ಬೆಂಗಳೂರು: ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಬುಧವಾರ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಭ್ರಷ್ಠರಿಗೆ ಬಿಸಿ ಮುಟ್ಟಿಸಿದ್ದಾರೆ.ಬೆಂಗಳೂರು ಸೇರಿ ರಾಜ್ಯದ 8 ಕಡೆಗಳಲ್ಲಿ ಲೋಕಾಯುಕ್ತ ದಾಳಿ ಆಗಿದೆ.
ಗದಗ, ಬಳ್ಳಾರಿ, ಬೀದರ್ ಸೇರಿದಂತೆ 8 ಕಡೆಗಳಲ್ಲಿ ಏಕಕಾಲಕ್ಕೆ ರೇಡ್ ಆಗಿದೆ. ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ದಾಳಿಯಾಗಿದ್ದು, ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳನ್ನ ಪರಿಶೀಲಿಸುತ್ತಿದ್ದಾರೆ. ಸಾರಿಗೆ ಇಲಾಖೆಯ ಜಂಟಿ ನಿರ್ದೇಶಕಿ ಶೋಭಾ ಮನೆ ಮೇಲೆ ದಾಳಿಯಾಗಿದೆ.
- ಶೋಭಾ, ಸಾರಿಗೆ ಇಲಾಖೆ ಜಂಟಿ ನಿರ್ದೇಶಕಿ
- ಡಾ.ಎಸ್.ಎನ್.ಉಮೇಶ್, ಕಡೂರು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ
- ರವೀಂದ್ರ, ಬೀದರ್ ಸಣ್ಣ ನೀರಾವರಿ ಇಲಾಖೆ ಇನ್ಸ್ಪೆಕ್ಟರ್
- ಪ್ರಕಾಶ್ ಶ್ರೀಧರ್, ಬೆಳಗಾವಿಯ ಖಾನಾಪುರ ತಹಶೀಲ್ದಾರ್
- ಹುಚ್ಚೇಶ್, ಗದಗ ಬೆಟಿಗೇರಿ ನಗರಸಭೆಯ ಎಇಇ
- ಆರ್.ಹೆಚ್.ಲೋಕೇಶ್, ಬಳ್ಳಾರಿ BCM ತಾಲೂಕು ಅಧಿಕಾರಿ
- ಹುಲಿ ರಾಜ್, ರಾಯಚೂರು ಜೆಸ್ಕಾಂ ಜೂ.ಇಂಜಿನಿಯರ್