ಕೋಲಾರ : ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ವಿಚಾರವಾಗಿ ಕೋಲಾರದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದು, ಈ ವಿಚಾರವಾಗಿ ನಮಗೆಲ್ಲರಿಗೂ ನೋವಿದೆ. ಅವರು ಯಾರೇ ಆಗಲಿ ಅವರ ವಿರುದ್ದ ಸರ್ಕಾರ ಕ್ರಮಕೈಗೊಳ್ಳುತ್ತದೆ. ಯಾರೋ ಒಬ್ಬರು ಸದನದಲ್ಲಿ ಬಂದು ಪಾಕಿಸ್ತಾನ ಎಂದು ಕೂಗಿದರೆ ಸಹ ಸಹಿಸುವುದಕ್ಕೆ ಆಗುವುದಿಲ್ಲ ಈಗಾಗಲೇ ಅವರು ಬಂಧನಕ್ಕೆ ಒಳಗಾಗಿದ್ದಾರೆ ಅವರ ಮೇಲೆ ಕಾನೂನು ಕ್ರಮ ಜಾರಿಯಾಗುತ್ತದೆ.
ನಮಗೆಲ್ಲರಿಗೂ ಈ ವಿಚಾರ ಬಹಳ ನೋವು ತಂದಿದೆ ಅವರಿಗೆ ಕಾನೂನಲ್ಲಿ ಏನು ಶಿಕ್ಷೆ ಆಗಬೇಕು ಅದನ್ನು ನೀಡಲಾಗುವುದು, ಆದರೆ ಇದನ್ನ ರಾಜಕೀಯವಾಗಿ ಬಿಜೆಪಿ ಅವರು ಬಳಸಿಕೊಳ್ಳುತ್ತಿದ್ದಾರೆ ,ಈ ಘಟನೆಯನ್ನು ಯಾರೂ ಸಮರ್ಥಿಸಿಕೊಂಡಿಲ್ಲ, ಸಿಎಂ ಅವರು ಸಹ FSL ವರದಿ ಬಂದ ನಂತರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ರು ಈ ರೀತಿ ನಮ್ಮಲ್ಲಿ ಸಮಾರು ಘಟನೆಗಳು ನಡೆದಾಗ FSL ವರದಿಯಲ್ಲಿ ಆ ರೀತಿ ಹೇಳಿಲ್ಲ ಎಂದು ಬಂದಿತ್ತು ಹೀಗಾಗಿ ಸಾಕ್ಷಿ ಬೇಕಾಗುತ್ತದೆ ಎಂದು ಈ ವಿಚಾರವಾಗಿ FSL ವರದಿ ಬಂದಿದೆ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದ್ದರು ಇವನ್ಯಾರೋ ಒಬ್ಬ ಮಾಡಿದ್ದಕ್ಕೆ ಇಡೀ ಆ ಸಮುದಾಯಕ್ಕೆ ಕೆಟ್ಟ ಹೆಸರು ಬಂದ ರೀತಿ ಆಗಿದೆ ಎಂದು ಹೇಳಿಕೆ ನೀಡಿದ್ದಾರೆ.
ಮಂಡ್ಯ ಲೋಕಸಭಾ ಟಿಕೇಟ್ ಹಣವಂತರಿಗೆ ಮಾತ್ರ ಕೊಡ್ತಾರೆ ಎನ್ನುವ ಆರೋಪದ ವಿಚಾರವಾಗಿ ಮಾತನಾಡಿ, ಟಿಕೇಟ್ ಸಿಗದದ್ದಕ್ಕೆ ಅವರಿಗೇನು ನೋವಾಗ ಏನೋ ಹೇಳಿ ಹೋಗ್ತಾರೆ ಅದೆಲ್ಲಾ ದೊಡ್ಡ ವಿಚಾರ ಅಲ್ಲ, ಯಾರೋ ಹೇಳಿಕೆ ಕೊಟ್ಟಾಕ್ಷಣ ಅದೆಕ್ಕೆಲ್ಲಾ ಪ್ರತಿಕ್ರಿಯೆ ಕೊಡಲಾಗುವುದಿಲ್ಲ ಇನ್ನೂ ಟಿಕೇಟ್ ಯಾರಿಗೆ ಅಂತ ತೀರ್ಮಾನವೇ ಆಗಿಲ್ಲ ಎಂದಿದ್ದಾರೆ.
ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ವಿಚಾರವಾಗಿ ಮಾತನಾಡಿ ಭಯದ ವಾತಾವರಣ ನಿರ್ಮಾಣ ಮಾಡುವುದಕ್ಕೆ ಈ ರೀತಿಯ ಸಂಚು ರೂಪಿಸುತ್ತಿದೆ ಈ ಕುರಿತು ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ ಮೊನ್ನೆ ರಾಮೇಶ್ವರ ಕೆಫೆ ಸೇರಿದಂತೆ ಈ ವಿಚಾರ ರಾಜ್ಯದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡ್ತಿದೆ ನಮ್ಮ ಜನರಿಗೆ ಯಾವುದೋ ಒಂದು ಸಂಘಟನೆ ಭಯದ ವಾತಾವರಣ ಸೃಷ್ಟಿ ಮಾಡ್ತಿದೆ ಸರ್ಕಾರ, ಪೋಲೀಸ್ ಇಲಾಖೆ ಸಮರ್ಥವಾಗಿದೆ ಇದೆನ್ನೆಲ್ಲಾ ಎದುರಿಸುವ ಶಕ್ತಿ ನಮಗೆ ಇದೆ ಎಂದು ತಿಳಿಸಿದ್ದಾರೆ.