ಸಿಎಂ ಸಿದ್ದರಾಮಯ್ಯನವರ ರಾಜೀನಾಮೆಗೆ ಆಗ್ರಹಿಸಿದ ಕುಡಚಿ ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದ ರ್ಶಿಯಾದ ಪಿ.ರಾಜೀವ್.ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನಿಡುವುದರ ಮೂಲಕ ಸಿಎಂ ರಾಜಿನಾಮೆ ಕುರಿತಾಗಿ ಪ್ರಸ್ತಾಪ ಮಾಡಿದ್ದಾರೆ.ಆರೋಪ ಸ್ಥಾನದಲ್ಲಿ ಯಾರೇ ಇದ್ದರೂ ಸಹ ರಾಜೀನಾಮೆ ನೀಡಲೇಬೇಕು.ಜನಪ್ರತಿನಿಧಿಗಳ ನ್ಯಾಯಾಲಯದಿಂದ ತೀರ್ಪು ಬಂದಿದೆ.ಸಿದ್ದರಾಮಯ್ಯ ಮೊದಲು ರಾಜೀನಾಮೆ ನೀಡಿ ತನಿಖೆ ಎದುರಿಸಲಿ.ಕ್ಯಾಬಿನೆಟ್ ವತಿಯಿಂದ ಸಿಬಿಐ ಅನುಮತಿ ಕೊಡಲ್ಲ ಅಂತ ಹೇಳುತ್ತಾರೆ.ಅಧಿಕಾರಿದಲ್ಲಿದ್ದುಕೊಂಡು ತನಿಖೆ ಎದುರಿಸುವುದು ಕಾನೂನುಬಾಹಿರ.ಆರೋಪ ಮುಕ್ತರಾದ ಬಳಿಕ ನೀವು ಮತ್ತೆ ಸಿಎಂ ಸ್ಥಾನ ಅಲಂಕರಿಸಿ.ಅದರಲ್ಲಿ ನಮ್ಮದೇನು ತಕರಾರು ಇಲ್ಲವೆಂದ ಪಿ.ರಾಜೀವ್.