#Exclusive NewsTop Newsಆರೋಗ್ಯಫ್ರೀಡಂ ಟಿವಿ ವಿಶೇಷರಾಜ್ಯಸುದ್ದಿ

ಪಿತೃಪಕ್ಷ ಪೂಜೆ.. ಹಿರಿಯರ ಹಬ್ಬಕ್ಕೆ ಬಾಡೂಟ ಮಾಡುವ ಕುಟುಂಬಗಳಿಗೆ ಟೆನ್ಶನ್!

ಮಹಾಲಯ ಅಮಾವಾಸ್ಯೆ ಪಿತೃಪಕ್ಷ ಪೂಜೆ ದಿನ ಈ ಬಾರಿ ಅಕ್ಟೋಬರ್ 2 ರಂದು ಬಂದಿದೆ. ಆ ದಿನ ಮಾಂಸ ಹಾಗೂ ಮದ್ಯ ಮಾರಾಟ ನಿಷೇಧವಿರಲಿದ್ದು, ಹಿರಿಯರ ಪೂಜೆ ಮಾಡುವವರಿಗೆ ಚಿಂತೆ ಆರಂಭವಾಗಿದೆ. ಈ ಹಿನ್ನೆಲೆ ಗಾಂಧಿ ಜಯಂತಿಯಂದೇ ಮಹಾಲಯ ಅಮಾವಾಸ್ಯೆ (ಪಿತೃ ಪಕ್ಷ) ಹಬ್ಬ ನಿಗದಿಯಾಗಿರುವುದರಿಂದ ಮಾಂಸ ಮಾರಾಟಕ್ಕೆ ಅನುಮತಿ ನೀಡಬೇಕು ಎಂದು ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್‌ ಅಸೋಸಿಯೇಷನ್‌ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ.

‘ಅಕ್ಟೋಬರ್‌ 2ರಂದೇ ಪಿತೃ ಪಕ್ಷದ ಹಬ್ಬ ಬಂದಿದೆ.

ಆ ದಿನ ದೈವಾಧೀನರಾಗಿರುವವರಿಗೆ ಮಾಂಸ ಖಾದ್ಯಗಳನ್ನು ಎಡೆ ಇಟ್ಟು ಪೂಜಿಸಲಾಗುತ್ತದೆ. ಇದು ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಹಾಗಾಗಿ, ಗಾಂಧಿ ಜಯಂತಿ ದಿನದಂದು ಮಾಂಸ ಮಾರಾಟ ನಿಷೇಧಿಸಿ ಹೊರಡಿಸಿರುವ ಆದೇಶ ಹಿಂಪಡೆಯುವಂತೆ ಸಿಎಂ, ನಗರಾಭಿವೃದ್ಧಿ, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಈವರೆಗೆ ಪ್ರತಿಕ್ರಿಯಿಸಿಲ್ಲ,” ಎಂದು ಅಸೋಸಿಯೇಷನ್‌ ಅಧ್ಯಕ್ಷ ಕೆ.ಎನ್‌.ನಾಗರಾಜು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಎನ್‌. ಸೆಲ್ವರಾಜು, ಖಜಾಂಚಿ ಕೆ.ನಾಗರಾಜ ಉಪಸ್ಥಿತರಿದ್ದರು.
ಗಾಂಧಿ ಜಯಂತಿ ದಿನವೇ ಪಿತೃ ಪಕ್ಷ ಹಬ್ಬ, ಈ ವರ್ಷ ಮಹಾಲಯ ಅಮಾವಾಸ್ಯೆಯ ಪಿತೃ ಪಕ್ಷ ಹಬ್ಬ ಹಾಗೂ ಗಾಂಧಿ ಜಯಂತಿ ಒಂದೇ ದಿನ ಬಂದಿದೆ. ಈ ಹಿನ್ನಲೆ ಹಬ್ಬ ಆಚರಣೆಗೆ ಸಮಸ್ಯೆಯಾಗುತ್ತದೆ ಎಂದು ಆ ದಿನ ಮಾಂಸ ಮಾರಾಟಕ್ಕೆ ಅನುಮತಿ ನೀಡುವಂತೆ ಈ ಹಿಂದೆ ಬಿಬಿಎಂಪಿಯ ಮಾಜಿ ಕಾರ್ಪೊರೇಟರ್ ವಿ ವಿ ಸತ್ಯನಾರಾಯಣ, ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕಯ ಅಧ್ಯಕ್ಷ ಬಿ ಎಂ ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು.

ಗಾಂಧಿ ಜಯಂತಿ ದಿನ ಯಾಕೆ ಬಂದು?
ಅಹಿಂಸಾ ದಿನ ಆಚರಣೆ ಹಿನ್ನೆಲೆ ಪ್ರತಿ ವರ್ಷ ಅಕ್ಟೋಬರ್‌ 2 ರಂದು ಮಾಂಸ ಹಾಗೂ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಆ ದಿನ ಪೂರ್ತಿ ದೇಶದಾದ್ಯಂತ ಮಾಂಸ ಮದ್ಯ ಮಾರಾಟ ಇರುವುದಿಲ್ಲ. ಈ ಬಗ್ಗೆ ಸ್ಥಳೀಯ ಆಡಳಿತ ಸಂಸ್ಥೆಗಳು ಆದೇಶ ಹೊರಡಿಸುತ್ತವೆ.

ಪಿತೃ ಪಕ್ಷ ಪೂಜೆ ದಿನ ಮನೆಗಳಲ್ಲಿ ಮೃತಪಟ್ಟ ಕುಟುಂಬದ ಹಿರಿಯರಿಗೆ ಅವರ ಇಷ್ಟದ ಖಾದ್ಯಗಳನ್ನು ಮಾಡಿ ಎಡೆ ಹಾಕುತ್ತಾರೆ. ಮುಖ್ಯವಾಗಿ ಮಾಂಸಾಹಾರ ಖಾದ್ಯ ಸಿದ್ಧಪಡಿಸಿ ಪೂಜೆ ಮಾಡುವುದು ವಾಡಿಕೆ. ಅಕ್ಟೋಬರ್‌ 2 ರಂದು ಬಂದಿರುವುದು ಆ ದಿನ ಮಾಂಸ, ಮದ್ಯ ಸಿಗುವುದಿಲ್ಲ. ಹಬ್ಬ ಮಾಡವುದು, ಹಿರಿಯರಿಗೆ ಎಡೆ ಹಾಕುವುದು ಹೇಗೆ ಎಂಬ ಚಿಂತೆ ಆರಂಭ ಆಗಿದೆ.

Comments (0)

Your email address will not be published. Required fields are marked *

Back to top button