`ರೇಣುಕಾಸ್ವಾಮಿ ಗತಿ ನಿಮ್ಮ ಅಪ್ಪನಿಗೇ ಬಂದಿದ್ರೆ…?’
`ಹಿAಗೇ ಕೊಲೆಗಡುಕನಿಗೆ ಕಣ್ಣೀರಾಗುತ್ತಿದ್ರಾ ರಚಿತಾ…?’
ವಾ.ಓ: ರಚಿತಾ ರಾಮ್ ಕಣ್ಣೀರು ಹಾಕಿದ್ದಾರೆ. ಗುಳಿಕೆನ್ನೆ ಬೆಡಗಿ ಕಣ್ಣು ಒರೆಸಿಕೊಳ್ಳುವುದನ್ನು ನೋಡಿ ಇಡೀ ಕರುನಾಡೇ ಬರಗಾಲ ಬಿದ್ದಂತೆ ಒದ್ದಾಡುತ್ತಿದೆ. ರೇಣುಕಾಸ್ವಾಮಿ ಕುಟುಂಬವAತೂ ಅಯ್ಯಯ್ಯೋ ಇದೆಂಥಾ ಕಷ್ಟ ತಂದಿಟ್ಟೆ ಭಗವಂತ ಈ ಮೂವತ್ತೆöÊದು ಪ್ಲಸ್ ವಯಸ್ಸಿನ ಹುಡುಗಿಗೆ ಎನ್ನುತ್ತಿದೆ. ಜೊತೆಗೆ ಪರಪ್ಪನ ಅಗ್ರಹಾರದ ಗೋಡೆಗಳೂ ಬುಲ್ಬುಲ್ ಹೆಣ್ಣಿನ ಪೂಜೆ ಪುನಸ್ಕಾರ ಕಂಡು ಬಿಕ್ಕುತ್ತಿವೆ. ಕಾರಣ ಎಪ್ಪತ್ತು ದಿನಗಳ ನಂತರ ರಚಿತಾರಾಮ್, ದರ್ಶನ್ ಭೇಟಿ ಮಾಡಿ ಪುನೀತರಾಗಿದ್ದಾರೆ. ಆಕಾಶಕ್ಕೂ ಬೇಧಿ ಹತ್ತಿಕೊಂಡು ವಾಂತಿ ಮಾಡುತ್ತಿದೆ…
ವಾ.ಓ: ಬುಲ್ಬುಲ್…ಇದು ರಚಿತಾರಾಮ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಿನಿಮಾ. ಕಿರುತೆರೆಯಲ್ಲಿದ್ದ ಇವರಿಗೆ ಮೊದಲು ಅವಕಾಶ ಕೊಟ್ಟಿದ್ದು ಬುಲ್ಬುಲ್ ತಂಡ. ಅಲ್ಲಿಂದ ಇಲ್ಲಿವರೆಗೆ ಎಲ್ಲಾ ಸ್ಟಾರ್ ಜೊತೆ ಕಾಣಿಸಿದ್ದಾರೆ. ಇಷ್ಟು ವರ್ಷಗಳಲ್ಲಿ ಅನೇಕ ನಟಿಯರು ಬಂದು ಹೋಗಿದ್ದಾರೆ. ಆದರೆ ಈಗಲೂ ಚಾಲ್ತಿಯಲ್ಲಿದ್ದಿದ್ದು ರಚಿತಾ ಹೆಗ್ಗಳಿಕೆ. ಅದನ್ನು ಎಲ್ಲರೂ ಒಪ್ಪುತ್ತಾರೆ. ಆದರೆ ಯಾವಾಗ ಕೊಲೆ ಆರೋಪ ಹೊತ್ತ ದರ್ಶನ್ ಮೀಟ್ ಮಾಡಿ ಗಳಗಳಿಸಿದರೋ…ಇದ್ದ ಬದ್ದ ಹೆಸರು ಮಣ್ಣು ಪಾಲಾಗಿದೆ. ನೋ ಡೌಟ್…
ವಾ.ಓ: ರಚಿತಾಗೆ ಸಿನಿಮಾದಲ್ಲಿ ಚಾನ್ಸ್ ಕೊಟ್ಟಿದ್ದು ಬುಲ್ಬುಲ್ ತಂಡ. ಅಫ್ಕೋರ್ಸ್ ದರ್ಶನ್ ಒಪ್ಪಿದ ಮೇಲೆಯೇ ಇವರಿಗೆ ಅವಕಾಶ ಸಿಕ್ಕಿದೆ. ಅದರಿಂದ ಹೆಸರು ಹಣ ಗಳಿಸಿದ್ದಾರೆ. ಅದೂ ಸತ್ಯ. ನಿಯತ್ತು ಇರಬೇಕಾದದ್ದೂ ಒಪ್ಪುವ ಮಾತು. ಆದರೆ ಅದೇ ವ್ಯಕ್ತಿ ಈಗ ಯಾವ ಸ್ಥಾನದಲ್ಲಿ ನಿಂತಿದ್ದಾನೆ ? ಯಾವ ಪಾಪ ಮಾಡಿದ್ದಾನೆ ? ಕೈ ರಕ್ತ ಮಾಡಿಕೊಂಡಿದ್ದೇಕೆ ? ವಿಕೃತಿ ಮೆರೆದಿದ್ದೇಕೆ ? ಇದ್ಯಾವುದೂ ರಚಿತಾಗೆ ಗೊತ್ತಿಲ್ಲ ಎಂದೇನಿಲ್ಲ. ಆದರೆ ಅದನ್ನು ಪಕ್ಕಕ್ಕೆ ತಳ್ಳಿ ದರ್ಶನ್ಗೆ ದೀಡು ನಮಸ್ಕಾರ ಹಾಕಿ ತಮ್ಮ ಲೆವೆಲ್ ಸಾಬೀತುಪಡಿಸಿದ್ದಾರೆ ರಚಿತಾ.
ವಾ.ಓ: ದಚ್ಚು ಜೈಲು ಸೇರಿದ ಕೆಲವೇ ದಿನ…ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊAಡಿದ್ದರು ರಚಿತಾ. ಅದರಲ್ಲಿ ಇವರು ಹೇಳಿದ್ದು ಇಷ್ಟು. `ಬುಲ್ಬುಲ್ ಸಿನಿಮಾದಲ್ಲಿ ನನಗೆ ಅವಕಾಶ ಕೊಟ್ಟಿದ್ದು ದರ್ಶನ್. ಅವರು ನನಗೆ ಗುರು ಸಮಾನ. ಅವರೀಗ ಕಷ್ಟದಲ್ಲಿದ್ದಾರೆ. ಆದಷ್ಟು ಬೇಗ ಹೊರ ಬರಲಿ. ಜೊತೆಗೆ ರೇಣುಕಾಸ್ವಾಮಿ ಕುಟುಂಬಕ್ಕೂ ದೇವರು ನೆಮ್ಮದಿ ನೀಡಲಿ…’ ಹೀಗಂತ ನಾಲ್ಕು ಸಾಲು ಗೀಚಿ ಫ್ಯಾನ್ಸ್ ಕೆಂಗಣ್ಣಿನಿAದ ಬಚಾವಾಗಿದ್ದರು. ಈಗ ಕಂಬಿ ಹಿಂದೆ ದರ್ಶನ್ ಜೊತೆ ನಿಂತು ಅಸಲಿ ಬಂಡವಾಳ ಬಯಲು ಮಾಡಿಕೊಂಡಿದ್ದಾರೆ.
ವಾ.ಓ: ಪರಪ್ಪನ ಅಗ್ರಹಾರಕ್ಕೆ ಹೋಗುವ ಮುನ್ನ ಇವರು ಕಾಲಿಟ್ಟಿದ್ದು ಎಲ್ಲಿಗೆ ಗೊತ್ತೆ ? ಬೆಂಗಳೂರು ಪೂರ್ಣಪ್ರಜ್ಞಾ ಲೇಔಟ್ನ ರಾಘವೇಂದ್ರ ಸ್ವಾಮಿ ಮಠಕ್ಕೆ. ರಾಯರ ಆರಾಧನೆ ನಡೆವ ಹೊತ್ತಲ್ಲಿ ಹೋಗಿ ನವಗೃಹ ಪೂಜೆ ಮಾಡಿಸಿದ್ದಾರೆ. ದರ್ಶನ್ ಬೇಗ ಬಿಡುಗಡೆಯಾಗಲಿ ಎನ್ನುವುದು ಉದ್ದೇಶ. ರಾಯರ ಪ್ರಸಾದವನ್ನು ಮೂರು ನಾಲ್ಕು ಬ್ಯಾಗ್ಗಳಲ್ಲಿ ತುಂಬಿಕೊAಡು ಕಾರು ಏರಿದ್ದಾರೆ. ಇವರಿಗೆ ಜಂಟಿಯಾಗಿ ಇಂಡುವಾಳ ಸಚ್ಚಿದಾನಂದ ಕೂಡ ಇದ್ದರು. ಇಬ್ಬರೂ ಸಾರಥಿಗೆ ಸಾಷ್ಟಾಂಗ ನಮಸ್ಕಾರ ಹಾಕಿದ್ದಾರೆ. ಎಂಥಾ ದಿವ್ಯ ದೃಶ್ಯ…? ಕಣ್ಣಲ್ಲಿ ರಕ್ತ ಬರೋದು ಬಾಕಿ…
ವಾ.ಓ: ಕೆಲವು ನಿಮಿಷ ದರ್ಶನ್ ಜೊತೆ ಕಳೆದಿದ್ದಾರೆ. ಅವರೊಂದಿಗೆ ಮಾತಾಡಿದ್ದಾರೆ. ಇಷ್ಟು ದಿನ ಯಾಕೆ ಹೋಗಲಿಲ್ಲ ರಚಿತಾ ಎಂದು ಕೆಲವರು ಕೇಳುತ್ತಿದ್ದರು. ಹಾಗೆಯೇ ಅನೇಕ ಗೆಳೆಯರು, ಬಂಧುಗಳು ಮೀಟ್ ಮಾಡಿಹೋಗಿದ್ದರು. ಆದರೆ ಚಾನ್ಸ್ ಪಡೆದುಕೊಂಡ ರಚಿತಾ ಮಾತ್ರ ಇಂಥ ಹೊತ್ತಲ್ಲಿ ಇತ್ತ ಕಾಲು ಹಾಕಲಿಲ್ಲವಲ್ಲ ? ಹೀಗಂತ ಯಾರೋ ಹೇಳಿರಬೇಕು. ಆ ಋಣ ಯಾಕೆ ಉಳಿಸಿಕೊಳ್ಳಬೇಕು ? ಫಲಿತಾಂಶ ಗುಳಿಕೆನ್ನೆ ಪರಪ್ಪನ ಅಗ್ರಹಾರದಲ್ಲಿ ಹಾಜರಾಗಿದೆ. ಫೈನಲಿ ಹೇಳಿದ್ದೇನು ರಚಿತಾ ?
ಬೈಟ್ : ರಚಿತಾರಾಮ್, ನಟಿ
ವಾ.ಓ: ಇದು ರಚಿತಾ ರಾಮ್ ಮನದಾಳದ ಮಾತು. ದರ್ಶನ್ರನ್ನು ಸಿಕ್ಕಾಪಟ್ಟೆ ಮಿಸ್ ಮಾಡಿಕೊಳ್ಳುತ್ತಿದ್ದರಂತೆ ರಚಿತಾ. ಅದ್ಯಾವ ಪರಿ ಮಿಸ್ ಮಾಡಿಕೊಂಡು ಒದ್ದಾಡುತ್ತಿದ್ದರು…ಕಂಗಾಲಾಗಿದ್ದರು…ಹೈರಾಣಾಗಿದ್ದರು ಎನ್ನುವುದನ್ನು ವಿವರಿಸಲಿಲ್ಲ. ಅದೆಲ್ಲವೂ ನಿಮ್ಮ ಅರ್ಜೆಂಟ್ ಅವಗಾಹನೆಗೆ ಬಿಟ್ಟಿದ್ದೇವೆ. ನಿಮಗೆ ಹೇಗೆ ಬೇಕೊ ಹಾಗೆ ತಿಳಿದುಕೊಂಡು ತೃಪ್ತಿಯಿಂದ ತೆಂಗಿನ ಹಾಲನ್ನು ಕುಡಿದು ಕೇಕೆ ಹಾಕಬಹುದು. ಇಷ್ಟಕ್ಕೇ ರಚಿತಾ ಸೈಲೆಂಟಾಗಲಿಲ್ಲ. ಕಾರಣ ಅವರ ಕಣ್ಣ ಮುಂದೆ ಸಿಂಹಾಸನದಲ್ಲಿ ಪವಡಿಸಿದ ದಚ್ಚು ಕಾಣಿಸುತ್ತಿದ್ದರು.
ಬೈಟ್ : ರಚಿತಾರಾಮ್, ನಟ
ವಾ.ಓ: `ರಾಜನನ್ನು ರಾಜನ ರೀತಿಯೇ ನೋಡಲು ಇಷ್ಟಪಡುತ್ತೇನೆ….’ ಇದು ದರ್ಶನ್ ಬಗ್ಗೆ ರಚಿತಾ ಹೇಳಿದ ಇನ್ನೊಂದು ಘೋಷವಾಕ್ಯ. ಇದುವರೆಗೆ ಅಭಿಮಾನಿಗಳ ಸಮ್ಮುಖದಲ್ಲಿ, ಕೈಗೊಂದು ಕಾಲಿಗೊಂದು ಆಳನ್ನಿಟ್ಟುಕೊಂಡು ಮೆರೆಯುತ್ತಿದ್ದ ದರ್ಶನ್ ಈಗ ಒಂಟಿಯಾಗಿ ಹತ್ತಡಿ ಕೋಣೆಯಲ್ಲಿ ಮಲಗುತ್ತಿರುವುದು, ಜೈಲೂಟವನ್ನು ತಿನ್ನುತ್ತಿರುವುದನ್ನು ಕೆಲವರು ಇಷ್ಟ ಪಡುವುದಿಲ್ಲ. ಯಾರು ಇಷ್ಟ ಪಡುತ್ತಾರೊ ಬಿಡುತ್ತಾರೊ…ಈ ದೇಶದ ಕಾನೂನು ಮಾತ್ರ ಮಾಡಿದ ತಪ್ಪಿಗೆ ಹೆಡಮುರಿಗೆ ಕಟ್ಟಿ ಶುಗರ್ಲೆಸ್ ಇಡ್ಲಿ ಮುಕ್ಕಿಸುತ್ತದೆ. ಕೆಮ್ಮಿದರೆ ಕ್ಯಾಕರಿಸುತ್ತದೆ…ಅಲ್ಲವೆ ?
