Wednesday, April 30, 2025
35.6 C
Bengaluru
LIVE
ಮನೆರಾಜಕೀಯಬಿಜೆಪಿಯಲ್ಲಿ ಅತೃಪ್ತರ ಬಿಸಿ ತಾರಕಕ್ಕೇರಿದೆ ; ಮರಿತಿಬ್ಬೇಗೌಡ, ಬಚ್ಚೇಗೌಡ ನಂತರ ಮತ್ತೊಂದು ರಾಜಿನಾಮೆ!

ಬಿಜೆಪಿಯಲ್ಲಿ ಅತೃಪ್ತರ ಬಿಸಿ ತಾರಕಕ್ಕೇರಿದೆ ; ಮರಿತಿಬ್ಬೇಗೌಡ, ಬಚ್ಚೇಗೌಡ ನಂತರ ಮತ್ತೊಂದು ರಾಜಿನಾಮೆ!

BJP ವಿಧಾನ ಪರಿಷತ್‌ ಸದಸ್ಯ ತೇಜಸ್ವಿನಿ ಗೌಡ ಅವರು ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಜೊತೆಗೆ ಬಿಜೆಪಿಗೂ ವಿದಾಯ ಹೇಳಿದ್ದಾರೆ. ತೇಜಸ್ವಿನಿ ಅವರು ಕಾಂಗ್ರೆಸ್‌ ಸೇರುವ ನಿರೀಕ್ಷೆ ಇದೆ.

ನಿನ್ನೆಯಷ್ಟೇ ಜೆಡಿಎಸ್‌ ಎಂಎಲ್‌ಸಿ ಮರಿತಿಬ್ಬೇಗೌಡ ಅವರು ಪರಿಷತ್‌ ಸದಸ್ಯ ಸ್ಥಾನಕ್ಕೆ ಮತ್ತು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅವರು ಕೂಡಾ ಕಾಂಗ್ರೆಸ್‌ ಸೇರಲಿದ್ದಾರೆ. ಡಾ ತೇಜಸ್ವಿನಿಗೌಡ ಮತ್ತು ಮರಿತಿಬ್ಬೇಗೌಡ ಅವರ ಸದಸ್ಯತ್ವದ ಅವಧಿ ಇದೇ ಜೂನ್‌ನಲ್ಲಿ ಅಂತ್ಯವಾಗಲಿದೆ.

2004ರಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ತೇಜಸ್ವಿನಿ ಗೌಡ ಅವರು ಮಾಜಿ ಪ್ರಧಾನಿಗಳಾಗಿರುವ ಹೆಚ್ ಡಿ ದೇವೇಗೌಡರನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸೋಲಿಸಿದ್ದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments