Wednesday, June 25, 2025
26.8 C
Bengaluru
Google search engine
LIVE
ಮನೆಕ್ರೈಂ ಸ್ಟೋರಿಠಾಣೆಯಿಂದ ಎಸ್ಕೇಪ್ ಆದ ಖತರ್ನಾಕ್ ಕಳ್ಳ : PSI ಸೇರಿ ಐವರು ಪೊಲೀಸ್ ಸಿಬ್ಬಂದಿ ಅಮಾನತು

ಠಾಣೆಯಿಂದ ಎಸ್ಕೇಪ್ ಆದ ಖತರ್ನಾಕ್ ಕಳ್ಳ : PSI ಸೇರಿ ಐವರು ಪೊಲೀಸ್ ಸಿಬ್ಬಂದಿ ಅಮಾನತು

ತುಮಕೂರು: ಗುಬ್ಬಿ ಪೊಲೀಸ್​ ಠಾಣೆಯಿಂದ ಕಳ್ಳನೋರ್ವ ಪರಾರಿಯಾದ ಹಿನ್ನೆಲೆಯಲ್ಲಿ ಪಿಎಸ್ಐ ಸೇರಿ ಐವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಈ ಸಂಬಂಧ ತುಮಕೂರು ಎಸ್​ಪಿ ಅಶೋಕ್ ಕೆ.ವಿ ಅವರು ಆದೇಶ ಹೊರಡಿಸಿದ್ದಾರೆ.


ಗುಬ್ಬಿ ಪೊಲೀಸ್​ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಿಎಸ್ಐ ದೇವಿಕಾ, ಮೂವರು ಹೆಡ್ ಕಾನ್​ಸ್ಟೇಬಲ್ಸ್​, ಓರ್ವ ಕಾನ್​ಸ್ಟೇಬಲ್​​ ಸೇರಿ ಒಟ್ಟು ಐವರು ಸಸ್ಪೆಂಡ್ ಆಗಿದ್ದಾರೆ. ಡಕಾಯಿತಿ ಪ್ರಕರಣದಲ್ಲಿ ಬೆಂಗಳೂರಿನಲ್ಲಿ ಬಂಧಿಸಲಾಗಿದ್ದ ಆರೋಪಿ ಸೈಯದ್​ನನ್ನು ಗುಬ್ಬಿ ಠಾಣೆಗೆ ಸಿಆರ್ ನಂ.13/2024ರ ಪ್ರಕರಣದಲ್ಲಿ ಪೊಲೀಸರು ಕರೆತಂದಿದ್ದರು. ಆದ್ರೆ ಶುಕ್ರವಾರ ಬೆಳಗಿನ ಜಾವ ಠಾಣೆಯಿಂದ ಆರೋಪಿ ಓಡಿ ಹೋಗಿದ್ದಾನೆ. ಈ ವೇಳೆ ಪೊಲೀಸರು ಕರ್ತವ್ಯ ಲೋಪವಾಗಿದೆ ಎಂದು ಐವರನ್ನು ಸಸ್ಪೆಂಡ್ ಮಾಡಲಾಗಿದೆ.

ಎಸ್ಕೇಪ್ ಆಗಿರು ಆರೋಪಿ ಸೈಯದ್ ಗದಗನ ಹುಲ್ಲೂರು ಗ್ರಾಮದ ನಿವಾಸಿಯಾಗಿದ್ದಾನೆ. ಈತ ಡ್ಯಾನ್ಸ್ ಕೋರಿಯಾಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದನು. ಸದ್ಯ ನಾಪತ್ತೆಯಾದ ಆರೋಪಿಗಾಗಿ ಪೊಲೀಸರು 3 ತಂಡ ರಚಿಸಿಕೊಂಡು ಹುಡುಕಾಟ ನಡೆಸುತ್ತಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments