ಬಳ್ಳಾರಿ : ಗಣಿನಾಡು ಬಳ್ಳಾರಿಯಿಂದ ಸ್ಪರ್ಧಿಸಲು ಶಾಸಕ ತುಕಾರಾಂ ಅಸ್ತು ಎಂದಿದ್ದಾರೆ. ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ತುಕಾರಾಂ ಒಪ್ಪಿಗೆಯನ್ನೂ ಸಹ ನೀಡಿದ್ದಾರೆ.
ಇತ್ತೀಚೆಗೆ ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತುಕಾರಾಂ ಒಪ್ಪಿಗೆಯನ್ನ ಸೂಚಿಸಿದ್ದಾರೆ. ಸಿಎಂ, ಸಚಿವ ನಾಗೇಂದ್ರ, ಬಿ.ಜಡ್ . ಜಮೀರ್, ಸಂತೋಷ್ ಲಾಡ್ ಸಭೆಯಲ್ಲಿ ಭಾಗಿಯಾಗಿದ್ದರು. ಸತತ ನಾಲ್ಕು ಬಾರಿ ಸಂಡೂರಿನಿಂದ ಸ್ಪರ್ಧಿಸಿ ತುಕರಾಂ ಶಾಸಕರಾಗಿದ್ದರು. ತಮ್ಮ ಪುತ್ರಿಗೆ ಎಂಪಿ ಟಿಕೇಟನ್ನ ಸಹ ಶಾಸಕ ತುಕಾರಾಂ ಕೇಳಿದ್ದರು.