ಜಿಲ್ಲೆರಾಜಕೀಯ

ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಜಾತಿ ಪ್ರಮಾಣಪತ್ರ ವಿವಾದ

ವರದಿ : ಕುಮಾರ್, ಕೋಲಾರ 

ಕೋಲಾರ :  ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಜಾತಿ ಪ್ರಮಾಣಪತ್ರ ವಿವಾದ ಪ್ರಕರಣ ಕೊತ್ತೂರು ಮಂಜುನಾಥ್ ಶಾಸಕ ಸ್ಥಾನ ರದ್ದು ಮಾಡುವಂತೆ ಒತ್ತಾಯ ಮಾಡಿದ್ದಾರೆ.  ಕರ್ನಾಟಕ sc st ಸಂಘಟನೆಗಳ ಮಹಾ ಒಕ್ಕೂಟದಿಂದ ಒತ್ತಾಯ ಎಸ್ ಸಿ ಮೀಸಲಾತಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ . ಕೊತ್ತೂರು ಮಂಜುನಾಥ್ ಬೈರಾಗಿ ಜನಾಂಗಕ್ಕೆ ಸೇರಿದವರು ಆದ್ರೆ,  ಬುಡ ಕಟ್ಟು  ಜಂಗಮ‌ ಜಾತಿಗೆ ಸೇರಿದವರು ಎಂದು ನಕಲಿ ಜಾತಿ ಪ್ರಮಾಣ ಪತ್ರ ನಕಲಿ ಪ್ರಮಾಣ ಪತ್ರ ಸಲ್ಲಿಸಿ ಎಸ್ ಸಿ ಮೀಸಲಾತಿ ದುರ್ಬಳಕೆ ಮಾಡುತ್ತಾರೆ.

2013 ರಲ್ಲಿ ಮುಳಬಾಗಿಲು ಕ್ಷೇತ್ರದಲ್ಲಿ ಮೀಸಲಾತಿ ದುರುಪಯೋಗ ಪಡಿಸಿಕೊಂಡಿದ್ದು ಅಲ್ಲದೆ ದಲಿತರನ್ನು  ಲೇಕರ್ ಶೂಗೆ ಹೋಲಿಸಿದ್ದರು.  ಕೊತ್ತೂರು ಮಂಜುನಾಥ್ ಗೆ ಮಾನ ಮರ್ಯಾದೆ ಇದ್ದರೆ,  ತಕ್ಷಣ ರಾಜೀನಾಮೆ ಕೊಡಬೇಕು , ರಾಜೀನಾಮೆ ಕೊಟ್ಟು ಮತ್ತೆ ಚುನಾವಣೆಗೆ ಬನ್ನಿ ಎಂದು ಸವಾಲ್ ಕರ್ನಾಟಕ sc st ಸಂಘಟನೆಗಳ ಮಹಾ ಒಕ್ಕೂಟದಿಂದ ಸವಾಲ್ .! ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು.  ಹೈಕೋರ್ಟ್ ಸಹ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸಿದೆ .

ಹಾಗಾಗಿ ಸಿಎಂ ಸಿದ್ದರಾಮಯ್ಯ & ಗೃಹ ಸಚಿವ ಪರಮೇಶ್ವರ್ ಕ್ರಮ ಕೈಗೊಳ್ಳಬೇಕು ಮುಂದಿನ ಚುನಾವಣೆಯಲ್ಲಿ ಕೊತ್ತೂರು ಮಂಜುನಾಥ್ ಗೆ sc st  ಬೆಂಬಲ ನೀಡಲ್ಲ . ಸಂವಿಧಾನದ ಹೆಸರೇಳಿ sc st ಮೀಸಲಾತಿಯನ್ನು ಕಸಿದುಕೊಂಡಿದ್ದಾರೆ . ಹಾಗಾಗಿ ಶಾಸಕ ಕೊತ್ತೂರು ಮಂಜುನಾಥ್ ಗೆ ಶಾಸಕ ಸ್ಥಾನ ರದ್ದು ಮಾಡಬೇಕೆಂದು ಆಗ್ರಹ ದಲಿತ ಮುಖಂಡರಾದ ಹೂವಳ್ಳಿ ಪ್ರಕಾಶ್ , ದಲಿತ  ನಾರಾಯಣಸ್ವಾಮಿ ಇತರ ಮುಖಂಡರು ಕೋಲಾರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆಗ್ರಹ.

Comments (0)

Your email address will not be published. Required fields are marked *

Back to top button