:ರಾಯಚೂರಲ್ಲಿ ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕೋರೆ ಇಲ್ಲದಂತಾಗಿದೆ. ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಧ್ವನಿ ಎತ್ತುವ ಮೂಲಕವೇ ಶಾಸಕಿಯಾಗಿದ್ದ ಕರೆಮ್ಮ ನಾಯಕ್​ ಅವರ ಮಗ, ಸಹೋದರರೇ ಈಗ ಅಕ್ರಮ ಮರಳು ಸಾಗಾಟ ಕಿಂಗ್​​ಪಿನ್​​​​​ಗಳಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮರಳು ಟ್ರ್ಯಾಕ್ಟರ್ ಸೀಜ್ ಮಾಡಿದ್ದ ಪೇದೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಸಹ ಇದೆ.

ರಾಯಚೂರು ಜಿಲ್ಲೆ ದೇವದುರ್ಗ ಪೊಲೀಸ್ ಠಾಣೆಯ ಹನುಮಂತರಾಯ ನಾಯಕ್ ಎಂಬ ಪೇದೆಗೆ ದೇವದುರ್ಗ ಶಾಸಕಿ ಕರೆಮ್ಮ ನಾಯಕ್ ಪುತ್ರ ಸಂತೋಷ್ ನಾಯಕ್, ಸಹೋದರ ತಿಮ್ಮಾರೆಡ್ಡಿ, ಆಪ್ತ ಕಾರ್ಯದರ್ಶಿ ಇಲಿಯಾಸ್, ರಾಮಣ್ಣ ನಾಯಕ್ ಸೇರಿದಂತೆ 8 ಮಂದಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ದೇವದುರ್ಗದ ಐ.ಬಿಗೆ ಪೇದೆ ಹನುಮಂತರಾಯನನ್ನು ಕರೆಸಿಕೊಂಡು ಕೊಠಡಿ ಬಂದ್ ಮಾಡಿ ಕರೆಂಟ್ ಹಾಗೂ ಸಿಸಿಟಿವಿ ಸಂಪರ್ಕ ತೆಗೆದು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಪೊಲೀಸರ ವಿರುದ್ಧ ಶಾಸಕಿ ಕರೆಮ್ಮ ನಾಯಕ್ ಪ್ರತಿಭಟನೆ

ಇನ್ನು ಪೊಲೀಸರ ವಿರುದ್ಧ ಶಾಸಕಿ ಕರೆಮ್ಮ ನಾಯಕ್ ಬೆಂಬಲಿಗರ ಜೊತೆ ಕಳೆದ ರಾತ್ರಿ ದೇವದುರ್ಗ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಬೇಕಂತಲೆ ಪೊಲೀಸರು ಪಿತೂರಿ ಮಾಡಿ ಈ ರೀತಿ ಆರೋಪ ಮಾಡಿದ್ದಾರೆ. ಪೊಲೀಸ್ ಕಾನ್ಸ್ ಟೇಬಲ್ ಮುಂದೆ ಬಿಟ್ಟು ಕುತಂತ್ರ ರೂಪಿಸಿದ್ದಾರೆ. ಈ ಕೃತ್ಯ ರಾಜಕೀಯ ಪ್ರೇರಿತ ಎಂದು ಶಾಸಕಿ ಕರೆಮ್ಮ ನಾಯಕ್ ಆರೋಪ ಮಾಡಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments