ರಾಜ್ಯಸುದ್ದಿ

ವ್ಯಾಪಾರಸ್ಥರಿಂದ ಸ್ವಯಂ ಘೋಷಿತ ಬಂದ್ !!

ಕಲಬುರಗಿ : ಭೀಮಾ ನದಿಗೆ ನೀರು ಬಿಡುವಂತೆ ಜೆಡಿಎಸ್ ಮುಖಂಡ ಶಿವಕುಮಾರ ನಾಟೀಕರ್ ಹಾಗೂ ವ್ಯಾಪಾರಸ್ಥರಿಂದ ಉಪವಾಸ ಸತ್ಯಾಗ್ರಹ ಐದನೇ ದಿನಕ್ಕೆ ಮುಂದುವರೆದಿದೆ. ಭೀಮಾ ನದಿಗೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ನೀರು ಬಿಡುವಂತೆ ಒತ್ತಾಯಿಸಿ ಬಂದ್​ ಮಾಡಲಾಗಿದೆ.

ಜೆಡಿಎಸ್​ ಮುಖಂಡ ಶಿವಕುಮಾರ್​ ನಾಟಿಕರ್​ ಹಾಗೂ ವ್ಯಾಪಾರಸ್ಥರು ಸೇರಿ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆಯು ಐದನೇ ದಿನಕ್ಕೆ ಮುಂದುವರೆದಿದೆ. ಸತ್ಯಾಗ್ರಹಕ್ಕೆ ಬೆಂಬಲಿಸಿ ಇಂದು ಅಫಜಲಪೂರ ವ್ಯಾಪಾರಸ್ಥರಿಂದ ಸ್ವಯಂ ಘೋಷಿಸಿತ ಬಂದ್​ ಮಾಡಲಾಗಿದೆ.

ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದೆ. ಭೀಮಾ ನದಿ ಸಂಪೂರ್ಣ ಬತ್ತಿದ್ದರಿಂದ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಭೀಮಾ ನದಿ ಸಂಪೂರ್ಣ ಬರಿದಾಗಿರುವುದರಿಂದ ಅಫಜಲಪೂರ ,ಜೇವರ್ಗಿ ತಾಲೂಕಿನಲ್ಲಿ ನೀರಿನ ಸಮಸ್ಯೆ ಉಂಟಾಗಿದೆ.

Comments (0)

Your email address will not be published. Required fields are marked *

Back to top button