
ಕರ್ನಾಟಕ ಕಾಂಗ್ರೆಸ್ ಮಾದರಿಯಲ್ಲೇ ಚುನಾವಣೆಗೆ ಮುನ್ನ ಗ್ಯಾರಂಟಿ ಯೋಜನೆ ಘೋಷಿಸಿ, ತೆಲಂಗಾಣದಲ್ಲಿ ರೇವಂತ್ ರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರಕಕ್ಕೆ ಬಂದಿತ್ತು. ಇದೀಗ ತೆಲಂಗಾಣದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸರ್ಕಾರ ಪರದಾಡುತ್ತಿದೆ.
ಈ ಕುರಿತು ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಸಿಎಂ ರೇವಂತ್ ರೆಡ್ಡಿ, ನಾವು ಈಗಾಗಲೇ 7 ಲಕ್ಷ ಕೋಟಿ ಸಾಲದಲ್ಲಿ ಮುಳುಗಿದ್ದೇವೆ. ಇದು ನಾನು ಸಿಎಂ ಸ್ಥಾನದಲ್ಲಿ ಕುಳಿತ ಮೇಲೆ ಇದೆಲ್ಲಾ ಗೊತ್ತಾಯ್ತು ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ. ಮುಂದುವರೆದು ಮಾತನಾಡಿರುವ ರೇವಂತ್ ರೆಡ್ಡಿ, ಸಾಲ ಮಾಡಿ ಗ್ಯಾರಂಟಿ ಯೋಜನೆಗಳಿಗೆ ಹಣ ಕೊಡುತ್ತಿದ್ದೇವೆ. ರೇಸ್ನಲ್ಲಿ ಇಳಿದ ಮೇಲೆ ಈ ರೀತಿ ಮಾಡುವುದು ಅನಿವಾರ್ಯ. ಈ ಹಿಂದಿನ ಸಿಎಂ ಕೆ.ಸಿ. ಚಂದ್ರಶೇಖರಾವ್ 6.5 ಲಕ್ಷ ಕೋಟಿ ರೂಪಾಯಿ ಸಾಲವನ್ನು ನಮ್ಮ ನೆತ್ತಿಯ ಮೇಲೆ ಹಾಕಿ ಹೋಗಿದ್ದರು. ಸದ್ಯ ತೆಲಂಗಾಣ ಸರ್ಕಾರ 7 ಲಕ್ಷ ಕೋಟಿ ರೂಪಾಯಿ ಸಾಲದಲ್ಲಿ ಮುಳುಗಿದೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ರೇಸ್ನಲ್ಲಿ ಇಳಿದ ಮೇಲೆ ಏನಾದರೂ ಮಾಡಲೇಬೇಕು ಅಲ್ವಾ, ಈಗ ರೇಸ್ ನಡೆಯುತ್ತಿದೆ. ಏನಾದ್ರು ಮಾಡುತ್ತೇವೆ. ಸ್ಪೀಡ್ ಥ್ರಿಲ್ಸ್ ಬಟ್ ಕಿಲ್ಸ್ ಅಂತ ಗಾದೆಯೇ ಇದೆಯಲ್ಲಾ ಎಂದು ರೇವಂತ್ ರೆಡ್ಡಿ ಗ್ಯಾರಂಟಿ ಯೋಜನೆಗಳ ವಿಚಾರವಾಗಿ ಅಸಹಾಯಕತೆ ತೋಡಿಕೊಂಡಿದ್ದಾರೆ.




