ಗದಗ : ಗದುಗಿನ ಗಾಂಧಿ ಎಂದೇ ಪ್ರಸಿದ್ಧವಾಗಿರುವ ಗದಗ ಜಿಲ್ಲೆಯ ರೋಣ ತಾಲೂಕ ಕರಕಿಕಟ್ಟಿ ಗ್ರಾಮದ 54 ವರ್ಷದ ಮುತ್ತಣ್ಣ ತಿರ್ಲಾಪುರ ಅವರು ಗದಗ ಜಿಲ್ಲೆಯಿಂದ ಅಯೋಧ್ಯವರಿಗೂ ಸುಮಾರು 2 ಸಾವಿರ ಕಿಲೋಮೀಟರ್ ರಾಮ ನಾಮ ಜಪ ಮಾಡುತ್ತಾ ಸತತವಾಗಿ 39 ದಿನಗಳ ಕಾಲ ಪಾದಯಾತ್ರೆ ಮುಖಾಂತರ ಅಯೋಧ್ಯೆ ತಲುಪಿ ಶ್ರೀರಾಮಚಂದ್ರ ದರ್ಶನ ಪಡೆದು ಗದುಗಿಗೆ ಆಗಮಿಸಿದ್ದರು. ಈ ಹಿನ್ನಲೆಯಲ್ಲಿ ಅವರಿಗೆ ಕ್ರಾಂತಿ ಸೇನಾ ಸಂಘಟನೆ ವತಿಯಿಂದ ಪಾದಪೂಜೆ ಹಾಗೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಕ್ರಾಂತಿ ಸೇನಾ ಗದಗ ಜಿಲ್ಲಾ ಅಧ್ಯಕ್ಷ ಬಾಬು ಬಾಕಳೆ ಮಾತನಾಡಿ, ಮುತ್ತಣ್ಣ ತಿರ್ಲಾಪುರವರ ಪಾದಪೂಜೆ ಮಾಡುವುದರಿಂದ ನಮಗೆ ಪುಣ್ಯ ಪ್ರಾಪ್ತಿಯಾಗುತ್ತೆ. ಯಾಕೆಂದರೆ ಅವರಲ್ಲಿ ಶ್ರೀರಾಮಚಂದ್ರನ ಮೇಲಿರುವಂತ ಭಕ್ತಿ ನಿಜವಾಗಲೂ ಮೆಚ್ಚುವಂತದ್ದು, ತಮ್ಮ 54ನೇ ವಯಸ್ಸಿನಲ್ಲಿ 39 ದಿನಗಳ ಪಾದಯಾತ್ರೆ ಮುಖಾಂತರ ರಾಮಮಂದಿರ ತಲುಪಿರುವುದು ಇದು ನಮ್ಮ ಗದಗ ಜಿಲ್ಲೆ ಹೆಮ್ಮೆಯ ವಿಷಯ. ಇವರು ಮುಂದಿನ ಪೀಳಿಗೆಗೆ ಮಾದರಿ ಮತ್ತು ಪ್ರೇರಣೆ ಆಗಿದ್ದಾರೆ. ಇವರು ಉತ್ತರ ಭಾರತಕ್ಕೆ ಹೋದಾಗ ಆಧುನಿಕ ಗಾಂಧಿ ಎಂದು ಇವರಿಗೆ ಬಿರದು ನೀಡಲಾಯಿತು. ಅಯೋಧ್ಯ ಶ್ರೀರಾಮಚಂದ್ರ ದರ್ಶನ ಪಡೆದುಕೊಂಡು ಪುನಃ ತಮ್ಮ ತವರೂರಿಗೆ ವಾಪಸ್ ಬಂದಿದ್ದು ನಮ್ಮ ಕರ್ನಾಟಕ ಜನರಿಗೆ ಹೆಮ್ಮೆಯ ದಿನ ಹಾಗೂ ಅವರನ್ನು ಹಲವಾರು ಸಂಘಟನೆಗಳಿಂದ ಶ್ರೀರಾಮಚಂದ್ರನ ಭಕ್ತರಿಂದ ಅವರಿಗೆ ಸ್ವಾಗತ ಮಾಡುತ್ತಿದ್ದೇವೆ ಎಂದರು.