#Exclusive Newsದೇಶ/ವಿದೇಶ

ದಾಳಿ ಮಾಡಿದವರನ್ನ ಹುಡುಕಿ ಕೊಲ್ಲುತ್ತೇವೆ ಪ್ರಧಾನಿ ಮೋದಿ ಶಪಥ..!

ಬಿಹಾರ : ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ 1 ನಿಮಿಷಗಳ ಕಾಲ ಮೌನಾಚರಣೆ ಮಾಡಿ ಭಾಷಣ ಆರಂಭಿಸಿದ್ದಾರೆ. ಭಯೋತ್ಪಾದಕರ ಮೇಲೆ ಪ್ರತೀಕಾರದ ದಾಳಿ ಮಾಡೇ ಮಾಡ್ತೀವಿ..ಒಬ್ಬೋಬ್ಬ ಭಯೋತ್ಪಾದಕನನ್ನು ಹುಡುಕಿ-ಹುಡುಕಿ ಕೊಲ್ಲುತ್ತೇವೆ ಎಂದು ಶಪಥ ಮಾಡಿದ ಪ್ರಧಾನಿ ನರೇಂದ್ರ ಮೋದಿ.

ಬಿಹಾರದಲ್ಲಿ ಹೇಳಿಕೆ ನೀಡಿದ ಮೋದಿ, ಊಹಿಸಲಾಗದಷ್ಟು ಮಟ್ಟಿಗೆ ಉಗ್ರರಿಗೆ ಶಿಕ್ಷೆ ಕೊಡುತ್ತೇವೆ ಎಂದಿದ್ದಾರೆ.ಭಯಾನಕ,ಭೀಕರ ಪ್ರತಿಕಾರ ತೀರಿಸಿಕೋಳ್ಳುತ್ತೇವೆ. ಉಗ್ರರು ಅಮಾಯಕರನ್ನು ಭೀಕರವಾಗಿ ಸಾಯಿಸಿದ್ದಾರೆ.ಪಹಲ್ಗಾಮ್​ ದಾಳಿಯಿಂದ ಭಾರತ ದುಃಖದಲ್ಲಿದೆ ಎಂದು ಮೋದಿ ಹೇಳಿಕೆ ನೀಡಿದ್ದಾರೆ..

ಬಿಹಾರದ ಮಧುಬನಿಯಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಆಕ್ರೋಶಭರಿತವಾಗಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ.ಹುಡುಕಿ-ಹುಡುಕಿ ಕೊಲ್ಲುತ್ತೇವೆ, ದಾಳಿಗೆ ಕಾರಣರಾದವರನ್ನು ಯಾರನ್ನೂ ಬಿಡಲ್ಲ ಎಂದಿದ್ದಾರೆ.

ಈ ವೇಳೆ ನರೇಂದ್ರ ಮೋದಿ ಉಗ್ರರ ಬಲಿಗೆ ಮೃತ ಪಟ್ಟವರಿಗೆ ಸಂತಾಪ ಸೂಚಿಸಿದರು.

Comments (0)

Your email address will not be published. Required fields are marked *

Back to top button