Wednesday, April 30, 2025
35.6 C
Bengaluru
LIVE
ಮನೆUncategorizedರಂಗಕರ್ಮಿ ಶಶಿಧರಗೆ ಪುತಿನ ಕಾವ್ಯ, ನಾಟಕ, ಪ್ರಬಂಧ ಪುರಸ್ಕಾರ

ರಂಗಕರ್ಮಿ ಶಶಿಧರಗೆ ಪುತಿನ ಕಾವ್ಯ, ನಾಟಕ, ಪ್ರಬಂಧ ಪುರಸ್ಕಾರ

ಬೆಂಗಳೂರು: ಡಾ. ಪುತಿನ ಕಾವ್ಯ ನಾಟಕ ಪ್ರಬಂಧ ಪುರಸ್ಕಾರವನ್ನು ಹಿರಿಯ ರಂಗಕರ್ಮಿ, ನಾಟಕಕಾರ ಮತ್ತು ರಂಗ ನಿರ್ದೇಶಕ ಶಶಿಧರ ಭಾರಿಘಾಟ್ ಅವರಿಗೆ ಪ್ರದಾನ ಮಾಡಲಾಯಿತು.
ಸಹಗಮನ, ಸಾಯುವನೇ ಚಿರಂಜೀವಿ ಕೃತಿಗೆ ಈ ಬಾರಿಯ ಪ್ರಶಸ್ತಿ ಸಿಕ್ಕಿದೆ. ಪುತಿನ ಪುರಸ್ಕಾರವು₹ 25,ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಹೊಂದಿದ್ದು ಡಾ. ಪುತಿನ ಟ್ರಸ್ಟ್ ಅಧ್ಯಕ್ಷ ಡಾ. ಎಚ್. ಎಸ್ ವೆಂಕಟೇಶ ಮೂರ್ತಿ ಪ್ರಶಸ್ತಿ ಪ್ರದಾನ ಮಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ಕೇಂದ್ರ ಸಂಗೀತ ಮತ್ತು ನೃತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಪಿ. ರಮಾ ಪುತಿನ ಅವರ ಕೃತಿಗಳ ಗಾಯನ ನಡೆಸಿದರು. ರಂಜನಿ ಕೀರ್ತಿ ಕಾರ್ಯಕ್ರಮ ನಿರೂಪಣೆ ಮಾಡಿದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments