Tuesday, June 24, 2025
25.9 C
Bengaluru
Google search engine
LIVE
ಮನೆಜಿಲ್ಲೆಯತ್ನಾಳ್​ ವಿರುದ್ದ ಮುಸ್ಲಿಂ ನಾಯಕರು ಪ್ರತಿಭಟನೆ..!

ಯತ್ನಾಳ್​ ವಿರುದ್ದ ಮುಸ್ಲಿಂ ನಾಯಕರು ಪ್ರತಿಭಟನೆ..!

ಯಾದಗಿರಿ : ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ಯತ್ನಾಳ್ಮತ್ತು ವಕ್ಫ್ತಿದ್ದುಪಡಿ ಕಾಯ್ದೆ ವಿರುದ್ಧ ಮುಸಲ್ಮಾನರು ಪ್ರತಿಭಟನೆ ನಡೆಸಿದರು. ತಮ್ಮ ಅಂಗಡಿಗಳನ್ನು ಬಂದ್ಮಾಡಿ ಮಹಾಂತಸ್ವಾಮಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಯತ್ನಾಳ್ಹಠಾವೋ, ಕರ್ನಾಟಕ ಬಚಾವೋ ಘೋಷಣೆಗಳನ್ನು ಕೂಗಲಾಯಿತು. ವಕ್ಫ್ತಿದ್ದುಪಡಿ ಕಾಯ್ದೆಯನ್ನು ವಾಪಸ್ಪಡೆಯುವಂತೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು.

ಯತ್ನಾಳ್​ , ಮೊಹ್ಮದ ಪೈಗಂಬರ್ ಬಗ್ಗೆ ಅವಹೇಳನಕಾರಿ ಭಾಷಣೆ ಖಂಡಿಸಿ ಪ್ರತಿಭಟನೆ ಮಾಡಲಾಯಿತು. ಯತ್ನಾಳ ನಿನು ನಕಲಿ ಹಿಂದುವಾದಿ, ನಿನಗೆ ಹಿಂದು ಧರ್ಮದ ಬಗ್ಗೆ ಗೌರವ ಇಲ್ಲ,ಬೇರೆ ಧರ್ಮದ ಬಗ್ಗೆ ಅವಹೇಳನಕಾರಿ ಭಾಷಣ ಮಾಡುವುದು ಸರಿಯಲ್ಲ.ಅನ್ಯ ಧರ್ಮದ ಬಗ್ಗೆ ಮಾತನಾಡುವ ಯತ್ನಾಳ್​ ಮೇಲೆ ಕೇಸ್ ದಾಖಲಿಸಬೇಕು ಎಂದು ಸರ್ಕಾರಕ್ಕೆ ಮುಸ್ಲಿಂ ನಾಯಕರು ಆಗ್ರಹಿಸಿದರು.

ಆದಷ್ಟೂ ಬೇಗ ಜಾತಿ ಗಣತಿ ಕಾನೂನಾತ್ಮಕವಾಗಿ ಜಾರಿಗೊಳಿಸಿ:

ಜಾತಿ ಗಣತಿ ಜಾರಿಗೆ ಗೊಳಿಸಿದರೆ ಎಲ್ಲಾ ಹಿಂದುಳಿದ ಸಮಾಜದವರು ಒಗ್ಗೂಡಿ ಸಮಾನವಾಗಿ ಬದುಕಲು ಅವಕಾಶ ಮಾಡಿಕೊಟ್ಟಂತೆ ಆಗುತ್ತೆ ಎಂದು ಸರ್ಕಾರಕ್ಕೆ ದಸ್ತಗೀರ ಮುಲ್ಲಾ ಅವರು ಮನವಿ ಕೊಂಡರು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments