Top Newsರಾಜಕೀಯರಾಜ್ಯಸುದ್ದಿ

ಮುಡಾ ಪ್ರಕರಣ : ಸಿಎಂ ತಮ್ಮ ಭಂಡತನ ತೊರಿಸುತಿದ್ದಾರೆ- ಅರವಿಂದ ಬೆಲ್ಲದ ಕಿಡಿ

ಮುಡಾ ಪ್ರಕರಣ ಎಂಥದ್ದು ಎಂದರೆ, ಯಾರಾದರು ಸೂಕ್ಷ್ಮ ವ್ಯಕ್ತಿ‌ ಇದರಲ್ಲಿ ಇದ್ದಿದ್ದರೆ ಅವರು ರಾಜೀನಾಮೆ ಕೊಡುತಿದ್ದರು. ಸಿಎಂ ಇಲ್ಲಿ ತಮ್ಮ ಭಂಡತನ ತೊರಿಸುತಿದ್ದಾರೆ ಎಂದು ಹೇಳುವ ಮೂಲಕ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಕಿಡಿಕಾರಿದರು. ಸಿಎಂ ಅವರ ಕುಟುಂಬ ಮುಡಾದಲ್ಲಿ ಇದೆ ಎಂದು ಇಡೀ ಜಗತ್ತಿಗೆ ಗೊತ್ತಿದೆ. ಇವತ್ತು ರಾಜ್ಯಪಾಲರು ಪ್ರಾಶ್ಯುಕ್ಯುಷನಗೆ ಕೊಟ್ಟಂತ ಸಂದರ್ಭದಲ್ಲಿ ಅವರು ಬಂಧನ ಆಗುವವರೆಗೆ‌ ಕಾಯಬಾರದು, ರಾಜೀನಾಮೆ ಕೊಡಬೇಕು ಎಂದು ಜನರ ಅಪೇಕ್ಷೆ ಮತ್ತು ಭಾವನೆಯಾಗಿದೆ. ಯಾವುದೇ ಕೈವಾಡ ಇಲ್ಲದೆ ತನಿಖೆ ಮಾಡಬೇಕು ಎಂದರೆ ಇವರು ಸಿಎಂ ಸ್ಥಾನದಲ್ಲಿ ಇರಬಾರದು‌‌ ಎಂದು ಹೇಳುವ ಮೂಲಕ‌ ಸಿಎಂ‌ಸಿದ್ದರಾಮಯ್ಯವರ ರಾಜೀನಾಮೆ ಅಗ್ರಹಿಸಿದರು.

Comments (0)

Your email address will not be published. Required fields are marked *

Back to top button