ವಾ.ಓ: ರಚಿತಾ ಒಂದು ಮಾತು ನೆನಪಲ್ಲಿ ಇಟ್ಟುಕೊಳ್ಳಿ. ಒಬ್ಬನ ಕೊಲೆಗೆ ಕಾರಣವಾದ ಆರೋಪಿಯನ್ನು ನೋಡಿ ಬಂದು ಮೈಕ್ ಮುಂದೆ ಕಣ್ಣೀರು ಹಾಕುತ್ತಿರಲ್ಲ…ನಿಮಗೆ ನಿಜವಾಗಿಯೂ ಮನುಷ್ಯತ್ವ ಇದೆಯಾ ? ರಾಜ ಎನ್ನುವ ಶಬ್ದ ಬಳಸುತ್ತೀರಲ್ಲ….ಒಬ್ಬ ರಾಜ ಇಂಥ ರಕ್ತಪಾತವನ್ನು ಮಾಡಿ ಕೇಕೆ ಹಾಕುವುದನ್ನು ಒಪ್ಪುತ್ತೀರಾ ? ದರ್ಶನ್ ಆರೋಗ್ಯ ಫಿಟ್ ಅಂಡ್ ಫೈನ್ ಎನ್ನುತ್ತೀರಲ್ಲ…ರೇಣುಕಾಸ್ವಾಮಿ ಕುಟುಂಬದ ಆರೋಗ್ಯವೇ ಬೀದಿ ಪಾಲಾಗಿರುವುದು ನೆನಪಿಗೆ ಬರಲಿಲ್ಲವಾ ? ಇದೇನಾ ನಿಮ್ಮ ಅಸಲಿ ಕ್ಯಾರೆಕ್ಟರ್…ಕನ್ನಡಿಗರು ಕೆಂಡ ಕಾರುತ್ತಿದ್ದಾರೆ ಹೀಗೆ…
ವಾ.ಓ: ಮೈಕ್ ಎದುರಿಗಿದ್ದಷ್ಟು ಹೊತ್ತು. ಬರೀ ದರ್ಶನ್ ಹೆಸರನ್ನೇ ಬಡಬಡಿಸುತ್ತಿದ್ದ ಗುಳಿಕೆನ್ನೆಗೆ ಒಂದೇ ಒಂದು ಕ್ಷಣ ರೇಣುಕಾಸ್ವಾಮಿ ನೆನಪಾಗಲಿಲ್ಲ. ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳಿಸಿದ್ದ, ಅದಕ್ಕೆ ತಕ್ಕ ಶಾಸ್ತಿಯಾಗಿದೆ. ಹೀಗಂತ ಕೆಲವು ವಿಕೃತ ದೇಹಗಳು ಬೊಗಳುತ್ತಿವೆ. ಓಕೆ ಫೈನ್. ಆತನನ್ನು ಬಿಡಿ, ಆತನ ಕುಟುಂಬ ರಚಿತಾಗೆ ನೆನಪಾಗಲಿಲ್ಲವಾ ? ರೇಣುಕಾ ಮಡದಿ ಏಳೆಂಟು ತಿಂಗಳ ಗರ್ಭಿಣಿ. ಚೊಚ್ಚಲ ಮಗು. ಮದುವೆಯಾಗಿ ಕೇವಲ ವರ್ಷವಾಗಿದೆ. ಆತನನ್ನು ಹೆತ್ತವರಿಗೆ ರೇಣುಕಾ ಬಿಟ್ಟರೆ ಬೇರೆ ದಿಕ್ಕಿಲ್ಲ. ಅಂದರೆ ಅನ್ನ ಹಾಕೋರು ಯಾರೂ ಇಲ್ಲ. ಇಷ್ಟೆಲ್ಲ ಗೊತ್ತಿಲ್ಲದಷ್ಟು ಅಮಾಯಕ…ಮುಗ್ಧ ಹೆಣ್ಣು ರಚಿತಾ ಅಂದರೆ ನಮ್ಮ ಅಭ್ಯಂತರ ಏನೂ ಇಲ್ಲ. ಅಂಥ ಹೆಣ್ಣಿಗೆ `ಮದರ್ ಇಂಡಿಯಾ’ ಬಿರುದು ಕೊಟ್ಟುಬಿಡಿ…ಪ್ಲೀಸ್…
ವಾ.ಓ: ರೇಣುಕಾಸ್ವಾಮಿ…ಐವತ್ತು ಕೇಜಿ ತೂಗದ ಸಣಕಲು ದೇಹವನ್ನು ಡಿ ಗ್ಯಾಂಗ್ನ ಹದಿನೆಂಟು ಗೂಂಡಾಗಳು ಯಾವ ಪರಿ ಹಿಂಸೆ ನೀಡಿದೆ ಎನ್ನುವುದು ಜಗತ್ತಿಗೇ ಗೊತ್ತಿದೆ. ರೇಣುಕಾ ಸ್ವಾಮಿ ದೇಹದ ಹೊರಗೆ ಮತ್ತು ಒಳಗೆ…ಬರೀ ಗಾಯ…ಮೂಳೆ ಮುರಿತ….ಮೆದುಳಲ್ಲಿ ರಕ್ತ ಹೆಪ್ಪುಗಟ್ಟಿದೆ…ಶ್ವಾಸನಾಳದಲ್ಲಿ ಮೂಳೆ ಸಿಕ್ಕಿಕೊಂಡಿದೆ…ಮರ್ಮಾAಗಕ್ಕೆ ಒದೆಯಲಾಗಿದೆ…ಸಿಗರೇಟಿನಿಂದ ಸುಡಲಾಗಿದೆ…ಮೆಗ್ಗರ್ ಯಂತ್ರದಿAದ ಮೂರ್ಚೆ ತಪ್ಪಿದ ರೇಣುಕಾಗೆ ಶಾಕ್ ನೀಡಲಾಗಿದೆ…ಬೆಲ್ಟ್…ಲಾಠಿ…ರಿಪೀಸ್ನಿಂದ ಬಾಸುಂಡೆ ಎಬ್ಬಿಸಿದ್ದಾರೆ…ಮಾಂಸ ತಿನ್ನಿಸಿ ಹೊಟ್ಟೆಗೆ ಒದ್ದು ಕಕ್ಕಿಸಿದ್ದಾರೆ…ಲಾರಿಗೆ ತಲೆ ಗುದ್ದಿಸಿದ್ದಾರೆ…ಪಾಪ ಡಿ ಗ್ಯಾಂಗ್ ಮಾಡಿದ್ದು ಇಷ್ಟೇ. ಬೇರೇನೂ ಇಲ್ಲ. ಆದರೂ ಸತ್ತಿದ್ದಾನೆ. ಈ ವಿಷಯ ಮೆದುಳಿಗೆ ಹೊಳೆಯಲಿಲ್ಲವಾ ಅಯೋಗ್ಯ ಸಿನಿಮಾ ನಟಿಯೇ ?
ವಾ.ಓ: ರೇಣುಕಾಸ್ವಾಮಿ ಯಾವನೋ ಏನೊ ? ಹೊಡೆದಿದ್ದು ನನ್ನ ಗುರು ? ಆತನಿಗೆ ನನ್ನ ನಿಷ್ಠೆ…ನಿಯತ್ತು…ಸಕಲ ಸವಲತ್ತು. ಹೀಗಂತ ರಚಿತಾ ನಾಲಿಗೆ ಅಲ್ಲಾಡಿಸಬಹುದು. ಈಗ ಡೈರೆಕ್ಟ್ ರಚಿತಾ ಅಪ್ಪನನ್ನು ಮಾತಾಡಿಸೋಣ. ಅಕಸ್ಮಾತ್ ರಚಿತಾ ಅಪ್ಪನಿಗೇ ರೇಣುಕಾಸ್ವಾಮಿ ಗತಿಯನ್ನು ಯಾರಾದರೂ ತಂದಿದ್ದರೆ, ಅದೇ ರೀತಿ ಬಗ್ಗಿಸಿ ನುಗ್ಗಿಸಿ ಹೊಡೆದು…ಮೋರಿಗೆ ದೇಹ ಬಿಸಾಕಿದ್ದರೆ…ಆ ಹೆಣವನ್ನು ನಾಯಿ…ಹಂದಿ ತಿಂದು ತೇಗಿದ್ದರೆ…ಎರಡು ದಿನ ಅನಾಥವಾಗಿ ರಚಿತಾ ಅಪ್ಪನ ದೇಹ ಹೀಗೆ
ಬಿದ್ದಿದ್ದರೆ….ಆಗಲೂ ರಚಿತಾ ಇದೇ ರೀತಿ ರಾಯರ ಸನ್ನಿಧಿಗೆ ಹೋಗಿ ಪೂಜೆ ಮಾಡಿಸಿ, ಪ್ರಸಾದವನ್ನು ಆರೋಪಿಗೆ ಕೈಯಾರೆ ತಿನ್ನಿಸಿ…ಪುಣ್ಯ ಕಟ್ಟಿಕೊಳ್ಳುತ್ತಿದ್ದರಾ ? ಕನ್ನಡಿಗರು ಕೇಳುತ್ತಿದ್ದಾರೆ. ಉತ್ತರ ಕೊಡ್ತೀರಾ ರಚ್ಚು…?
ವಾ.ಓ: ಪರಪ್ಪನ ಅಗ್ರಹಾರದಲ್ಲಿ ಅನೇಕ ಕೊಲೆ ಆರೋಪಿಗಳು ಒದ್ದಾಡುತ್ತಿದ್ದಾರೆ. ಇನ್ನೊಮ್ಮೆ ಇನ್ನೊಂದು ಮಠಕ್ಕೆ ಹೋಗಿ ನವಗೃಹ ಪೂಜೆ ಮಾಡಿಸಿ ಪ್ರಸಾದವನ್ನು ಆ ಆರೋಪಿಗಳಿಗೆ ತಿನ್ನಿಸಿ ಬನ್ನಿ. ಅವರ ಆಶೀರ್ವಾದವೂ ಸಿಗುತ್ತದೆ. ಸದ್ಯಕ್ಕೆ ಸ್ಯಾಂಡಲ್ವುಡ್ನಲ್ಲಿ ಮಾತ್ರ ಮಿನುಗುತ್ತಿರುವ ನಿಮ್ಮ ಕಲಾ ಹಾಗೂ ಕೊಲೆ ಸಂಘ ಸಂಗದ ಪ್ರತಿಭೆ ರಾಷ್ಟçಮಟ್ಟದಲ್ಲಿ ಮೆರವಣಿಗೆ ಹೊರಡುತ್ತದೆ. ರಶ್ಮಿಕಾ ಮಂದಣ್ಣ ಕೂಡ ಮಂಕಾಗುವAತೆ ಬಾಲಿವುಡ್ನಲ್ಲಿ ಅವಕಾಶ ಸಿಗುತ್ತದೆ. ಅದಕ್ಕಿಂತ ಸೌಭಾಗ್ಯ ಇನ್ನೇನಿದೆ ? ಸಾಧ್ಯವಾದಷ್ಟು ಬೇಗ ಈ ನಿರ್ಧಾರಕ್ಕೆ ಬನ್ನಿ. ಇಲ್ಲದಿದ್ದರೆ ದಾವೂದ್ ಇಬ್ರಾಹಿಂ ಗ್ಯಾಂಗು ದುಬೈನಿಂದ ಬಂದು ನಿಮ್ಮ ಮನೆ ಮುಂದೆ ಧರಣಿ ಕೂಡುತ್ತಾರೆ. ಟೇಕ್ ಕೇರ್…ಹ್ಯಾಪಿ ಜರ್ನಿ…ಢಾಂ…ಢೂA…ಢುಸುಕ್…
-ಮಹೇಶ್ ದೇವಶೆಟ್ಟಿ, ಫಿಲ್ಮ್ಬ್ಯೂರೊ, ಫ್ರೀಡಂ ಟಿವಿ