Tuesday, June 24, 2025
25.9 C
Bengaluru
Google search engine
LIVE
ಮನೆರಾಜಕೀಯಕಾಂಗ್ರೆಸ್ ನಾಯಕರಿಗೆ ಯತ್ನಾಳ್ ಟಾಂಗ್..!

ಕಾಂಗ್ರೆಸ್ ನಾಯಕರಿಗೆ ಯತ್ನಾಳ್ ಟಾಂಗ್..!

ವಿಜಯಪುರ :  ಅಯೋಧ್ಯ ರಾಮಮಂದಿರ ಉದ್ಘಾಟನೆ ಬಳಿಕ ಅಯೋಧ್ಯೆ ಹೋಗುವೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯರಿಗೆ ಅಷ್ಟಾದರು ಶ್ರೀರಾಮಚಂದ್ರ ಸದ್ಬುದ್ಧಿ ನೀಡಿದ್ದಾನೆ. ಸಿದ್ದರಾಮಯ್ಯ ರಾಮ ಮಂದಿರಕ್ಕೆ ಹೋಗಿ ಬರಲಿ. ಸಿದ್ದರಾಮಯ್ಯ ರಾಮನ ಭಕ್ತರಾಗ್ತಾರೆ. ಬಳಿಕ ಸಿದ್ದರಾಮಯ್ಯ ನಾನು ರಾಮನ ಭಕ್ತ ಎಂದು ಘೋಷಣೆ ಮಾಡಿದರು ಮಾಡಬಹುದು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಹೇಳಿದರು.

ಸಿಎಂ ವಿರುದ್ಧ ಅನಂತಕುಮಾರ್​ ಹೆಗಡೆ ಏಕವಚನ ಪದ ಬಳಕೆ ವಿಚಾರವಾಗಿ ಮಾತನಾಡಿದ್ದು,  ಆ ರೀತಿ ಮಾತನಾಡೋದು ತಮ್ಮ ಪಕ್ಷದ ಸಂಸ್ಕೃತಿ ಅಲ್ಲ. ನಮ್ಮ ಪ್ರಧಾನಿಗಳು ಹಾಗೂ ಗೃಹ ಸಚಿವರು ಆ ರೀತಿ ಮಾತನಾಡಲ್ಲ. ಸಂಸ್ಕೃತಿಗಾಗಿಯೇ ಬಿಜೆಪಿ ಹೋರಾಟ ಮಾಡುತ್ತದೆ. ಕಾಂಗ್ರೆಸ್​​ಗೆ ಸಂಸ್ಕೃತಿ ಇಲ್ಲ ಎಂದು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

ಹೈಕಮಾಂಡ್​​ ಹೇಳಿದ್ರೆ ರಾಮ ಮಂದಿರಕ್ಕೆ ಹೋಗ್ತೀನಿ ಎನ್ನೋದು ನಾಚಿಕೆಗೇಡಿನ ಹೇಳಿಕೆ. ನಾಳೆ ಸಾಯಬೇಕಾದ್ರೆ ಸೋನಿಯಾ ಗಾಂಧಿ ಪರ್ಮಿಷನ್​ ಕೇಳ್ತಾರಾ? ಇದು ಕಾಂಗ್ರೆಸ್​​ ಗುಲಾಮಗಿರಿಯ ಸಂಕೇತ ಎಂದರು.

ಗಾಂಧಿ ಮನೆತನಕ್ಕೆ ಸಂತರ ಶಾಪವಿದೆ.

ಗಾಂಧಿ ಮನೆತನಕ್ಕೆ ಸಂತರ ಶಾಪ ವಿಚಾರವಾಗಿ ಮಾತನಾಡಿದ ಅವರು, ಗಾಂಧಿ ಕುಟುಂಬಕ್ಕೆ ಸಂತರ ಶಾಪ ಇರುವುದು ನಿಜ. ರಾಹುಲ್​ ಗಾಂಧಿಗೂ ಶಾಪವಿದೆ. ಶಾಪದಿಂದಲೇ ರಾಹುಲ್​ ಗಾಂಧಿಗೆ ಇನ್ನೂ ಮದುವೆ ಆಗಿಲ್ಲ. ಶಾಪದಿಂದ ಎಲ್ಲಿ ದೇಶ ಬಿಟ್ಟು ಹೋಗುತ್ತಾರೋ ಗೊತ್ತಿಲ್ಲ. ಕಾಲ ಕ್ರಮೇಣವಾಗಿ ಗಾಂಧಿ ಕುಟುಂಬವನ್ನು ನಾಶ ಮಾಡುತ್ತಾ ಹೋಗುತ್ತದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments