Wednesday, June 25, 2025
26.3 C
Bengaluru
Google search engine
LIVE
ಮನೆ#Exclusive NewsTop Newsಸೂರ್ಯ- ಚಂದ್ರ ಒಟ್ಟಿಗೆ ಬಂದ್ರೆ ಸಮಸ್ಯೆ-ದರ್ಶನ್ ಬಗ್ಗೆ ಕಿಚ್ಚ ಹೇಳಿದ್ದಿಷ್ಟು

ಸೂರ್ಯ- ಚಂದ್ರ ಒಟ್ಟಿಗೆ ಬಂದ್ರೆ ಸಮಸ್ಯೆ-ದರ್ಶನ್ ಬಗ್ಗೆ ಕಿಚ್ಚ ಹೇಳಿದ್ದಿಷ್ಟು

ಇಂದು ಸ್ಯಾಂಡಲ್​ವುಡ್​ ನಟ ಕಿಚ್ಚ ಸುದೀಪ್​ ಸುದ್ದಿಗೋಷ್ಠಿ ಕರೆದಿದ್ದರು. ಮುಂದಿನ ತಿಂಗಳು ಬರುವ ಹುಟ್ಟುಹಬ್ಬದ ವಿಚಾರವಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದರು. ಈ ವೇಳೆ ರೇಣುಕಾಸ್ವಾಮಿ ಕೊಲೆ ಆರೋಪಿಯಾಗಿ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲು ಪಾಲಾಗಿರುವ ದರ್ಶನ್​ ​ಬಗ್ಗೆಯೂ ಮಾತನಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿಚ್ಚ ಸುದೀಪ್​, ನಾವು ಮಾತೇ ಆಡ್ತಿಲ್ಲ ಅಲ್ವಾ?. ನಾವಿಬ್ಬರು ಒಟ್ಟಿಗೆ ಸರಿ ಇಲ್ಲ. ಸೂರ್ಯ- ಚಂದ್ರ ಬೆಳಗ್ಗೆ-ರಾತ್ರಿ ಇದ್ರೆನೆ ಚೆಂದ. ಒಟ್ಟಿಗೆ ಬಂದ್ರೆ ಸಮಸ್ಯೆ. ಹಾಗಂತ ಸಮಾಜಕ್ಕೆ ಹೆದರಿ ಇರಲ್ಲ. ಮನಸ್ಸಿಗೆ ಬಂದ್ರೆ ನಾನು ಮಾಡ್ತೀನಿ ಎಂದು ಹೇಳಿದ್ದಾರೆ.

ಸುದೀಪ್ ಜೊತೆ ಸ್ನೇಹ ಇದ್ದಿದ್ರೆ ದರ್ಶನ್ ಗೆ ಈ ಸ್ಥಿತಿ ಬರ್ತಿರಲಿಲ್ಲ ಅನ್ನೋ ಮಾತಿದೆ? ನೋ ಅದು ತಪ್ಪು. ನಾನಿದ್ರೆ ಅನ್ನೋದು ದೊಡ್ಡ ಅಹಂ. ನಾನು ಅಷ್ಟು ದೊಡ್ಡವನಲ್ಲ. ರೇಣುಕಾಸ್ವಾಮಿ ಕುಟುಂಬದ ನೋವು ಇದ್ದೇ ಇರುತ್ತೆ ಬಿಡಿ ಎಂದು ಕಿಚ್ಚ ಸುಧಿಪ್​ ಹೇಳಿದ್ದಾರೆ.

ಸೆಪ್ಟೆಂಬರ್ 2ರಂದು ನಟ ಕಿಚ್ಚ ಅವರ ಬರ್ತ್​ ಡೇ. ಹೀಗಾಗಿ ಬೇರೆ ಬೇರೆ ಊರುಗಳಿಂದ ಬರುವ ಅಭಿಮಾನಿಗಳಿಗೆ ಸಂದೇಶವೊಂದನ್ನು ಕೊಟ್ಟಿದ್ದಾರೆ. ಸೆಪ್ಟೆಂಬರ್​ 2ರಂದು ಬೆಳ್ಳಗೆ 10 ಗಂಟೆಯಿಂದ 12ರವರಗೆ ಜಯನಗರದ MES ಗ್ರೌಂಡ್​ನಲ್ಲಿ ಹಮ್ಮಿಕೊಳ್ಳಲಾಗಿದೆ.

ಪ್ರತಿ ವರ್ಷದಂತೆ ಈ ಬಾರಿಯೂ ಕಿಚ್ಚ ಸುದೀಪ್​ ಅವರ ಹುಟ್ಟು ಹಬ್ಬವನ್ನು ಸೆಲೆಬ್ರೆಟ್ ಮಾಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಕಳೆದ ಬಾರಿಯ ಬರ್ತ್​ ಡೇ ಸೆಲೆಬ್ರೇಷನ್​ನಲ್ಲಿ ನಡೆದ ಗಲಾಟೆ ಬಗ್ಗೆ ಕಿಚ್ಚ ಸುದೀಪ್​ ಹೇಳಿಕೊಂಡಿದ್ದಾರೆ. ಕಳೆದ ಬಾರಿ ನಡೆದ ಗಲಾಟೆಯಂತೆ ಈ ಸಲ ನಡೆಯುವುದು ಬೇಡ ಎಂದಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments