Tuesday, January 27, 2026
24 C
Bengaluru
Google search engine
LIVE
ಮನೆಜಿಲ್ಲೆಪರಿಷತ್ ವಿಪಕ್ಷ ನಾಯಕನ ಸ್ಥಾನದಿಂದ ಛಲವಾದಿ ವಜಾ ಮಾಡಿ : ಸಚಿವ ಶರಣಪ್ರಕಾಶ್​ ಆಗ್ರಹ

ಪರಿಷತ್ ವಿಪಕ್ಷ ನಾಯಕನ ಸ್ಥಾನದಿಂದ ಛಲವಾದಿ ವಜಾ ಮಾಡಿ : ಸಚಿವ ಶರಣಪ್ರಕಾಶ್​ ಆಗ್ರಹ

ಕಲಬುರಗಿ :  ಛಲವಾದಿ ನಾರಾಯಣ ಸ್ವಾಮಿ ಅವರನ್ನು ಪರಿಷತ್ ವಿರೋಧ ಪಕ್ಷದ ನಾಯಕನ ಸ್ಥಾನದಿಂದ ವಜಾ ಮಾಡಬೇಕು ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ಒತ್ತಾಯ ಮಾಡಿದ್ದಾರೆ. ಬಾಯಿಗೆ ಬಂದಂಗೆ ಬೈದ್ರೆ ಅದು ಛಲವಾದಿ ನಾರಾಯಣಸ್ವಾಮಿಗೆ ಶೋಭೆ ತರಲ್ಲ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಕಲಬುರ್ಗಿಯಲ್ಲಿ ನಿನ್ನೆ ಪ್ರತಿಭಟನೆ ನಡೆಸಿದ್ದ ಬಿಜೆಪಿ ಮುಖಂಡರು ರಿಪಬ್ಲಿಕ್ ಆಫ್ ಕಲಬುರಗಿ ಅಂತ ಅಬ್ಬರಿಸಿದ್ರು. ಆದ್ರೆ ನಾವು ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಮಾಡಿದ್ದೇವೆ.. ರಿಪಬ್ಲಿಕ್ ಮಾಡಲು ಪ್ರಯತ್ನ ಮಾಡಿಲ್ಲ ಎಂದು ಬಿಜೆಪಿ ನಾಯಕರ ವಿರುದ್ದ ಶರಣಪ್ರಕಾಶ್​ ಪಾಟೀಲ್​ ವಾಗ್ದಾಳಿ ನಡೆಸಿದ್ರು.

ಪ್ರಿಯಾಂಕ್ ಖರ್ಗೆ ವಿರುದ್ಧ ಬಾಯಿಗೆ ಬಂದಂತೆ ಮಾತಾಡಿದ್ದಕ್ಕೆ ಕಾರ್ಯಕರ್ತರಿಗೆ ಕೋಪ ಬಂದಿದೆ. ಬೈದರೆ ಯಾರಾದರು ಹೂವಿನ ಹಾರ ಹಾಕ್ತಾರಾ..? ಎಂದು ಛಲವಾದಿ ನಾರಾಯಣಸ್ವಾಮಿಯನ್ನು ಶರಣಪ್ರಕಾಶ್​ ಪಾಟೀಲ್​ ಪ್ರಶ್ನಿಸಿದ್ರು.

ಅಸಲಿಗೆ ಪೊಲೀಸರಿಗೆ ಹೇಳಿ ರಕ್ಷಣೆ ಕೊಡುವಂತೆ ಹೇಳಿದ್ದು ಪ್ರಿಯಾಂಕ್ ಖರ್ಗೆ  ಅವರು.. ಬಿಜೆಪಿಯವ್ರು ಪ್ರತಿಭಟನೆ ಮಾಡಿದ್ದು ಹಾಸ್ಯಾಸ್ಪದ.. ಅಧಿಕಾರ ಕಳೆದುಕೊಂಡ ನಂತ್ರ ಅವರ ಬುದ್ಧಿಭ್ರಮಣೆ ಆಗಿದೆ ಎಂದು ಶರಣಪ್ರಕಾಶ್ ಪಾಟೀಲ್ ಆಕ್ರೋಶ ಹೊರಹಾಕಿದ್ರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments