ವಿಜಯಪುರ : ಅಯೋಧ್ಯ ರಾಮಮಂದಿರ ಉದ್ಘಾಟನೆ ಬಳಿಕ ಅಯೋಧ್ಯೆ ಹೋಗುವೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯರಿಗೆ ಅಷ್ಟಾದರು ಶ್ರೀರಾಮಚಂದ್ರ ಸದ್ಬುದ್ಧಿ ನೀಡಿದ್ದಾನೆ. ಸಿದ್ದರಾಮಯ್ಯ ರಾಮ ಮಂದಿರಕ್ಕೆ ಹೋಗಿ ಬರಲಿ. ಸಿದ್ದರಾಮಯ್ಯ ರಾಮನ ಭಕ್ತರಾಗ್ತಾರೆ. ಬಳಿಕ ಸಿದ್ದರಾಮಯ್ಯ ನಾನು ರಾಮನ ಭಕ್ತ ಎಂದು ಘೋಷಣೆ ಮಾಡಿದರು ಮಾಡಬಹುದು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ಸಿಎಂ ವಿರುದ್ಧ ಅನಂತಕುಮಾರ್ ಹೆಗಡೆ ಏಕವಚನ ಪದ ಬಳಕೆ ವಿಚಾರವಾಗಿ ಮಾತನಾಡಿದ್ದು, ಆ ರೀತಿ ಮಾತನಾಡೋದು ತಮ್ಮ ಪಕ್ಷದ ಸಂಸ್ಕೃತಿ ಅಲ್ಲ. ನಮ್ಮ ಪ್ರಧಾನಿಗಳು ಹಾಗೂ ಗೃಹ ಸಚಿವರು ಆ ರೀತಿ ಮಾತನಾಡಲ್ಲ. ಸಂಸ್ಕೃತಿಗಾಗಿಯೇ ಬಿಜೆಪಿ ಹೋರಾಟ ಮಾಡುತ್ತದೆ. ಕಾಂಗ್ರೆಸ್ಗೆ ಸಂಸ್ಕೃತಿ ಇಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಹೈಕಮಾಂಡ್ ಹೇಳಿದ್ರೆ ರಾಮ ಮಂದಿರಕ್ಕೆ ಹೋಗ್ತೀನಿ ಎನ್ನೋದು ನಾಚಿಕೆಗೇಡಿನ ಹೇಳಿಕೆ. ನಾಳೆ ಸಾಯಬೇಕಾದ್ರೆ ಸೋನಿಯಾ ಗಾಂಧಿ ಪರ್ಮಿಷನ್ ಕೇಳ್ತಾರಾ? ಇದು ಕಾಂಗ್ರೆಸ್ ಗುಲಾಮಗಿರಿಯ ಸಂಕೇತ ಎಂದರು.
ಗಾಂಧಿ ಮನೆತನಕ್ಕೆ ಸಂತರ ಶಾಪವಿದೆ.
ಗಾಂಧಿ ಮನೆತನಕ್ಕೆ ಸಂತರ ಶಾಪ ವಿಚಾರವಾಗಿ ಮಾತನಾಡಿದ ಅವರು, ಗಾಂಧಿ ಕುಟುಂಬಕ್ಕೆ ಸಂತರ ಶಾಪ ಇರುವುದು ನಿಜ. ರಾಹುಲ್ ಗಾಂಧಿಗೂ ಶಾಪವಿದೆ. ಶಾಪದಿಂದಲೇ ರಾಹುಲ್ ಗಾಂಧಿಗೆ ಇನ್ನೂ ಮದುವೆ ಆಗಿಲ್ಲ. ಶಾಪದಿಂದ ಎಲ್ಲಿ ದೇಶ ಬಿಟ್ಟು ಹೋಗುತ್ತಾರೋ ಗೊತ್ತಿಲ್ಲ. ಕಾಲ ಕ್ರಮೇಣವಾಗಿ ಗಾಂಧಿ ಕುಟುಂಬವನ್ನು ನಾಶ ಮಾಡುತ್ತಾ ಹೋಗುತ್ತದೆ.