Wednesday, June 25, 2025
26.8 C
Bengaluru
Google search engine
LIVE
ಮನೆಜಿಲ್ಲೆಬಳ್ಳಾರಿ ವಿವಿ ಕರ್ಮಕಾಂಡ ಪ್ರಾಧ್ಯಾಪಕರ ಬಡ್ತಿ ಬಂಡಾಟ..!

ಬಳ್ಳಾರಿ ವಿವಿ ಕರ್ಮಕಾಂಡ ಪ್ರಾಧ್ಯಾಪಕರ ಬಡ್ತಿ ಬಂಡಾಟ..!

ಬಳ್ಳಾರಿ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಸದಾ ಒಂದಿಲ್ಲೊಂದು ವಿವಾದದಲ್ಲಿ ಸುದ್ದಿಯಲ್ಲಿರುತ್ತೆ.ಇದೀಗ ಮತ್ತೊಂದು ಎಡವಟ್ಟು ಮಾಡಿಕೊಂಡು ಸುದ್ದಿಯಾಗಿದೆ. ಇಷ್ಟಕ್ಕೂ ಅದೇನು ಎಡವಟ್ಟು ಮಾಡಿಕೊಂಡಿದೆ ಅಂತೀರಾ ಹಾಗಾದ್ರೇ ಕಂಪ್ಲೀಟ್ ಡೀಟೇಲ್ಸ್ ಇರೋ ಈ ಸ್ಟೋರಿ ನೋಡಿ.

ಹೌದು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಯುಜಿಸಿ ಹಾಗೂ ಎಐಸಿಟಿಇ ನಿಯಮಾವಳಿ ಪ್ರಕಾರ ಅರ್ಹತೆ ಪಡೆಯದ ಕೆಲವು ಸಹ ಪ್ರಾಧ್ಯಾಪಕರಿಗೆ ಪ್ರಾಧ್ಯಾಪಕರ ಹುದ್ದೆಗೆ ಬಡ್ತಿ ಕೊಡಲು ಮುಂದಾಗಿದೆ. ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ, ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಅನಂತ ಝಂಡೇಕರ್, ಹಿಂದಿನ ಪ್ರಭಾರ ಕುಲಪತಿ ಸಾಹೇಬ್ ಅಲಿ ಸೇರಿ 6 ಸಹ ಪ್ರಾಧ್ಯಾಪಕರಿಗೆ ಪ್ರಾಧ್ಯಾಪಕರ ಹುದ್ದೆಗೆ ಬಡ್ತಿ ನೀಡಲು ತರಾತುರಿಯಲ್ಲಿ ಸಿದ್ದತೆ ನಡೆದಿದೆ. ವಾಣಿಜ್ಯ ಶಾಸ್ತ್ರ ವಿಭಾಗದ ರವಿ, ಅರ್ಚನಾ, ಆಡಳಿತ ನಿರ್ವಹಣಾ ಶಾಸ್ತ್ರ ವಿಭಾಗದ ಕೆ.ಸಿ. ಪ್ರಶಾಂತ್, ಇತಿಹಾಸ ವಿಭಾಗದ ತಿಪ್ಪೇಸ್ವಾಮಿ ಅವರಿಗೆ ಬಡ್ತಿ ನೀಡಲಾಗುತ್ತಿದೆ.

Vijayanagara Sri Krishanadevaraya University, Jnana Sagara Campus, Vinayaka Nagar, Cantonment, Ballari, Karnataka 583104, India, University, state

ಈಗಾಗಲೇ ಇವರ ಹೆಸರುಗಳನ್ನು ಸಂಬಂಧಪಟ್ಟ ಪದೋನ್ನತಿ ಸಮಿತಿಯು ಶಿಫಾರಸು ಮಾಡಿದೆ.ಇದು ನಿಯಮಬಾಹಿರ ಅನ್ನೋದು ಸಿಂಡಿಕೇಟ್ ಸದಸ್ಯರ ಅಸಮಧಾನ ಕ್ಕೆ ಕಾರಣವಾಗಿದೆ. ಬೈಟ್. ಮರ್ಚಡ್ ಮಲ್ಲಿಕಾರ್ಜುನ ಗೌಡ. ಮಾಜಿ ಸಿಂಡಿಕೇಟ್ ಸದಸ್ಯ ಇನ್ನೂ ಪ್ರಾಧ್ಯಾಪಕರು ಬಡ್ತಿ ಪಡೆಯಲು ಕನಿಷ್ಠ 15 ವರ್ಷ ಅನುಭವ ಪಡೆದಿರಬೇಕು. ಆದರೆ, ಬಡ್ತಿಗೆ ಹೆಸರು ಶಿಫಾರಸ್ಸಾಗಿರುವವರಿಗೆ ಅಷ್ಟು ವರ್ಷ ಅನುಭವವಿಲ್ಲ.ಇದು ನಿಯಮಬಾಹಿರ ಅನ್ನೋದು ಸಿಂಡಿಕೇಟ್ ಸದಸ್ಯರ ಆರೋಪವಾಗಿದೆ.ಸಹ ಪ್ರಾಧ್ಯಾಪಕರಿಗೆ ಬಡ್ತಿ ಕೊಡುವ ವಿಷಯಕ್ಕೆ ಸಂಬಂಧಿಸಿದಂತೆ ರುದ್ರೇಶ್ ಮೌಖಿಕವಾಗಿ ಆಕ್ಷೇಪ ಎತ್ತಿದ್ದಾರೆ. ಬಡ್ತಿ ವಿಷಯದಲ್ಲಿ ಯುಜಿಸಿ ಮತ್ತು ಎಐಸಿಟಿಇ ನಿಯಮಾವಳಿ ಪಾಲನೆ ಕಡ್ಡಾಯ. ಅವುಗಳನ್ನು ಉಲ್ಲಂಘಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ವಿವಿ ಕುಲಸಚಿವರು ನೇರವಾಗಿ ಹೇಳಿದ್ದಾರೆ.

Vijayanagara Sri Krishnadevaraya University - [VSKU], Bellary - Reviews 2024-2025

ರುದ್ರೇಶ್ ಕುಲಸಚಿವ ಒಟ್ಟಾರೆಯಾಗಿ ಯುಜಿಸಿ ಹಾಗೂ ಎಐಸಿಟಿಇ ನಿಯಮಗಳನ್ನು ಪಾಲಿಸದೆ ಪೂರ್ಣ ಪ್ರಮಾಣದ ಕುಲಪತಿ ಇಲ್ಲದಿರುವಾಗ ಹಾಗೂ ಪೂರ್ಣ ಪ್ರಮಾಣದ ಕುಲಪತಿ ನೇಮಕವಾಗುವವರೆಗೆ ಎಲ್ಲ ಬಡ್ತಿಗಳನ್ನು ತಡೆಹಿಡಿದು ಶೈಕ್ಷಣಿಕವಾಗಿ ಅಗತ್ಯವಿರುವ ದೈನಂದಿನ ನಿರ್ಧಾರ ಮಾತ್ರ ತೆಗೆದುಕೊಳ್ಳಬೇಕು ಅನ್ನೋದು ಸಿಂಡಿಕೇಟ್ ಸದಸ್ಯರ ಒಕ್ಕೊರಲಿನ ಆಗ್ರಹವಾಗಿದೆ.

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments