Wednesday, April 30, 2025
34.5 C
Bengaluru
LIVE
ಮನೆಸುದ್ದಿನಂಜನಗೂಡಿನಲ್ಲಿ ದೊಡ್ಡ ಜಾತ್ರೆ ವೈಭವ

ನಂಜನಗೂಡಿನಲ್ಲಿ ದೊಡ್ಡ ಜಾತ್ರೆ ವೈಭವ

ನಂಜನಗೂಡು(ಮೈಸೂರು ಜಿಲ್ಲೆ): ನಂಜನಗೂಡು ಗೌತಮ ಪಂಚ ರಥೋತ್ಸವ ಶುಕ್ರವಾರ ನೆರವೇರಿದ್ದು, ಈ ವೇಳೆ ಶ್ರೀಕಂಠಸ್ವಾಮಿಯ ದರ್ಶನ ಪಡೆಯಲು ಸಾವಿರಾರು ಮಂದಿ ಭಕ್ತರು ಸೇರಿದ್ದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿ ಮುಗಿಲು ಮುಟ್ಟಿದ ಜಯಘೋಷದೊಂದಿಗೆ ಶ್ರೀಕಂಠಸ್ವಾಮಿಯ ಗೌತಮ ಪಂಚ ಮಹಾರಥೋತ್ಸವ ಬೆಳಗ್ಗೆ 6.30ಕ್ಕೆ ನೆರವೇರಿತು.

ನಂಜುಂಡೇಶ್ವರ ದೇವಾಲಯದ ರಥ ಬೀದಿಯಲ್ಲಿ ಜಮಾಯಿಸಿದ್ದ ಸಾವಿರಾರು ಭಕ್ತರು ಹೆಬ್ಬಾವಿನ ಗಾತ್ರದ ರಥದ ಮಿಣಿಯನ್ನು ಎಳೆದು ಹರಕೆ ಸಲ್ಲಿಸಿದರು. ‘ಬಂದಾನಪ್ಪೋ ಬಂದಾನೋ… ನಂಜುಂಡಪ್ಪ ಬಂದಾನೋ… ಎಂದು ದೊಡ್ಡರಥವನ್ನು ಎಳೆಯುತ್ತಿದ್ದರೆ ನೆರೆದ ಭಕ್ತಾದಿಗಳು ಹಣ್ಣು ಮತ್ತು ತಮ್ಮ ಇಚ್ಛಾನುಸಾರ ದೇವರಿಗೆ ಎಸೆದು ನಮಿಸಿದರು.

ಶ್ರೀಕಂಠಸ್ವಾಮಿಯ 110 ಟನ್ ತೂಕ ಹಾಗೂ 90 ಅಡಿ ಎತ್ತರದ ಗೌತಮ ರಥ, ಪಾರ್ವತಿ ಅಮ್ಮನವರು, ಗಣೇಶ, ಸುಬ್ರಹ್ಮಣ್ಯ ಹಾಗೂ ಚಂಡಿಕೇಶ್ವರ ಸ್ವಾಮಿ ಸೇರಿದಂತೆ 5 ರಥಗಳು ಒಂದೂವರೆ ಕಿಲೋ ಮೀಟರ್ ಉದ್ದದ ರಥಬೀದಿಯಲ್ಲಿ ಸಾಗಿದವು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments