Tuesday, June 24, 2025
27.5 C
Bengaluru
Google search engine
LIVE
ಮನೆ#Exclusive NewsTop Newsಕಿಡ್ನಾಪ್ ಆಪರೇಷನ್​ ಸಕ್ಸಸ್.. ಬಟ್ ಪ್ಲಾನ್ ಫೈಲ್ಯೂರ್​..! ಮಾಜಿ ಲವರ್​​ಗೆ ಖೆಡ್ಡ ತೋಡಿದ ಮಾಡ್ರನ್​ ‘ಮೋಹಿನಿ’...

ಕಿಡ್ನಾಪ್ ಆಪರೇಷನ್​ ಸಕ್ಸಸ್.. ಬಟ್ ಪ್ಲಾನ್ ಫೈಲ್ಯೂರ್​..! ಮಾಜಿ ಲವರ್​​ಗೆ ಖೆಡ್ಡ ತೋಡಿದ ಮಾಡ್ರನ್​ ‘ಮೋಹಿನಿ’ ಅಂದರ್​​..!

ಹೊಸ ಭಾಯ್​ ಫ್ರೆಂಡ್ ಜೊತೆ ಸೇರಿ ಹಳೆ ಲವರ್​​ಗೆ ಖೆಡ್ಡ..!?

ಬೆಂಗಳೂರು : ಹೊಸ ಭಾಯ್​ ಫ್ರೆಂಡ್ ಜೊತೆ ಸೇರಿ ಹಳೆ ಲವರ್​​ಗೆ ಖೆಡ್ಡ ತೋಡಿದ ಮಾಯಂಗನೆ.. ಮಾಜಿ ಡವ್ ಕರೆದ್ಲು ಅಂತ ಹಾರಿಕೊಂಡು ಬಂದವ್ನಿಗೆ ಬಿಗ್​ ಶಾಕ್​ ಕೊಟ್ಟ ಮಾಡ್ರನ್ ಮೋಹಿನಿ.. ಪ್ರೀತಿಯನ್ನು ನಂಬಿ ಬಂದವನ ನಡಮುರಿದ ತೆಲಗು ಪಿಲ್ಲ.. ಮೋಹಿನಿ.. ಮೋನಿಕಾ ಗ್ಯಾಂಗ್​ ಟ್ರಾವಲ್​… ಆಂಧ್ರಪ್ರದೆಶ ಟು ಬೆಂಗಳೂರು ವಾಯಾ ಪಾವಗಡ. ಅಂದೊಂದಿತ್ತು ಕಾಲ ಮಾತು ಕೊಟ್ರೆ ಮಾತು.. ಕೊಟ್ಟ ಮಾತಿಗೆ ಪ್ರಾಣ ಹೋಗಲಿ ಮಾತು ತಪ್ಪೋಲ್ಲ ಅಂತಿದ್ರು.. ಇನ್ನು ಪ್ರೀತಿ ಪ್ರೇಮ ವಿಚಾರಕ್ಕೆ ಬಂದ್ರೆ.. ಒಮ್ಮೆ ಮನಸಾರೆ ನೀನ್ನು ನನ್ನವಳು ನಾನು ನಿನ್ನವನು ಅಂದ್ರೆ ಸಾಕಾಗಿತ್ತು, ಒಂದು ಜೀವಮಾನ ಕಳೆಯಲು.. ಆದಕ್ಕೆ ನಮ್ಮಕಣ್ಣ ಮುಂದೆ ಸಾಲು ಸಾಲು ಸತ್ಯ ಕತೆಗಳಿವೆ, ಅವುಗಳನ್ನೇನು ನಾವು ಮತ್ತೋಮ್ಮೆ ಹೆಸರಿಸಿ ಹೇಳುವ ಅಗತ್ಯವಿಲ್ಲ.. ಆದ್ರೆ ಇಂತಹ ಎಲ್ಲಾ ಸತ್ಯ ಕತೆಗಳಿಗೆ ಕಳಂಕವೆಂಬಂತೆ ಇತ್ತಚಿನಿ ದಿನಗಳಲ್ಲಿ ನಮ್ಮ ಕಣ್ಣ ಮುಂದೆ ಅನೆಕ ಘಟನೆಗಳು ನಡಯುತ್ತಲೇ ಇವೆ.. ಇನ್ನು ಪ್ರೀತಿಸಿ ಅವನಿಂದ ದೂರಾದವಳು ಮತ್ತೋಮ್ಮೆ ಆವನ ಸನಿಹವಾಗುವ ನಾಟಕವಾಡಿ ಮಾಡಬಾರದ ಕೃತ್ಯ ಮಾಡಿ ಪೊಲೀಸರ ಅತಿಥಿಯಾಗಿದ್ದಾಳೆ..

ಸದ್ಯ ಪ್ರೀತಿಸಿ ದೂರಾಗಿರೋರು ಹಳೇ ಲವರ್ ಫೋನ್‌ ಮಾಡಿ ಸಿಕ್ತೀನಿ ಅಂದ್ರೆ.. ಒಂದಲ್ಲ ಎರಡು ಬಾರಿ ಯೋಚನೆ ಮಾಡಬೇಕಾದ ಕಾಲ ಬಂದಿದೆ.. ಜೊತೆಗಿರ್ತಿನಿ ಅಂತ ಹೇಳಿ ಕೈಕೊಟ್ಟಿದ್ದವಳು ಮತ್ತೆ ಹಳೇ ಲವರ್ ಮೀಟ್ ಮಾಡುವ ನಾಟಕವಾಡಿ.. ಹಳೆ ಲವರ್ ಕರ್ದ್ಲು ಅಂತ ನೊಡಲು ಒಡೋಡೊಬಂದವನ ಲಾಕ್ ಮಾಡ್ಸಿದ್ದ ತೆಲಗು ಪಿಲ್ಲ.. ಹೊಸ ಪ್ರೀಯಕರನ ಜೊತೆ ಸೇರಿ ಮಾಜಿ ಪ್ರೀಯಕರನ ಮಾಡಿದ್ದಳು ಕಿಡ್ನಾಪ್… ಮಾಜಿ ಪ್ರಿಯಕರನನ್ನ ಟ್ರ್ಯಾಪ್ ಮಾಡಿ ಸುಲಿಗೆಗೆ ಮುಂದಾಗಿದ್ದ ಗ್ಯಾಂಗ್ ಸದ್ಯ ಅಂದರ್ ಆಗಿದ್ದಾರೆ..ಹಳೇ ಸ್ನೇಹಿತನನ್ನ ಭೇಟಿಯಾಗಲು ಕರೆಸಿಕೊಂಡು ಅಪಹರಿಸಿ ಸುಲಿಗೆಗೈದ ಆರೋಪದಲ್ಲಿ ಯುವತಿ ಸೇರಿ ಆಂಧ್ರದ ನೆಲ್ಲೂರು ಮೂಲದ 7 ಜನರನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ನೆಲ್ಲೂರು ಮೂಲದ ಉದ್ಯಮಿ, ಮೆಡಕಲ್ ಫಾರ್ಮಸಿ ಇಟ್ಟುಕೊಂಡಿರುವ, ಪೋತುಲ ಶಿವ ಎಂಬಾತನನ್ನ ಅಪಹರಿಸಿ ಸುಲಿಗೆಗೈದಿದ್ದ ಆರೋಪದಡಿ ಮೋನಿಕಾ, ಹರೀಶ್, ಹರಿಕೃಷ್ಣ, ರಾಜ್‍ಕುಮಾರ್, ನರೇಶ್, ಅಂಜನೀಲ್, ನರಸಿಂಹ ಎಂಬುವವರನ್ನ ಬಂಧಿಸಲಾಗಿದೆ. ಶಿವು ಎಂಬ ಹುಡುಗನನ್ನು ನಂಬಿಸಿ ಪ್ರೀತಿಸುವ ನಾಟಕವಾಡಿದ್ದ ಕಿಡ್ನಾಪ್ ಆ್ಯಂಡ್ ರಾಬರಿ ಪ್ರಕರಣದ ಆರೋಪಿ ಮೋನಿಕಾ.. ಸುಮಾರು ಒಂದು ವರ್ಷಗಳ ಕಾಲ ಸುತ್ತಾಡಿ ಕೈ ಕೊಟ್ಟವಳಿಗೆ ಬರಬಾರದ ಕಾಲ, ಅರ್ಥಾತ್ ಬರ್ಬಾದ್ ಕಾಲ ಬಂದೇ ಬಿಟ್ಟಿತ್ತು.. ಲವ್ ಯು ಆಂತ ಹೇಳಿ ಜೊತೆಯಲ್ಲಿ ಸುತ್ತಾಡಿದ್ದವಳಿಗೆ ಒಂದೇ ವರ್ಷಕ್ಕೆ ಬೋರ್ ಆಗಿತ್ತು ಶಿವು ಸಹವಾಸ.. ಇನ್ನು ಶಿವು-ಮೋನಿಕಾ ಜೋಡಿ ಅಂದುಕೊಂಡೆಂತೆ ನಡೆಯಲಿಲ್ಲ ಆವರ ಪ್ರೀತಿ ಪ್ರಯಣದ ಜೀವನ..

ಶಿವುಗೆ ಅಂದು ಬಾಯ್ ಹೇಳಿದ್ದ ಮೋನಿಕಾ.. ‘ಮೋಹಿನಿ’ಯಂತೆ ಮತ್ತೆ ಎಂಟ್ರಿ.!

ಮಾಯಾ ಲೆಡಿ ಮೋನಿಕಾ ಹಳೆ ಲವರ್ ಶಿವುಗೆ ಟಾಟಾ ಬಾಯ್ ಬಾಯ್ .. ಗುಡ್ ಬಾಯ್ ಅಂದವೇಳೆ ನಯಾ ದುನಿಯಾ ಶುರು ಮಾಡಿದ್ದಳು.. ಯುಟ್ಯೂಬರ್ ಒಬ್ಬನ ಜೊತೆ ಸೇರಿ ಹೊಸ ಜೀವನವನ್ನೇನೋ ಶುರು ಮಾಡಿದ್ಲು.. ಈ ಪ್ರಕರಣದ ಮತ್ತೋಬ್ಬ ಆರೋಪಿ ಅಂಜನೀಲ್ ಜೊತೆ ಸೇರಿ ಹ್ಯಾಂಗೋ ಲೈಫ್ ಚಲ್ತಾಹೇ ಅಂತ ದಿನ ದುಡತ್ತಿದ್ಲು. ಆದ್ರೆ ನಸೀಬ್ ಕೆಟ್ಟಿತ್ತು, ಕೆಟ್ಟ ಕಾಲ ಬಂದು ಬಾಗಿಲು ಬಡಿದಿತ್ತು.. ಮೋನಿಕಾಗೆ ಹಣಕಾಸಿಗೆ ಬರಗಾಲ ಉಂಟಾಗಿತ್ತು..

ಇತ್ತ ಹಳೆ ಲವರ್ ಉದ್ಯಮಿ ಆಗಿದ್ದ ಒಂದಷ್ಟು ಹಣ ಕಾಸು ಸಂಪಾದನೆ ಮಾಡ್ತಿದ್ದ.. ಹ್ಯಾಂಗೋ ಮೋನಿಕಾಳ ಲೈಫ್ ಸಹ ಸರಾಗವಾಗಿ ಸಾಗ್ತಿದ್ದು,, ಆದ್ರ ಈ ನಡುವೆ ಶಿವು-ಮೋನಿಕಾ ನಡುವಿನ ಪ್ರೇಮದಲ್ಲಿ ಉಂಟಾದ ಬಿರುಕು… ಯುಟ್ಯೂಬರ್ ಅಂಜನೀಲ್ ಸೇರಿದಂತೆ ಒಟ್ಟು 7 ಜನರು ಸದ್ಯ ಕಂಬಿ ಎಣಿಸುವಂತಾಗಿದೆ.. ಒಂದು ಲವ್ ಬ್ರೇಕ್ ಅಪ್ ಏಳು ಜನರು ಅಂದರ್ ಆಗಲು ಪ್ರಮುಖ ಕಾರಣಿ ಭೂತ ಅಂಶವಾಗಿದೆ..

ಶಿವು ಜೊತೆ ಬ್ರೇಕ್ ಮಾಡಿಕೊಂಡಿದ್ದ ಮೋನಿಕಾ ಕಳೆದೊಂದು ವರ್ಷದಿಂದ ಯುಟ್ಯೂಬರ್ ಅಂಜನೀಲ್ ಜೊತೆ ಅರಾಮಾಗಿದ್ದವಳಿಗೆ ಹಠಾತ್ ಹಣಕಾಸಿನ ಸಮಸ್ಯೆ ಎದುರಾಗಿತ್ತು. ಈ ಬಗ್ಗೆ ತನ್ನ ಹೊಸ ಪ್ರಯಕೆರ ಅಂಜೀನಿಲ್ ಬಳಿ ಹೇಳಿಕೊಂಡಿದ್ದ ಆರೋಪಿ ಮೋನಿಕಾ.. ಹೇಳಿ ಕೇಳಿ ಯುಟ್ಯೂಬರ್ ಆಗಿದ್ದ ಅಂಜಿನೀಲ್ ಆದಾಯವು ಅಷ್ಟಕ್ಕಷ್ಟೇ ಇರುತ್ತದೆ.. ಯಾವಾಗ ಅಂಜಿನೀಲ್ ಹಣಕಾಸಿನ ವಿಚಾರದಲ್ಲಿ ಕೈ ಎತ್ತಿದ್ನೋ… ಆಗ ಮಯಾಂಗನೆ ಮನಸ್ಸಿ ಪಟಲದಲ್ಲಿ ಮಾಸಿದೆ ಎಂದು ಅಂದುಕೊಂಡು ನೆನಪಿನಲ್ಲೇ ಇಟ್ಟುಕೊಂಡಿದ್ದ, ಮಾಜಿ ಲವರ್ ಶಿವು ನೆನಪು ಧಿಡೀರ್ ಮೂಡಿ ಬಂದಿತ್ತು..

ಆಗ ತಡಮಾಡದೆ ನಯಾ ದುನಿಯಾದಲ್ಲಿ ಜೊತೆಗಿದ್ದ ಅಂಜನೀಲ್​​ಗೆ ಮಾಜಿ ಲವರ್ ಮಹಿಮೆ ಬಗ್ಗೆ ವಿವರಿಸಿದ್ದಳು.. ಇಷ್ಟೇ ಸಾಕಾಗಿತ್ತು ಅವನ ಬಳಿಯೂ ಹಣವಿರ್ಲಿಲ್ಲ.. ಹ್ಯಾಗಿದ್ರು ಲವರ್ ಕೊಟ್ಟ ಸುಳಿವು ಬದುಕು ಬದುಲಿಸಬಹುದೆಂದು ಯೋಚಿಸಿದವನೇ.. ಗೆಳತಿ ಕೊಟ್ಟ ಸಲಹೆಗೆ ಮಸ್ತ್ ಖುಷಿಯಾದ ಅಂಜಿನೀಲ್ ತಡಮಾಡದೆ, ಕೂಡಲೇ ತನ್ನ ಕ್ರಿಮಿನಲ್ ಗ್ಯಾಂಗ್​ ಅವನ್ನು ಫೋನ್​ ಕಾಂಟ್ಯಾಕ್ಟ್​ಗೆ ತೆಗೆದುಕೊಂಡಿದ್ದ..

ಆರೋಪಿ ಮೋನಿಕಾ ಜೊತೆ ಕೂಡಿಕೊಂಡಿದ್ದ ಅಂಜನೀಲ್, ಬೆಂಗಳೂರಿನಲ್ಲಿದ್ದ, ತನ್ನ ಗೆಳೆಯ ಹೇಳಿ ಕೇಳಿ ಕ್ರಿಮಿನಲ್ ಬ್ಯಾಗ್ರೌಂಡ್ ಉಳ್ಳ ಈ ಪ್ರಕರಣ ಆರೋಪಿ ಹರೀಶ್​ಗೆ ಕಾಲ್ ಮಾಡಿದ್ದ, ತಾನು ತನ್ನ ಗೆಳಿತಿ ಸೇರಿ ಆಕೆಯ ಮಾಜಿ ಬಾಯ್ ಫ್ರೇಂಡ್ ಶಿವು ಅನ್ನೋನ ಬಳಿ, ಹಣ ಸುಲಿಗೆಗೆ ಮಾಡಿದ್ದ ಫ್ಲಾನ್ ವಿವರಿಸಿದ್ದ.. ಈ ಆರೋಪಿ ಹರೀಶ್​ ಗೂ ಅಷ್ಟೇ ಸಾಕಾಗಿತ್ತು.. ಹಿಂದೆ ಮುಂದೆ ನೋಡದೆ ಕಿಡ್ನಾಪ್ ಮಾಡಿ ಸುಲಿಗೆ ಮಾಡಲು ಎಸ್​ ಅಮದೇ ಬಿಟ್ಟಿದ್ದ..

ಯಾವಾಗ ಮಾಜಿ ಲವರ್​ ಶಿವುಗೆ ನವೆಂಬರ್ 17ರಂದು ಶಿವುಗೆ ಕರೆ ಮಾಡಿದ್ದ ಆರೋಪಿ ಮೋನಿಕಾ, ನಿನ್ನ ಮೀಟ್ ಮಾಡಬೇಕು… ನಿನ್ನ ನೊಡಿ ವರ್ಷವಾಯ್ತು ಮಾತಾಡೋದು ಬಹಳ ಇದೆ.. ನೀನು ಪೆನಾಗೊಂಡ ಬಳಿಗೆ ಬಾ ಎಂದು ಕರೆದಿದ್ದ ಮೋನಿಕಾ.. ಯಾವಾಗ ಆರೋಪಿ ಮೋನಿಕಾ ಬಾ ಶಿವು ನೀನು ನನ್ನ ಪ್ರಾಣ ಅಂದಳೂ.. ಇತ್ತ ವರ್ಷದಿಂದ ಪ್ರಿಯತಮೆಯ ಕಾಣದಂತೆ ಕಂಗಾಲಾಗಿದ್ದವನು.. ಓ ಎಸ್ ಎಂದು ಎದ್ನೋ ಬಿದ್ನೋ ಅಂತ ಓಡೋಡಿ ಬಂದಿದ್ದ.. ಮೈ ಮೇಲೆ ಒಂದಷ್ಟು ಚಿನ್ನ ಹಾಕಿಕೊಂಡು ಬಂದೇ ಬಿಟ್ಟಿದ್ದ..

ಇನ್ನು ಉಂಡು ಹೋದಕೊಂಡುಹೋದ ಅನ್ನೋ ಗಾದೆ ಮಾತಿನಂತೆ ಆರೋಪಿಗಳು.. ಮೊದ್ಲು ಪೆನಗೊಂಡಾ ಬಳಿ ಅಂದ್ದಿದ್ಳು ಆದ್ರೆ.. ಶಿವು ಮೈಮೇಲೆ ಹಲ್ಲೆ, ಆತನ ಬಳಿ ಇದ್ದ 4.20 ಲಕ್ಷ ಮೌಲ್ಯದ 60 ಗ್ರಾಂ. ಚಿನ್ನಾಭರಣ ಧರಿಸಿ ಬಂದಿದ್ದ.. ಆ ವೆಳೆಗಾಗಲೇ ಆರೋಪಿಗಳಾದ ಹರೀಶ್, ಹರಿಕೃಷ್ಣ, ನರೇಶ್, ರಾಜ್ ಕುಮಾರ್, ನರಸಿಂಹ, ಅಂಜನೀಲ್ ಪ್ಲಾನ್ ಅರ್ಧ ಸಕಸ್ಸ್ ಆಗಿದೆ ಅನ್ನೋದು ಗೊತ್ತಾಗಿತ್ತು..

ಮತ್ತಷ್ಟು ಸೇಫ್ ಕಿಡ್ನಾಪ್ ಮಾಡುವ ಯೋಜನೆ ಹಾಕಿಕೊಂಡ ಖದೀಮರು ಆಂಧ್ರದಲ್ಲಿ ಕಿಡ್ನಾಪ್ ಮಾಡಿದ್ರೆ ಒಂದು ವೇಳೆ ಲಾಕ್ ಆದ್ರೆ ಕಷ್ಟ ಅಂತ.. ಕೊನೆಗಳಿಗೆಯಲ್ಲಿ ಪೆನಾಗೊಂಡ ಬದಲು ಪಾವಗಡಕ್ಕೆ ಮೀಟಿಂಗ್ ಜಾಗ ಶಿಫ್ಟ್ ಆಗಿತ್ತು.. ಇನ್ನು ಒಂದು ವರ್ಷ ಕಾಣದ ಪ್ರೇಯಸಿ.. ಪೆನಗೊಂಡಾ ಆದ್ರೆ ಏನ್ ಪಾವಗಡ ಆದ್ರೆ ಏನ್ ನೋಡಲೇಬೇಕು ಅನ್ನೋ ಹಠಕ್ಕೆ ಬಿದ್ದವನು ಮಳ್ಳಿ ಮೋನಿಕಾ ಕೊನೆ ಗಳಿಗೆ ಮೀಟಿಂಗ್ ಸ್ಪಾಟ್ ಶಿಫ್ಟ್​ಗೂ ಓಕೆ ಅಂದೇ ಬಿಟ್ಟಿದ್ದ..

ಶಿವನ ಕಾತುರವನ್ನು ಕರೆಕ್ಟ್ ಆಗಿ ಕ್ಯಾಚ್ ಮಾಡಿಕೊಂಡಿದ್ದ ಖದೀಮರ್.. ಕುರಿ ತಾನೇಗೆ ಬಂದು ಹಳ್ಳಕ್ಕೆ ಬೀಳ್ತಿದೆ ಅಂತ ಕನ್ಫಾರ್ಮ್ ಮಾಡಿಕೋಡಿದ್ರು.. ಇನ್ನು ಆರೋಪಿಗಳು ಪೆನಾಗೊಂಡಕ್ಕೆ ಶಿವು ಕಾರ್ ತರ್ನಾನೆ ಅಂತ ಅಂದುಕೊಂಡಿದ್ರು.. ಆದ್ರೆ ಯಾವಾಗ ಅತ ಬಸ್ಸಿನಲ್ಲಿ ಬಂದ್ನೋ ಕಿಡ್ನಾಪ್​ ಫ್ಲಾನ್ ಎ ಕೈ ಬಿಟ್ಟು ಬಿ ವರ್ಕೌಟ್ ಮಾಡಿದ್ರು.. ಅದು ಕೂಡ ಪಾವಗಾಡದಲ್ಲಿ ಕಿಡ್ನಾಪ್ ಮಾಡಿವ ಯೋಜನೆ ಅದು ಸಕ್ಸಸ್ ಆಗಿತ್ತು..

ಆಂಧ್ರಧ ನೆಲ್ಲೂರಿನ ಮೆಡಿಕಲ್ ಶಾಪ್ ನಡೆಸುತ್ತಿದ್ದ ಶಿವು, ಹಿಂದೆ ಮುಂದೆ ಯೋಚನೆ ಮಾಡದೆ ಮನಸ್ಸಿನಲ್ಲಿ ಮೋನಿಕಾಳ ನೆನೆಸಿಕೊಳ್ಳುತ್ತಾ ಪೆನಾಗೊಂಡಾ ಟು ಪಾವಗಡ ಬಸ್​ ಹತ್ತೇ ಬಿಟ್ಟಿದ್ದ.. ಅಷ್ಟು ಕುರುಡನಾಗಿ ಮೋನಿಕಾಳನ್ನು ನಂಬಲು ಶಿವು ದಡ್ಡನೇನಲ್ಲ ಆದ್ರೆ ಇಲ್ಲೇ ಒಂದು ಟ್ವಸ್ಟ್​ ಇರೋದು, ಮಾಯಾ ಲೆಡಿ ಆರೋಪಿ ಮೋನಿಕಾ ಶಿವುಗೆ ದೂರದ ಸಂಬಂಧಿ ಜೊತೆಗೆ ಮಾಜಿ ಲವ್ ಕೂಡ ಆಗಿದ್ದಳು.. ಆದ್ರಿಂದ ಕಣ್ಣು ಮುಚ್ಚಿಕೊಂಡು ಕರೆದಕಡೆಗೆಲ್ಲ ಬಂದೇ ಬಿಟ್ಟದ್ದ ಶಿವು..

ಪ್ರೇಯಸಿಯ ಕರೆಗೆ ಓಗೊಟ್ಟು ಆಂಧ್ರದಪ್ರದೇಶ್ದ ನಲ್ಲೂರು ಅಲ್ಲಿಂದ ಪೆನಾಗೊಂಡ ಬಳಿಕ ಕರ್ನಾಟಕದ ಪಾವಗಡಕ್ಕೆ ಬಂದೇ ಬಿಟ್ಟಿದ್ದ.. ಅಷ್ಟರಲ್ಲಾಗಲೇ.. ಶಿವು ಪಾಲಿಗೆ ಮೋಹೀನಿ ರೂಪದಲ್ಲಿ ಮೋನಿಕಾ ಕಾಯುತ್ತಿದ್ದಳು.. ಯಾವಾಗ ಅಂದುಕೊಂಡಂತೆ ಮಿಕ ಬಂದು ಬಲೆಗೆ ಬಿತ್ತೋ.. ಕಿಡ್ನಾಪ್ ಗ್ಯಾಂಗ್ ಅಲರ್ಟ್ ಆಗಿತ್ತು.. ಇನ್ನು ವರ್ಷದ ಬಳಿಕ ಬಂದ ಬಾಯ್ ಫ್ರೆಂಡ್ ಕಂಡು ಮೋನಿಕಾ ಸಂತಸಪಟ್ಟಿದ್ದಳು, ನಕ್ಕಿದ್ದಳು ಪುಸಲಾಯಿಸಿದ್ದಳ್ಳು.. ಇನ್ನು ಇದು ವರ್ಷದ ಬಳಿಕ ಮೊದಲ ಭೇಟಿ ಅಲ್ವಾ ಅದಕ್ಕಾಗಿ ಈ ಹಳೆ ಜೋಡಿ ಹೊಸ ಭೇಟಿ ಹಿನ್ನಲೇ ಹಿನ್ನಲೆ ಪಾಗಡದ ಬಿದಿಯಲ್ಲಿ ಹಾಗೇ ಇಬ್ರು ಒಬ್ಬರಿಗೊಬ್ಬರು ಕೈ ಹಿಡಿದು ಜೋಡಿಯ ಸವಾರಿ ಸಾಗಿತ್ತು..

ಇತ್ತ ಫ್ಲಾನ್ ಮಾಡಿ ಚಾತಕ ಪಕ್ಷಿಗಳಂತೆ ತೆಲಗು ಪಿಲ್ಲ ಕೊಟ್ಟಿದ್ದ, ಸುಪಾರಿ ಕಿಡ್ನಾಪ್ ಕೃತ್ಯ ಎಸಗಲು ಸಂಚು ರೋಪಿಸಿದ್ದ ಕಿಲಾಡಿಗಳು ಎಚ್ಚರಗೊಂಡಿದ್ರು.. ಅವರು ಅಂದುಕೊಂಡಂತೆ ಕೊನೆಗಳಿಗೆಯಲ್ಲಿ ಆಂಧ್ರಪ್ರದೇಶದ ಪೆನಾಗೊಂಡ ಬದಲು ಪಾವಗಡಕ್ಕೆ ಮೀಟಿಂಗ್ ಜಾಗ ಕೂಡ ಶಿಫ್ಟ್ ಆಗಿತ್ತು.. ಜೊತೆಗೆ ಶಿವು ಪಾವಗಡಕ್ಕೆ ಚಿನ್ನಾಭರಣ ಹಾಕಿಕೊಂಡು ಬಸ್ ನಲ್ಲಿ ಬಂದಿದ್ದ ಮೋನಿಕಾ ಪ್ರೀಯಾ ಶಿವು..

ಇನ್ನು ಯಾವಾಗ ಇಬ್ಬರು ಪಾವಗಡದ ಬಿದಿಗಳಲ್ಲಿ ಕೈ ಕೈ ಹಿಡಿದು ಸುತ್ತಾಡುವಾಗ, ಧೀಡೀರ್ ಎಂಟ್ರಿ ಕೊಟ್ಟಿತ್ತು ಆರೋಪಿಗಳ ಕಾರ್.. ಇನ್ನು ಕಾರ್​​ನಲ್ಲಿ ಬಂದ ಆರೋಪಿಗಳ ಸುನಾಯಾಸವಾಗಿ ಶಿವನನ್ನು ಕಿಡ್ನಾಪ್ ಮಾಡಿಯೇ ಬಿಟ್ಟಿದ್ರು..

ಮಾಜಿ ಗೆಳತಿ ಮಾತು ನಂಬಿ ಬಂದವನು ಕಿಡ್ನಾಪ್ ಆಗಿದ್ದ, ಮೋನಿಕಾ ಆ್ಯಂಡ್ ಗ್ಯಾಂಗ್ ತಾವು ಅಂದುಕೊಂಡಂತೆ ಆಪರೇಷನ್ ಸಕ್ಸಸ್ ಆಗಿದ್ರು.. ಶಿವುನನ್ನುಪಾವಗಡದ ಮನೆಯೊಂದರಲ್ಲಿ ಕೂಡಿಹಾಕಿ ಹಲ್ಲೆ ಮಾಡಿದ್ರು.. ಅಷ್ಟಕ್ಕೇ ಸುಮ್ಮನಾಗದ ಈ ಕಿಡ್ನಾಪ್ ಗ್ಯಾಂಗ್ ಶಿವು ಬಳಿ ಇದ್ದ 4.20 ಲಕ್ಷ ಮೌಲ್ಯದ 60 ಗ್ರಾಂ. ಚಿನ್ನಾಭರಣವನ್ನು ಒಂದಷ್ಟು ನಗದನ್ನು ಮೊದಲು ಕಿತ್ತುಕೊಂಡಿದ್ರು..

ಬಂಗಾರು ನಿನ್ನು ಚೂಡಾಲಿ.. ಚಾಲಾ ರೋಜುಲೈಂದಿ ನಿನ್ನು ಚೂಸಿ.. ಐ ಮಿಸ್​.. ಐ ಲವ್​ ಯು…

 

 

ಬಂಗಾರು ನಿನ್ನು ಚೂಡಾಲಿ.. ಚಾಲಾ ರೋಜುಲೈಂದಿ ನಿನ್ನು ಚೂಸಿ.. ಐ ಮಿಸ್​.. ಐ ಲವ್​ ಯು ಅಂತ ಕರೆಸಿದವಳು.. ಪಾವಗಡದಲ್ಲಿ ಶಿವು ಕಿಡ್ನಾಪ್ ಆಗುವವರೆಗೂ ಕೈ ಕೈ ಹಿಡಿದುಕೊಂಡಿದ್ದವಳು.. ಅಪಹರಣ.. ಧರೋಡೆ.. ಹಲ್ಲೆ.. ಸುಲಿಗೆ ಮಾಡ್ತಿದ್ರು ಸೈಲೆಂಟ್ ಆಗಿದ್ಲು ಮುಗ್ದ ಶಿವನ ಸುಂದ್ರಿ ಮೋನಿಕಾ.. ಮನೆಯಲ್ಲಿ ಕೂಡಿ ಹಾಕಿ ಹಲ್ಲೆ ಮಾಡ್ತಿದ್ರು.. ತನಗೇನೂ ಅರಿಯದಂತೆ ಮೌನವಾಗಿದ್ದ ಆರೋಪಿತೆ ಮೋನಿಕಾ..

ಹರಕೆಯ ಕುರಿಯನ್ನು ಆರೋಪಿಗಳ ಕೈಗೊಪ್ಪಿಸಿದ ಮಾಯಾ ಲೆಡಿ ಮೋನಿಕಾ ಅಲ್ಲಿಂದ ಹೊರಟಿದ್ದಳು.. ಇತ್ತ ಆರೋಪಿಗಳು ತಮ್ಮ ಪ್ಲಾನ್ ವರ್ಕೌಟ್ ಮಾಡಲು ಶುರ ಮಾಡಿದ್ರು.. ಶಿವು ಬಳಿ ಇದ್ದ ಚಿನ್ನ ಕರಗಿಸಿ ನುಂಗಿದ್ರು.. ಬಳಿಕ ಕಾಸಿಗೆ ಕೈ ಚಾಚಿ ಹಲ್ಲೆಗೆ ಮುಂದಾಗಿದ್ರು. ಅಪಹರಣಕ್ಕೋಳಗಾಗಿದ್ದ ಶಿವು ಬಳಿ ಮತ್ತೆ 10 ಲಕ್ಷ ರೂಪಾಯಿಗೆ ಡಿಮಾಂಡ್ ಮಾಡಿದ್ರು.. ಕೊಡದಿದ್ರೆ ಕೊಲೆ ಮಾಡೋದಾಗಿ ಜೀವ ಬೆದರಿಕೆ ಸಹ ಹಾಕಿದ್ರು..

3 ದಿನಗಳ ಕಾಲ ಆರೋಪಿಗಳು ಶಿವುನನ್ನು ಕೂಡಿ ಹಾಕಿಕೊಂಡು ಆತನ ಬಳಿಯಿದ್ದ ಚಿನ್ನದ ಸರ, ಬ್ರಾಸ್‌ಲೆಟ್ ಕಿತ್ತುಕೊಂಡು ಅದನ್ನು ಅಡವಿಟ್ಟು ಹಣ ಪಡೆದುಕೊಂಡಿದ್ರು.. ಬಳಿಕ 10 ಲಕ್ಷಕ್ಕೆ ಬೆಡಿಕೆ ಇಟ್ಟಿದ ಹಿನ್ನಲೆ ಶಿವು ಕೊನೆಗೆ 5 ಲಕ್ಷ ರೂ. ನೀಡಲು ಒಪ್ಪಿ, ಸ್ನೇಹಿತರಿಂದ ಅಕೌಂಟ್ ಗೆ ಹಣ ಹಾಕಿಸಿಕೊಂಡಿದ್ದ.. ಆದ್ರೆ ಆತನ ಬಳಿ ATM ಕಾರ್ಡ್ ಇಲ್ಲದಿದ್ರಿಂದ ಹಣ ಡ್ರಾಮಾಡಲು ಆರೋಪಿಗಳು ಪರದಾಡುತ್ತಿದ್ದರು..

ಆರೋಪಿಗಳ ಬೆದರಿಸಿದಾಗ ಸ್ನೇಹಿತರಿಗೆ ಕರೆ ಮಾಡಿದ್ದ ಶಿವ 5 ಲಕ್ಷ ರೂಗಳನ್ನ ತನ್ನ ಖಾತೆಗೆ ಹಾಕಿಸಿಕೊಂಡಿದ್ದ. ಆದರೆ ಹಣ ವಿತ್ ಡ್ರಾ ಮಾಡಲು ಅಗತ್ಯವಿರುವ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನ ಶಿವ ಮನೆಯಲ್ಲಿಟ್ಟು ಬಂದಿದ್ದ. ಆಗ ಒಂದು ಉಪಾಯ ಯೋಚನೆ ಮಾಡಿದ ಕಿಡ್ನಾಪರ್ಸ್​ ಶಿವನಿಂದಲೇ ಆತನ ಮನೆಯವರಿಗೆ ಕರೆ ಮಾಡಿಸಿದ್ರು.. ಆರೋಪಿಗಳು ಬೆಂಗಳೂರಿನ ಮೆಜೆಸ್ಟಿಕ್‌ಗೆ ಆತನ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನ ಕಳುಹಿಸಲು ಹೆಳಿದ್ರು..

ತಾನು ಕರ್ನಾಟಕದ ಬೆಂಗಳೂರಿನಲ್ಲಿದ್ದೇನೆಂದು ಶಿವು ಅವರ ಮನೆಯವರಿಗೆ ಕರೆ ಮಾಡಿದ್ದ.. ಬಳಿಕ ತಾನು ಕೆಲಸದ ನಿಮಿತ್ತ ಬೆಂಗಳೂರಿನಲ್ಲಿದ್ದೇನೆ ಹಾಗಾಗಿ ತುರ್ತಾಗಿ ATM ಕಾರ್ಡ್ ಬೆಕಾಗಿದೆ ಎಂದಿದ್ದ.. ಅಲ್ದೆ ಅಷ್ಟೇ ಬೇಗ ಎಟಿಎಂ ಕಾರ್ಡ್ ಅನ್ನು ಕೊರಿಯರ್ ಮಾಡಿಸಿಕೊಂಡಿದ್ದ.. ಇನ್ನು ಮನೆಯವರಿಗೆ ಕರೆ ಮಾಡಿದ್ದಾಗ ಯಾವುದೇ ವಿಚಾರ ಬಾಯಿ ಬಿಡಬಾರ್ದು ಹಾಗೊಂದು ವೇಳೆ ಬಾಯಿಬಿಟ್ರೆ.. ನೀನು ಇರೋಲ್ಲ ಅಂತ ಬೆದರಿಕೆ ಹಾಕಿದ್ರಂತೆ.. ಹಾಗಾಗಿ ಕಿಡ್ನಾಪರ್ಸ್ ಹೇಳಿದಂತೆ ಶಿವು ಕೆಳಿದ್ದ..

ಇನ್ನು ಆರೋಪಿಗಳು ಅಂದುಕೋಂಡಂತೆ ಅಂಧ್ರಪ್ರದೇಶದ ನಲ್ಲೂರಿನೀಂದ ಬೆಂಗಳೂರಿಗೆ ಕೊರಿಯರ್ ಬಂದು ತಲುಪಿತ್ತು.. ಬೆಂಗಳೂರಿನ ಮೆಜೆಸ್ಟಿಕ್ ವಿಳಾಸವೊಂದಕ್ಕೆ 4-5 ATM ಕಾರ್ಡ್ ಕೊರಿಯರ್ ಮಾಡಿಸಿಕೊಂಡಿದ್ದ ಆರೋಪಿಗಳು. ಇನ್ನು ಪ್ರಕರಣದ ಆರೋಪಿಗಳಾದ A 1 ಹರೀಶ್ ಗೆ ಬೆಂಗಳೂರು ಪರಿಚಯ ಇದ್ದಿದ್ರಿಂದ ಸಿಕ್ಕಿಬೀಳಲ್ಲ ಅಂತ ಮೆಜೆಸ್ಟಿಕ್ ಗೆ ಕೊರಿಯರ್ ಮಾಡಿಸಿಕೊಂಡಿದ್ದ..

ಬಳಿಕ ನವೆಂಬರ್ 20ರಂದು ಬೆಂಗಳೂರಿಗೆ ಕಾರಿನಲ್ಲಿ ಶಿವನ ಜೊತೆ ಬಂದಿದ್ದ ಹರೀಶ್ & ಹರಿಕೃಷ್ಣ ಎಟಿಎಂ ಕಾರ್ಡ್ ಕಲೆಕ್ಟ್ ಮಾಡಿಕೊಂಡಿದ್ರು.. ಅಲ್ಲಿಗೆ ಕಿಡ್ನಾಪರ್ಸ್​​ಗಳ ಫ್ಲಾನ್​ ಕಂಪ್ಲೀಟ್ ಪ್ಲಾನ್ ಪಕ್ಕಾ ಸಕ್ಸಸ್ ಅಂತ ಕಾರ್ ನೇರವಾಗಿ ಕೋರಮಂಗಲದಕಡೆ ತಿರುಗಿಸಿದ್ರು.. ಬೆಂಗಳೂರು ಟ್ರಾಫೀಕ್​ ಅನ್ನು ಲೆಕ್ಕಿಸದೆ.. ಶರವೇಗದಲ್ಲಿ ಬಂದಿದ್ರು.. ಅಂದೇ ಅಂದ್ರೆ ನವೆಂಬರ್ 21ರ ಸಂಜೆ 5 ಗಂಟೆ ಸುಮಾರಿಗೆ ಇಬ್ಬರು ಆರೋಪಿಗಳು ಮತ್ತು ಶಿವ ಕೋರಮಂಗಲದ ಎಟಿಎಂನಲ್ಲಿ ಹಣ ಕೂಡ ಡ್ರಾ ಮಾಡಿದ್ರು..

ಅಲ್ಲಿವರೆಗೆ ಸರಿಯಾಗಿಯೇ ಶುಕ್ರದೆಸೆಯಲ್ಲಿದ್ದ ಆರೋಪಿಗಳ ನಸೀಬ್.. ಧನ ಲಕ್ಷ್ಮೀ ಕೈಗೆ ಬರುತ್ತಿದಂತೆ ಶನಿ ಆರೋಪಿಗಳ ಹೆಗಲು ಹೇರಿತ್ತು.. ನಸೀಬ್ ಕೆಟ್ಟಿತ್ತು ಇತ್ತ ಟೈಂ ಖರಾಬ್ ಆಗಿತ್ತು.. ಹಣ ಅಂದ್ರೆ ಸಾಕು ಹೆಣ ಕೂಡ ಬಾಯಿ ಬಿಡುತ್ತೆ ಅಂತಾರೆ.. ಅಂದ್ಮೇಲೆ ಜೀವಂತವಾಗಿರುವ ಇವರು ಸುಮ್ನಿರ್ತಾರೆಯೇ.. ಅವರು ಮನಸ್ಸಿನಲ್ಲೂ ಊಹಿಸಿರದೆ ರೀತಿಯಲ್ಲಿ ಒಂದು ಘಟನೆ ನಡೆದೇ ಹೋಯ್ತು..

ಎಟಿಎಂ ಬಳಿ ಬೀದಿಯಲ್ಲೇ ಕಿಡ್ನಾಪ್​ ಕಾಸಿಗೆ ನಡೆದಿತ್ತು ಫೈಟ್.!

ಹಣ ವಿತ್ ಡ್ರಾ ಮಾಡಿಸಲು ಮೂವರು ಆರೋಪಿಗಳು ಶಿವನನ್ನು ಕೋರಮಂಗಲದ ಫೋರಂ ಮಾಲ್ ಜಂಕ್ಷನ್ ಬಳಿಯಿರುವ ಎಟಿಎಂ ಬಳಿ ಕರೆತಂದಿದ್ದರು. ಆ ಸಂದರ್ಭದಲ್ಲಿ ಹಣ ಹಂಚಿಕೊಳ್ಳುವ ವಿಚಾರದಲ್ಲಿ ಇಬ್ಬರು ಆರೋಪಿಗಳು ಪರಸ್ಪರ ಜಗಳವಾಡಲಾರಂಭಿಸಿದ್ದರು. ಇದೇ ಸಮಯದಲ್ಲಿ ಬುದ್ಧಿ ಉಪಯೊಗಿಸಿದ ಶಿವ ಜೋರಾಗಿ ಕಿರುಚಿಕೊಂಡಿದ್ರಿಂದ ಸ್ಥಳದಲ್ಲಿ ಹೆಚ್ಚು ಜನರು ಸೇರಿದ್ರು.. ಸಾಲದಕ್ಕೆ ಇದೇ ವೇಳೆ ಸಮೀಪದಲ್ಲಿ ಡ್ಯೂಟಿಯಲ್ಲಿದ್ದ PSI ಮಾದೇಶ್ ಸ್ಥಳಕ್ಕೆ ಬಂದು ವಿಚಾರಿಸಿದ್ರು..

ಅಲ್ಲಿಗೆ ಅಪಹರಣಕಾರರ ಕಿಡ್ನಾಪ್ ಸಕ್ಸಸ್ ಫ್ಲಾನ್ ಸಂಪೂರ್ಣ ತಳೆಕೆಳಗಾಗಿತ್ತು.. ಈ ವೇಳೆ ಶಿವ ಮಾತು ಕೇಳಿ ಅನುಮಾನ ಬಂದು ಮೂವರನ್ನ ಸ್ಟೇಷನ್ ಗೆ ಕರೆತಂದಿದ್ರು.. ಆರೋಪಿಗಳು & ಶಿವನ ವಿಚಾರಣೆ ಮಾಡಿದಾಗ ಕಿಡ್ನಾಪ್ ಮತ್ತು ಸುಲಿಗೆ ಕಥೆ ಬಯಲಿಗೆ ಬಂದಿತ್ತು.. ಈ ವಿಚಾರ ಕೇಳಿ ತಕ್ಷಣ FIR ದಾಖಲಿಸಿ ತನಿಖೆಗೆ ಸೂಚಿಸಿದ್ದ ಡಿಸಿಪಿ ಸಾರಾ ಫಾತೀಮಾ ಅವರು ಶಿವನಿಂದ ದೂರು ಪಡೆದು ಪಾವಗಡದಲ್ಲಿದ್ದ ಮೋನಿಕಾ ಸೇರಿದಂತೆ ಇನ್ನಿತರ ಆರೋಪಿಗಳನ್ನ ಕರೆತಂದು ವಿಚಾರಣೆಗೊಳಪಡಿಸಿದ್ರು..

ಇನ್ನು ವಿಚಾರಣೆ ವೇಳೆ ಮೋನಿಕಾ ಮತ್ತು ಆರೋಪಿಗಳು ಎಲ್ಲಾ ಕಥೆ ಬಿಚ್ಚಿಟ್ಟಿದ್ರು.. ಈ ಸಂಬಂಧ ಸದ್ಯ 7 ಜನರನ್ನ ಬಂಧಿಸಿ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿರೋ ಪೊಲೀಸರು.. ಆರೋಪಿ ಅಂಜನಿಲ್‌ ಆಂಧ್ರದಲ್ಲಿ ತನ್ನದೇ ಆದ Top-9 ಎಂಬ ಯ್ಯೂಟ್ಯೂಬ್ ಚಾನಲ್ ನಡೆಸ್ತಿದ್ದ, ಇದೇ ಸಂಸ್ಥೆಯಲ್ಲಿ ಮೋನಿಕಾ ಕೂಡ ಕೆಲಸ ಮಾಡ್ತಿದ್ಲು, ಇಬ್ಬರಿಗೂ ಗೆಳೆತನ ಇತ್ತು.. ಈ ವೇಳೆ‌ ಮೋನಿಕಾಗೆ ಹಣದ ಅವಶ್ಯಕತೆ ಇದ್ದಿದ್ರಿಂದ ಅಂಜನೀಲ್ ಬಳಿ ಹೇಳಿಕೊಂಡಿದ್ಲು ಜೊತೆಗೆ ಶಿವನ ಬಗ್ಗೆ ಹೇಳಿದ್ಲು…

ಇದ್ರಿಂದ ಅಂಜನೀಲ್ ತನ್ನ ಸ್ನೇಹಿತ‌ ಹರೀಶ್ ಜೊತೆಗೆ ಸೇರಿ ಈ ‘ಹನಿ’ ಪ್ಲಾನ್ ಮಾಡಿದ್ದ, ಮೊದಲೇ ಹರೀಶ್ ಕ್ರಿಮಿನಲ್ ಬ್ಯಾಕ್ ಗ್ರೌಂಡ್ ಇರೋ ವ್ಯಕ್ತಿ ಆಗಿದ್ದ
ಹೀಗಾಗಿ ತನ್ನ ಇತರ ಸ್ನೇಹಿತರ ಜೊತೆ ಸೇರಿ ಮೌನಿಕಳನ್ನ ಮುಂದೆಬಿಟ್ಟು ಶಿವ ಕಿಡ್ನಾಪ್ ಪ್ಲಾನ್ ಮಾಡಿದ್ದ, ಆದರೆ ಎಲ್ಲಾ ಅಂದುಕೊಂಡಂತೆ ನಡೆದು ಹಣ ಕೈಗೆ ಬರೋ ವೇಳೆ ಆರೋಪಿಗಳಿಗೆ ನಸೀಬು ಕೈ ಕೊಟ್ಟಿತ್ತು..

ಆರೋಪಿ ಯುವತಿ ಹಾಗೂ ಆಕೆಯ ಪ್ರಿಯಕರ ಅಂಜನಿಲ್ ಸೇರಿ ಶಿವನ ಅಪಹರಣದ ಸಂಚು ರೂಪಿಸಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ಓರ್ವ ಆರೋಪಿತನ ವಿರುದ್ಧ 15ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿರುವುದು ಸಹ ಗೊತ್ತಾಗಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ. ಇನ್ನು ತಾನೊಂದು ಬಗೆದರೆ ದೈವವೋಂದು ಬಗೆದ ಅನ್ನೋ ಹಾಗೆ, ಅಪರಾಧ ಮಾಡಿದ್ದವರು ಅದಕ್ಕೆ ತಕ್ಕ ಫಲವನ್ನು ಅನುಭವಿಸುತ್ತಿದ್ದಾರೆ..

ಇನ್ನು ಅಪಹರಣಕ್ಕೋಳಗಾಗಿದ್ದ ಶಿವು ಸಮಯ ಪ್ರಜ್ಞೆ ಹಾಗೂ ಸಕಾಲಕ್ಕೆ ಸ್ಥಳಕ್ಕೆ ಬಂದ ಕೋರಮಂಗಲ ಪೊಲೀಸರ ಸೂಕ್ತ ಕ್ರಮ ಜೊತೆಗೆ ಸ್ಥಳೀಯರ ಜಾಗೃತಾ ಭಾವದಿಂದ ನಡೆಯ ಬೆಕಾಗಿದ್ದ, ಅಪಹರಣದ ಪ್ರಕರಣದ ದುರಂತ ಅಂತ್ಯ ಸುಖಾಂತ್ಯವಾಗಿದೆ ಅಂದ್ರೆ ಖಂಡಿತ ತಪ್ಪಾಗಲಾರ್ದು.. ಇನ್ನು ಪ್ರಕರಣದ ತನಿಖೆಯನ್ನು ಮುಂದುವರಿಸಿರುವ ಪೊಲೀಸರು ಪ್ರಕರಣಕ್ಕೆ ತಾರ್ಕಿಕ ಅಂತ್ಯ ನೀಡುವ ಯತ್ನದಲ್ಲಿದ್ದಾರೆ..

ಉಪ್ಪು ತಿಂದವರು ನೀರು ಕುಡಿಯಲೇಬೇಕು.. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು.. ಆದ್ರೆ ಇವರ ವಿಚಾರದಲ್ಲಿ ಸ್ವಲ್ಪ ತುರ್ತಾಗಿ ಆಗಿದೆ ಅಷ್ಟೇ.. ಕ್ರೈಂ ಮಾಡಿ ಕಣ್ತಪ್ಪಿಸಬಹುದು ಅಂದ್ಕೋಂಡಿದ್ದವರು ಕೋರಮಂಗಲ ಪೊಲೀಸರ ಕೈಗೆ ತಗ್ಲಾಕೊಂಡು ಸೆರೆಮನೆ ಸೇರಿದ್ದಾರೆ.. ಆದೇನೇ ಇರ್ಲಿ ಹಣಬೇಕಂತು ಹನಿ ಪ್ಲಾನ್.. ಕಷ್ಟಯಿದೆ ಅಂತ ಕ್ರೈಂ ಮಾಡೋದು ಮಾತ್ರ ಉಚಿತವಲ್ಲ ಅದಕ್ಕೆ ಯಾರೇ ಆದ್ರೂ ಕೂಡ ಒಂದಲ್ಲ ಒಂದು ದಿನ.. ಒಂದಲ್ಲ ಒಂದು ರೂಪದಲ್ಲಿ ಬೆಲೆ ತೆತ್ತಲೇಬೇಕು ಅನ್ನೊದ್ರಲ್ಲಿ ಎರಡು ಮಾತಿಲ್ಲ..

ಲಕ್ಷ್ಮೀಪತಿ, ಕ್ರೈಂ ಬ್ಯೂರೋ ಫ್ರೀಡಂ ಟಿವಿ ಬೆಂಗಳೂರು

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments